More

    ಕಡಿಮೆ ವೆಚ್ಚದಲ್ಲಿ ಮನೆಗಳಿಗೆ ನೀರು: ಜಿಪಂ ಸಿಇಒ ಶಾಂತಾ ಎಲ್.ಹುಲ್ಮನಿ ಹೇಳಿಕೆ

    ಮಂಡ್ಯ: ಜಲಜೀವನ್ ಮಿಷನ್ ಯೋಜನೆಯಡಿ ಪ್ರತಿ ಮನೆಗೆ ನೀರು ನೀಡುವ ಕಾಮಗಾರಿಗಳನ್ನು ಸರ್ಕಾರದ ನಿರ್ದೇಶನದಂತೆ ಅನುಷ್ಠಾನಗೊಳಿಸಿ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಶಾಂತಾ ಎಲ್.ಹುಲ್ಮನಿ ತಿಳಿಸಿದರು.
    ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಮಿನಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ನೀರು ಮತ್ತು ನೈರ್ಮಲ್ಯ ಮಿಷನ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶ್ರೀರಂಗಪಟ್ಟಣ ತಾಲೂಕಿನ 43 ಜನವಸತಿ, ಮಂಡ್ಯ 82, ಪಾಂಡವಪುರದಲ್ಲಿ 49, ಮಳವಳ್ಳಿಯಲ್ಲಿ 25 ಒಟ್ಟು 199 ಜನವಸತಿಗಳಿಗೆ ನೀರು ಒದಗಿಸಲು ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
    ಪ್ರತಿ ಕುಟುಂಬಕ್ಕೆ ನಲ್ಲಿ ಒದಗಿಸಲು ಯೋಜನಾ ವೆಚ್ಚ 25 ಸಾವಿರ ರೂ ಮೀರಿದರೆ ಅವುಗಳನ್ನು ಮೊತ್ತಮ್ಮೆ ಪರಿಶೀಲಿಸಿ ವರದಿ ಪಡೆಯಬೇಕು. ಹತ್ತಕ್ಕಿಂತ ಕಡಿಮೆ ಜನವಸತಿ ಇರುವ ಸ್ಥಳಗಳಲ್ಲಿ ಮನೆ-ಮನೆಗೆ ನೀರು ಒದಗಿಸಲು ಮಂಡಿಸಿರುವ ಯೋಜನಾ ವರದಿಗಳಿಗೆ ನಿಗದಿಯಾಗಿರುವ ಅನುದಾನವನ್ನು ಗಮನಿಸಿದರೆ ಇದಕ್ಕೆ ಬೇರೆ ಯೋಜನೆ ನೀಡಿ ಕಡಿಮೆ ವೆಚ್ಚದಲ್ಲಿ ಮನೆಗೆ ನೀರು ಒದಗಿಸಬಹುದು. ಇದರಿಂದ ಅನುದಾನ ವ್ಯರ್ಥವಾಗುವುದಿಲ್ಲ. ಈ ಬಗ್ಗೆ ಚಿಂತಿಸಬೇಕಿದೆ ಎಂದರು.
    ಈ ಯೋಜನೆಯಡಿ ಬಹಳಷ್ಟು ಕಾಮಗಾರಿಯ ವ್ಯಾಪ್ತಿ ಗ್ರಾಮದ ಒಳಭಾಗದಲ್ಲೇ ಇರುತ್ತದೆ. ಓವರ್ ಹೆಡ್ ಟ್ಯಾಂಕ್‌ಗಳ ನಿರ್ಮಾಣ ಮಾಡುವಾಗ ಅರಣ್ಯ ಇಲಾಖೆಯ ವ್ಯಾಪ್ತಿಗೆ ಬರುವುದೆಂದು ಪರಿಶೀಲಿಸಿ ಅವರಿಂದ ವರದಿ ಪಡೆದುಕೊಳ್ಳಿ. ಕಾಮಗಾರಿ ನಡೆಯುವ ಸಂದರ್ಭದಲ್ಲಿ ತೊಂದರೆಯಾಗುವುದು ಬೇಡ. ಜಲ ಜೀವನ್ ಮಿಷನ್ ಯೋಜನೆಯಡಿ ನೀರು ಒದಗಿಸಲು ಸುಸ್ಥಿರ ಮೂಲಗಳನ್ನು ಗುರುತಿಸಲಾಗುವುದು. ಇದರೊಂದಿಗೆ ಸರ್ಕಾರದ ಮಾರ್ಗಸೂಚಿಯನ್ವಯ ಅವಶ್ಯಕತೆಯನ್ನು ಗುರುತಿಸಿ ಅದರ ಅನುಸಾರ ಬೋರ್‌ವೆಲ್ಗಳ ವ್ಯವಸ್ಥೆ ಮಾಡಿ ಎಂದರು.
    ಅಂತೆಯೇ ಯೋಜನೆಯಡಿ ಶಾಲಾ, ಕಾಲೇಜು, ಅಂಗನವಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ನಲ್ಲಿ ವ್ಯವಸ್ಥೆ ಮಾಡಲಾಗುತ್ತಿದೆ. ಮಾರ್ಗಸೂಚಿಯಲ್ಲಿ ಸರ್ಕಾರಿ ಕಟ್ಟಡಗಳಿಗೆ ಅವಕಾಶವಿದ್ದಲ್ಲಿ, ಗ್ರಾಮ ಪಂಚಾಯಿತಿ ಕಚೇರಿ, ರೈತ ಸಂಪರ್ಕ ಕೇಂದ್ರಗಳಿಗೂ ನಲ್ಲಿ ವ್ಯವಸ್ಥೆ ಕಲ್ಪಿಸುವಂತೆ ತಿಳಿಸಿದರು
    ಸಭೆಯಲ್ಲಿ ಜಿಪಂ ಯೋಜನಾಧಿಕಾರಿ ಧನರಾಜ್, ಕಾರ್ಯಪಾಲಕ ಇಂಜಿನಿಯರ್‌ಗಳಾದ ತಮ್ಮಣ್ಣ, ನಾಗರಾಜು, ಜಂಟಿ ಕೃಷಿ ನಿರ್ದೇಶಕ ವಿ.ಆರ್.ಅಶೋಕ್, ಡಿಡಿಪಿಐ ಜವರೇಗೌಡ, ಜಿಲ್ಲಾ ವಾರ್ತಾಧಿಕಾರಿ ಎಸ್.ಎಚ್.ನಿರ್ಮಲಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts