ಪುನೀತ್ ರಾಜಕುಮಾರ್ ಅಭಿನಯದ ‘ಯುವರತ್ನ’ ಚಿತ್ರದ ಏನಾದರೂ ಅಪ್ಡೇಟ್ಗಳನ್ನು ಕೊಡಿ ಎಂದು ಪುನೀತ್ ಅವರ ಅಭಿಮಾನಿಗಳು ಬಹಳ ದಿನಗಳಿಂದ ಕೇಳುತ್ತಲೇ ಬಂದಿದ್ದಾರೆ. ಅದಕ್ಕೆ ಸರಿಯಾಗಿ ಚಿತ್ರದ ಇನ್ನೊಂದು ಪೋಸ್ಟರ್ನ್ನು ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಬಿಡುಗಡೆ ಮಾಡಲಾಗಿದೆ.
ಇದನ್ನೂ ಓದಿ: ಬಾಲಿವುಡ್ ನಟನ ಪುತ್ರಿಗೇ ಬ್ಲ್ಯಾಕ್ಮೇಲ್ ಮಾಡಲು ಹೋದ, ಪೊಲೀಸರಿಗೆ ಸಿಕ್ಕಿಬಿದ್ದ
ಪುನೀತ್ ಸಖತ್ ಸ್ಟೆಪ್ ಹಾಕುತ್ತಿರುವ ಈ ಪೋಸ್ಟರ್ನಲ್ಲಿರುವ ಸಾಲುಗಳು ಸಖತ್ ಕ್ಯಾಚಿಯಾಗಿದ್ದು, ಪುನೀತ್ ಅವರ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ‘ನಾವ್ ಯಾವತ್ತೂ ಬೇರೆಯವರ ರೂಟಲ್ಲಿ ಟ್ರಾವಲ್ ಆಗಲ್ಲ. ನಮ್ದೇ ದಾರಿ – ನಮ್ದೇ ಸವಾರಿ … ಪಕ್ಕದಲ್ಲಿ ಫೆರಾರಿ ಹೋದ್ರೂ ತಲೆ ಕೆಡಿಸಿಕೊಳ್ಳಲ್ಲ’ ಎಂಬ ಸಾಲುಗಳಿರುವ ಈ ಪೋಸ್ಟರ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
‘ಯುವರತ್ನ’ ಚಿತ್ರದ ಚಿತ್ರೀಕರಣ ಬಹುತೇಕ ಮುಗಿದಿದ್ದು, ಇನ್ನು ಎರಡು ಹಾಡುಗಳು ಮಾತ್ರ ಬಾಕಿ ಇವೆ. ಈ ಹಾಡುಗಳನ್ನು ಮೊದಲು ಫಾರಿನ್ನಲ್ಲಿ ಚಿತ್ರೀಕರಿಸಬೇಕು ಎಂದು ಚಿತ್ರತಂಡ ಪ್ಲಾನ್ ಮಾಡಿಕೊಂಡಿತ್ತು. ಆದರೆ, ಅಷ್ಟರಲ್ಲಿ ಕರೊನಾ ಹಾವಳಿ ಜಾಸ್ತಿಯಾದ ಕಾರಣ, ಚಿತ್ರೀಕರಣವನ್ನು ಭಾರತದಲ್ಲೇ ಮಾಡುವುದಕ್ಕೆ ಚಿತ್ರತಂಡ ಯೋಚಿಸಿದೆ. ಒಂದು ಹಾಡನ್ನು ಗೋವಾದಲ್ಲಿ ಚಿತ್ರೀಕರಿಸಲಾಗುವುದು ಎಂದು ಈ ಹಿಂದೆ ಸಂತೋಷ್ ಆನಂದರಾಮ್ ಹೇಳಿಕೊಂಡಿದ್ದರು. ಇನ್ನೊಂದು ಹಾಡಿನ ಚಿತ್ರೀಕರಣದ ಲೊಕೇಶನ್ ಇನ್ನಷ್ಟೇ ಫೈನಲ್ ಆಗಬೇಕಿದೆ.
‘ಯುವರತ್ನ’ ಚಿತ್ರಕ್ಕೆ ತೆಲುಗಿನ ಜನಪ್ರಿಯ ಸಂಗೀತ ನಿರ್ದೇಶಕರಾದ ಎಸ್.ಎಸ್. ತಮನ್ ಸಂಗೀತ ಸಂಯೋಜಿಸುತ್ತಿದ್ದು, ಕೆಲಸಗಳು ಪ್ರಗತಿಯಲ್ಲಿದೆ. ಇಷ್ಟರಲ್ಲಾಗಲೇ ಹಾಡುಗಳು ಬಿಡುಗಡೆಯಾಗಬೇಕಿದ್ದು, ಕರೊನಾ ಹಾವಳಿಯಿಂದ ಎಲ್ಲವೂ ತಡವಾಗುತ್ತಿದೆ ಎಂದು ತಮನ್ ಅವರೇ ಇತ್ತೀಚೆಗೊಮ್ಮೆ ಟ್ವೀಟ್ ಮಾಡಿಕೊಂಡಿದ್ದರು.
ಇದನ್ನೂ ಓದಿ: ಸರಳ ಪೂಜೆಗೆ ತಾರೆಯರ ಸಲಹೆ
ಹೊಂಬಾಳೆ ಫಿಲಂಸ್ನಡಿ ವಿಜಯಕುಮಾರ್ ಕಿರಗಂದೂರು ನಿರ್ಮಿಸುತ್ತಿರುವ ಈ ಚಿತ್ರನ್ನು ಸಂತೋಷ್ ಆನಂದರಾಂ ನಿರ್ದೇಶಿಸುತ್ತಿದ್ದಾರೆ. ಪುನೀತ್ ಜತೆಗೆ ಸಾಯೇಷಾ, ದಿಗಂತ್, ಧನಂಜಯ್ ಸೇರಿದಂತೆ ಹಲವರು ಅಭಿನಯಿಸಿದ್ದು, ಈ ವರ್ಷದ ಕೊನೆ ಅಥವಾ ಮುಂದಿನ ವರ್ಷ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ.
Photos: ವರಮಹಾಲಕ್ಷ್ಮೀ ಹಬ್ಬಕ್ಕೆ ಎಷ್ಟೆಲ್ಲಾ ಚಿತ್ರಗಳ ಪೋಸ್ಟರ್ಗಳು ಬಂದಿವೆ ನೋಡಿ …