ಬೆಂಗಳೂರು: ಪ್ರೇಮ ವೈಫಲ್ಯದ ಕಾರಣಕ್ಕೆ ಯುವಕನೊಬ್ಬ ಹದಿಮೂರನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರಾಜಧಾನಿ ಬೆಂಗಳೂರಿನಲ್ಲಿ ಇಂಥದ್ದೊಂದು ದುರಂತ ಸಂಭವಿಸಿದೆ.
ರಿತೀಕ್ (21) ಎಂಬ ಯುವಕ ಆತ್ಮಹತ್ಯೆ ಮಾಡಿಕೊಂಡವ. ಬೆಂಗಳೂರಿನ ಸಂಪಿಗೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮಾನ್ಯತಾ ಟೆಕ್ ಪಾರ್ಕ್ ಒಳಗೆ ಈ ದುರ್ಘಟನೆ ನಡೆದಿದೆ. ಬಿಹಾರ ಮೂಲದ ಈ ಯುವಕ ಇಲ್ಲಿ ಇಂಟೀರಿಯರ್ ಡೆಕೋರೇಷನ್ಗೆ ಸಂಬಂಧಿಸಿದಂತೆ ಕೆಲಸದಲ್ಲಿದ್ದ.
ಇಂದು ಮಾನ್ಯತಾ ಟೆಕ್ ಪಾರ್ಕ್ನಲ್ಲಿ ಕೆಲಸ ಮಾಡುತ್ತಿದ್ದ ರಿತೀಕ್, 13ನೇ ಮಹಡಿಯಿಂದ ಹಾರಿ ಪ್ರಾಣ ಕಳೆದುಕೊಂಡಿದ್ದಾನೆ. ಸ್ಥಳಕ್ಕೆ ಸಂಪಿಗೇಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳಲು ಲವ್ ಫೇಲ್ಯೂರ್ ಕಾರಣ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದಿದೆ. ಮತ್ತಷ್ಟು ತನಿಖೆ ನಡೆಯುತ್ತಿದೆ.
ಹಾವೇರಿಯಲ್ಲಿ ಬೈಕ್ನಲ್ಲಿ ಕಾಣಿಸಿದ ನಾಗರಹಾವು; ಬಿಡಿಭಾಗ ಬಿಚ್ಚಿ ಹೊಡೆದು ಸಾಯಿಸಿದ ಜನರು..
ಡಾ.ವಿಷ್ಣುಗೆ ಪೂಜೆ ಮಾಡ್ಬೇಕು ಪ್ಲೀಸ್ ಬಿಟ್ಬಿಡಿ… ಎಂದು ಅಧಿಕಾರಿಗಳ ಕಾಲಿಗೆ ಬಿದ್ರೂ ಪ್ರತಿಮೆ ತೆರವು ಮಾಡ್ಬಿಟ್ರು
ಇನ್ನೆರಡು ತಿಂಗಳಂತೂ ಬಹಳ ಹುಷಾರಾಗಿರಬೇಕು: ನೀತಿ ಆಯೋಗದ ಸದಸ್ಯರ ಎಚ್ಚರಿಕೆ