More

    ಕರೊನಾ ಸೋಂಕಿಗೆ ಯುವ ವೈದ್ಯ ಬಲಿ: ಮದುವೆಯಾದ ಒಂದೇ ವರ್ಷದಲ್ಲಿ ದುರಂತ ಸಾವು

    ಭುವನೇಶ್ವರ: ಎಲ್ಲವೂ ಮುಗಿಯಿತು. ಇನ್ನು ನಮ್ಮ ಬದುಕು ಮತ್ತೆ ಸರಿದಾರಿಗೆ ಬರಲಿದೆ ಎಂಬ ನಿರೀಕ್ಷೆಯಲ್ಲಿರುವಾಗಲೇ ಹೋದೆಯಾ ಪಿಶಾಚಿ ಅಂದ್ರೆ ಬಂದೆ ಗವಾಕ್ಷಿಲಿ ಎಂಬಂತೆ ದೇಶದಲ್ಲಿ ಎದ್ದಿರುವ ಮಹಾಮಾರಿ ಕರೊನಾ ವೈರಸ್​ ಎರಡನೇ ಅಲೆ ಜನರನ್ನು ಭಾರಿ ಆತಂಕಕ್ಕೆ ದೂಡಿದೆ.

    ದಿನೇದಿನೆ ಪ್ರಕರಣಗಳ ಸಂಖ್ಯೆಯ ಜತೆಗೆ ಸಾವಿನ ಪ್ರಕರಣಗಳು ಹೆಚ್ಚಾಗುತ್ತಿವೆ. ಇದರ ನಡುವೆ ಒಡಿಶಾ ರಾಜಧಾನಿ ಭುವನೇಶ್ವರದ ಐಎಂಎಸ್​ ಮತ್ತು ಎಸ್​ಯುಎಂ ಆಸ್ಪತ್ರೆಯ 34 ವರ್ಷದ ಯುವ ವೈದ್ಯರೊಬ್ಬರು ಕರೊನಾಗೆ ಬಲಿಯಾಗಿದ್ದಾರೆ. ಕರ್ತವ್ಯದಲ್ಲಿ ಇರುವಾಗಲೇ ಶನಿವಾರ ಅಸುನೀಗಿದ್ದಾರೆ.

    ಮೃತ ವೈದ್ಯರನ್ನು ಹೃದಾನಂದಾ ಭುಯಾನ್​ ಎಂದು ಗುರುತಿಸಲಾಗಿದೆ. ಇವರು ಆಸ್ಪತ್ರೆಯಲ್ಲಿ ಜನರಲ್ ಮೆಡಿಸಿನ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿದ್ದರು. ಕಳೆದ ಕೆಲವು ದಿನಗಳಿಂದ ಕರೊನಾ ಸೋಂಕಿನಿಂದ ಬಳಲುತ್ತಿದ್ದ ಭುಯಾನ್​, ಕೊನೆಗೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

    ಇದನ್ನೂ ಓದಿರಿ: ನಿಮ್ಮ ಬದುಕಿನ ನಾಯಕ ನೀವೇ ಆಗಿರಿ…: ಸೆಲೆಬ್ರಿಟಿ ಕಾರ್ನರ್​ನಲ್ಲಿ ರವಿ ಡಿ. ಚನ್ನಣ್ಣನವರ್​

    ಭುಯಾನ್​ ಅವರಿಗೆ ಕಳೆದ ವರ್ಷವಷ್ಟೇ ಮದುವೆ ಆಗಿತ್ತು. ಇವರಿಗೆ ಸಕ್ಕರೆ ರೋಗ, ಅಧಿಕ ಒತ್ತಡ ಸೇರಿದಂತೆ ಇತರೆ ಯಾವುದೇ ರೀತಿಯ ಕಾಯಿಲೆ ಇರಲಿಲ್ಲ. ಆದರೂ ಕರೊನಾ ಮಹಾಮಾರಿಗೆ ಬಲಿಯಾಗಿರುವುದು ಇತರರ ಆತಂಕಕ್ಕೆ ಕಾರಣವಾಗಿದೆ. ಸಹೋದ್ಯೋಗಿಗಳ ನಡುವೆ ಒಳ್ಳೆಯ ಸ್ನೇಹ ಸಂಬಂಧವನ್ನು ಭುಯಾನ್​ ಹೊಂದಿದ್ದರು. ಇದೀಗ ಅವರ ಅಕಾಲಿಕ ಮರಣದಿಂದಾಗಿ ಇಡೀ ವೈದ್ಯಕೀಯ ಬಳಗವು ಸಂತಾಪ ವ್ಯಕ್ತಪಡಿಸಿದೆ.

    ಕೆಲಸದಲ್ಲೂ ಸಹ ಭುಯಾನ್​ ಅವರು ಒಳ್ಳೆಯ ಹೆಸರು ಮಾಡಿದ್ದರು. ಅಲ್ಲದೆ, ಅನೇಕರಿಗೆ ಸ್ಫೂರ್ತಿ ಸಹ ಆಗಿದ್ದರು. ಹೀಗಾಗಿ ಭುಯಾನ್​ ಸೇವೆಯನ್ನು ಪರಿಗಣಿಸಿ ಸರ್ಕಾರ ಅವರಿಗೆ ಸಕಲ ಸರ್ಕಾರಿ ಗೌರವವನ್ನು ನೀಡಬೇಕೆಂದು ವೈದ್ಯ ಬಳಗ ಮನವಿ ಮಾಡಿಕೊಂಡಿದೆ. (ಏಜೆನ್ಸೀಸ್​)

    ನಿಮ್ಮ ಬದುಕಿನ ನಾಯಕ ನೀವೇ ಆಗಿರಿ…: ಸೆಲೆಬ್ರಿಟಿ ಕಾರ್ನರ್​ನಲ್ಲಿ ರವಿ ಡಿ. ಚನ್ನಣ್ಣನವರ್​

    ಕ್ಷುಲ್ಲಕ ಕಾರಣಕ್ಕೆ ಸರಣಿ ಕೊಲೆ!; ಆ ಕ್ಷಣ ಅಂಕಣ…

    ಐಪಿಎಲ್​ ಇತಿಹಾಸದಲ್ಲಿ ಈವರೆಗೂ ಎಂ.ಎಸ್​. ಧೋನಿ ಎಷ್ಟು ಭಾರಿ ಡಕ್​ ಔಟ್​ ಆಗಿದ್ದಾರೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts