ಉದಯಪುರ: ಈಗಿನ ಯುವ ಸಮಾಜ ಸಂಪೂರ್ಣವಾಗಿ ಸಾಮಾಜಿಕ ಜಾಲತಾಣಗಳ ಮೇಲೆ ಅವಲಂಬಿತವಾಗಿಬಿಟ್ಟಿದೆ. ಕುಟುಂಬದ ಜತೆ ಊಟಕ್ಕೆ ಹೋಗುವುದರಿಂದ ಹಿಡಿದು, ಸ್ನೇಹಿತರ ಜತೆ ಕಾಫಿ ಕುಡಿಯುವುದರ ಬಗ್ಗೆಯೂ ಸ್ಟೇಟಸ್ ಹಾಕಿಕೊಂಡೇ ಬದುಕುತ್ತಿದೆ. ಅದೇ ರೀತಿ ಯುವಕನೊಬ್ಬ ಹಾಕಿದ್ದ ಸ್ಟೇಟಸ್ ಕಂಡು ಗಾಬರಿಯಿಂದ ಆತನ ಮನೆಗೆ ಬಂದ ಸಂಬಂಧಿಕರಿಗೆ ದೊಡ್ಡದೊಂದು ಶಾಕ್ ಆಗಿದೆ.
ರಾಜಸ್ಥಾನದ ಉದಯಪುರದಲ್ಲಿ ಮಹೇಂದ್ರ ಸಿಂಗ್ (19) ದಿನಸಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ವಿದ್ಯಾಭ್ಯಾಸ ಮುಗಿಸಿದ ನಂತರ ತಂದೆ ತಾಯಿಯನ್ನು ಊರಿನಲ್ಲಿ ಬಿಟ್ಟು, ದುಡಿಮೆಗಾಗಿ ಆತ ಉದಯಪುರಕ್ಕೆ ಬಂದಿದ್ದ. ಅಲ್ಲೇ ಒಂದು ಬಾಡಿಗೆ ರೂಂ ಮಾಡಿಕೊಂಡು ಬದುಕುತ್ತಿದ್ದ.
ಸೋಮವಾರ ಬೆಳಗ್ಗೆ ಆತ ಸಾಮಾಜಿಕ ಜಾಲತಾಣಗಳಲ್ಲಿ ಒಂದು ಸ್ಟೇಟಸ್ ಹಾಕಿದ್ದಾನೆ. ಗುಡ್ ಬೈ ಎಂದು ಸ್ಟೇಟಸ್ ಹಾಕಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಯುವಕ ಹಾಕಿದ್ದ ಸ್ಟೇಟಸ್ ನೋಡಿ ಆತನ ಸಂಬಂಧಿಕರು ಗಾಬರಿಯಾಗಿದ್ದಾರೆ. ಉದಯಪುರದಲ್ಲಿದ್ದ ಕೆಲ ಸಂಬಂಧಿಕರು ನೇರವಾಗಿ ಆತನ ಬಾಡಿಗೆ ಮನೆಗೆ ಧಾವಿಸಿದ್ದಾರೆ. ಆದರೆ ಅವರು ಬರುವಷ್ಟರಲ್ಲಿ ಯುವಕ ನೇಣಿನಲ್ಲಿ ಶವವಾಗಿ ನೇತಾಡುತ್ತಿದ್ದ. ಈ ವಿಚಾರವನ್ನು ಪೊಲೀಸರಿಗೆ ತಿಳಿಸಲಾಗಿದ್ದು, ಸ್ಥಳಕ್ಕೆ ಬಂದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಊರಲ್ಲಿದ್ದ ತಂದೆ ತಾಯಿಗೆ ವಿಚಾರ ಮುಟ್ಟಿಸಲಾಗಿದೆ. ಯುವಕನ ಫೋನನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ಆ ಫೋನಿನಿಂದ ಸಿಗಬಹುದು ಎನ್ನುವ ನಿರೀಕ್ಷೆಗಳಿವೆ. (ಏಜೆನ್ಸೀಸ್)
ಚಳಿಯೆಂದು 500 ರೂಪಾಯಿಯ ನೂರಾರು ನೋಟು ಸುಟ್ಟ! ಕಸದ ರಾಶಿಯ ಮೇಲೆ ನೆಮ್ಮದಿಯಿಂದ ಮಲಗಿದ!
ಮನೆಯ ಗೋಡೆಯಲ್ಲಿ ಕೇಳುತ್ತೆ ವಿಚಿತ್ರ ಶಬ್ಧ! 20 ದಿನಗಳಿಂದ ಭಯದಲ್ಲೇ ಬದುಕುತ್ತಿದೆ ಈ ಕುಟುಂಬ