ಬೆಂಗಳೂರು: ಭಾರತ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್, ಅದೆಷ್ಟೋ ಯುವ ಕ್ರಿಕೆಟಿಗರಿಗೆ ಸ್ಫೂರ್ತಿಯಾಗಿದ್ದಾರೆ. ಇವರನ್ನು ಆದರ್ಶವಾಗಿ ಸ್ವೀಕರಿಸಿರುವ ಆಟಗಾರರಿಗೆ ಲೆಕ್ಕವಿಲ್ಲ. ವೃತ್ತಿಜೀವನಕ್ಕೆ ನಿವೃತ್ತಿ ಹೇಳಿ 9 ವರ್ಷಗಳ ಕಳೆದರೂ ದ್ರಾವಿಡ್ ಅಭಿಮಾನಿಗಳ ಸಂಖ್ಯೆ ಮಾತ್ರ ಕುಂದಿಲ್ಲ. ಇದೀಗ ಕೋಚಿಂಗ್ನತ್ತ ಗಮನಹರಿಸಿರುವ ದ್ರಾವಿಡ್, ಯುವ ಕ್ರಿಕೆಟಿಗರಿಗೆ ತಮ್ಮ ತಂತ್ರಗಳನ್ನು ಹೇಳಿಕೊಡುತ್ತಿದ್ದಾರೆ. ದ್ರಾವಿಡ್ ಮಾತು ಕೇವಲ ಕ್ರಿಕೆಟಿಗರಿಗೆ ಮಾತ್ರವಲ್ಲ, ಇತರ ಕ್ರೀಡೆಯ ಕ್ರೀಡಾಪಟುಗಳು ಕೂಡ ಸ್ಫೂರ್ತಿಯಾಗಿ ಸ್ವೀಕರಿಸುತ್ತಾರೆ. ಅದೇ ರೀತಿ ವಲ್ಡ್ ರೆಸ್ಲಿಂಗ್ ಇಂಟರ್ಟೈನ್ಮೆಂಟ್ (ಡಬ್ಲ್ಯುಡಬ್ಲ್ಯುಇ) ದಿಗ್ಗಜ ಜಾನ್ ಸೆನಾಗೆ ದ್ರಾವಿಡ್ ಅವರೇ ಸ್ಫೂತಿರ್ಯಂತೆ..
ಇದನ್ನೂ ಓದಿ: ಆಲ್ರೌಂಡರ್ ರವೀಂದ್ರ ಜಡೇಜಾ ವೃತ್ತಿಜೀವನಕ್ಕೆ ತಿರುವು ನೀಡಿದ ಆ ಪಂದ್ಯ ಯಾವುದು ಗೊತ್ತೇ?
ಸೇಡಿಗಾಗಿ ಆಡಬಾರದು, ಗೌರವ ಹಾಗೂ ಹೆಮ್ಮೆಗಾಗಿ ಆಡಬೇಕು ಎಂದು ದ್ರಾವಿಡ್ ಹೇಳಿದ ಮಾತೇ ಡಬ್ಲ್ಯುಡಬ್ಲ್ಯುಇ ದಿಗ್ಗಜನಿಗೆ ಸ್ಫೂರ್ತಿಯಾಗಿದೆ. 2017ರಲ್ಲಿ ಜಾನ್ ಸೆನಾ ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರೂ ಇಂದಿಗೂ ಈ ಪೋಸ್ಟ್ ಚಾಲ್ತಿಯಲ್ಲಿರುವುದು ವಿಶೇಷ. ದ್ರಾವಿಡ್ ಫೋಟೋ ಜತೆಗೆ ಕೋಟ್ ಹಂಚಿಕೊಂಡಿದ್ದರು. ಬಹುತೇಕ ಮಾಧ್ಯಮಗಳಲ್ಲಿ ಈ ಮಾತು ಚರ್ಚೆಯಾಗಿರುವುದು ವಿಶೇಷ. ಇನ್ಸ್ಟಾಗ್ರಾಂನಲ್ಲಿ ಸುಮಾರು 15.1 ಮಿಲಿಯನ್ ಹಿಂಬಾಲಕರನ್ನು ಹೊಂದಿರುವ ಸೆನಾ, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್, ಸ್ಟಾರ್ ಅಮಿತಾಭ್ ಬಚ್ಚನ್, ರಣವೀರ್ ಸಿಂಗ್ ಪೋಸ್ಟ್ಗಳನ್ನು ಶೇರ್ ಮಾಡಿದ್ದಾರೆ.
ಇದನ್ನೂ ಓದಿ: ದೇಶದ ಪ್ರತಿಷ್ಠಿತ ನಗರಗಳಲ್ಲಿ ಮನೆ ಖರೀದಿಸಿದ್ದಾರೆ ಎಂಎಸ್ ಧೋನಿ..,
ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥರಾಗಿರುವ ಕನ್ನಡಿಗ ರಾಹುಲ್ ದ್ರಾವಿಡ್, ಮುಂಬರುವ ಶ್ರೀಲಂಕಾ ಪ್ರವಾಸಕ್ಕೆ ಭಾರತ ಎರಡನೇ ಸ್ಥರದ ತಂಡಕ್ಕೆ ಕೋಚ್ ಆಗುವ ಸಾಧ್ಯತೆಗಳಿವೆ. ದ್ರಾವಿಡ್ 2014ರಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ತಂಡದೊಂದಿಗೆ ಕಾರ್ಯನಿರ್ವಹಿಸಿದ್ದರು.