ನಿರ್ದೇಶಕ ಯೋಗರಾಜ್ ಭಟ್ ಏನೇ ಮಾಡಿದರೂ ಸುದ್ದಿಯಾಗುತ್ತದೆ. ಇದೇ ರೀತಿ ಇದೀಗ ಗಣೇಶ್ ಜನ್ಮದಿನಕ್ಕೆ ಶುಭಾಶಯ ಕೋರುವ ಭರದಲ್ಲಿ ಪೋಸ್ಟರ್ನಲ್ಲಿ ಕನ್ನಡವನ್ನೇ ತಪ್ಪಾಗಿ ಬರೆದು ಪೋಸ್ಟ್ ಮಾಡಿದ್ದಾರೆ. ಸದ್ಯ ಈ ವಿಚಾರ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ಯೋಗರಾಜ್ ಭಟ್ ಅವರ ಬಗ್ಗೆ ಬಗೆಬಗೆ ಕಮೆಂಟ್ಗಳು ಸಂದಾಯವಾಗುತ್ತಿವೆ. ಆದರೂ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಅವರು, ಏನೂ ಆಗೇ ಇಲ್ವೇನೋ ಅನ್ನೋ ಥರ ಇದ್ದಾರೆ.
ಇದನ್ನೂ ಓದಿ: ಸೂರ್ಯವಂಶಿಯಲ್ಲಿ ಕರಣ್ ಜೋಹಾರ್ ಪಾಲುದಾರಿಕೆ ಇದೆಯೋ ಇಲ್ಲವೋ?
ಹೌದು, ಗಾಳಿಪಟ 2 ಚಿತ್ರದ ಪೋಸ್ಟರ್ನಲ್ಲಿ ‘ಹುದ್ದಿಟ ಹಬ್ಬದ ಶುಶಾಭಯ‘ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ಗೆ ಒಂದಷ್ಟು ಮಂದಿ ಏನೋ ಇದೆ ಎಂದರೆ, ಕನ್ನಡ ಬರಲ್ವೇನ್ರಿ ಎಂದಿದ್ದಾರೆ. ಮತ್ತೊಂದಿಷ್ಟು ಮಂದಿ ಪೋಸ್ಟರ ಹಿಂದೆ ಏನೋ ಅಡಗಿದೆ ಎಂದು ಕಮೆಂಟ್ ಮಾಡಿದ್ದಾರೆ.
ಪ್ರೀತಿಯ ಗಣಪನಿಗೆ ಹುದ್ದಿಟ ಹಬ್ಬದ ಶುಶಾಭಯ ❤💐💐@Official_Ganesh pic.twitter.com/0xshu6I518
— ʏᴏɢᴀʀᴀᴊ ʙʜᴀᴛ (@yogarajofficial) July 2, 2020
ಇದನ್ನೂ ಓದಿ: ಹೊಸ ರೂಪದಲ್ಲಿ ಬರಲಿದೆ ಅಣ್ಣಾವ್ರ ಸೂಪರ್ ಹಿಟ್ ಸಿನಿಮಾ
ಹೌದು, ಗಾಳಿಪಟ ಸಿನಿಮಾದಲ್ಲಿ ಗಣೇಶ್ ಕನ್ನಡದಲ್ಲಿ ಅಷ್ಟಕಷ್ಟೇ. ತಪ್ಪು ತಪ್ಪಾಗಿ ಕನ್ನಡ ಬರೆದು ಅಪಹಾಸ್ಯಕ್ಕೆ ಒಳಗಾಗುತ್ತಿತ್ತು ಅವರ ಪಾತ್ರ. ಇದೀಗ ಆ ಪಾತ್ರವನ್ನೇ ಮತ್ತೆ ನೆನಪಿಸಿದ್ದಾರೆ ಯೋಗರಾಜ್ ಭಟ್. ಒಟ್ಟಿನಲ್ಲಿ ಗಣೇಶ್ ಜನ್ಮದಿನಕ್ಕೆ ಕರೊನಾ ಅಡ್ಡಿಯ ನಡುವೆಯೂ, ಅಭಿಮಾನಿಗಳಿಗೆ ಒಂದಷ್ಟು ಸಪ್ರೈಸ್ಗಳು ಸಿಕ್ಕಿವೆ. ಸುನಿ ಜತೆ ಹೊಸ ಸಿನಿಮಾ, ಪ್ರಶಾಂತ್ ರಾಜ್ ಜತೆ ಮತ್ತೊಂದು ಸಿನಿಮಾದಲ್ಲಿ ಗಣೇಶ್ ನಟಿಸಲಿದ್ದಾರೆ.
ಪುಷ್ಪ ಚಿತ್ರಕ್ಕೆ ರಶ್ಮಿಕಾ ಬದಲು ಇನ್ನೋರ್ವ ನಟಿಗೆ ಮೊದಲು ಮಣೆ ಹಾಕಿದ್ದರು ನಿರ್ದೇಶಕರು…