More

    ಕನ್ನಡವನ್ನು ತಪ್ಪಾಗಿ ಬರೆದ ನಿರ್ದೇಶಕ ಯೋಗರಾಜ್​ ಭಟ್​; ಅದಕ್ಕೂ ಇಲ್ಲೊಂದು ಕಾರಣವಿದೆ..

    ನಿರ್ದೇಶಕ ಯೋಗರಾಜ್​ ಭಟ್​ ಏನೇ ಮಾಡಿದರೂ ಸುದ್ದಿಯಾಗುತ್ತದೆ. ಇದೇ ರೀತಿ ಇದೀಗ ಗಣೇಶ್​ ಜನ್ಮದಿನಕ್ಕೆ ಶುಭಾಶಯ ಕೋರುವ ಭರದಲ್ಲಿ ಪೋಸ್ಟರ್​ನಲ್ಲಿ ಕನ್ನಡವನ್ನೇ ತಪ್ಪಾಗಿ ಬರೆದು ಪೋಸ್ಟ್ ಮಾಡಿದ್ದಾರೆ. ಸದ್ಯ ಈ ವಿಚಾರ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗುತ್ತಿದ್ದು, ಯೋಗರಾಜ್​ ಭಟ್​ ಅವರ ಬಗ್ಗೆ ಬಗೆಬಗೆ ಕಮೆಂಟ್​ಗಳು ಸಂದಾಯವಾಗುತ್ತಿವೆ. ಆದರೂ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಅವರು, ಏನೂ ಆಗೇ ಇಲ್ವೇನೋ ಅನ್ನೋ ಥರ ಇದ್ದಾರೆ.

    ಇದನ್ನೂ ಓದಿ: ಸೂರ್ಯವಂಶಿಯಲ್ಲಿ ಕರಣ್​ ಜೋಹಾರ್​ ಪಾಲುದಾರಿಕೆ ಇದೆಯೋ ಇಲ್ಲವೋ?

    ಹೌದು, ಗಾಳಿಪಟ 2 ಚಿತ್ರದ ಪೋಸ್ಟರ್​ನಲ್ಲಿ ‘ಹುದ್ದಿಟ ಹಬ್ಬದ ಶುಶಾಭಯ‘ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್​​ಗೆ ಒಂದಷ್ಟು ಮಂದಿ ಏನೋ ಇದೆ ಎಂದರೆ, ಕನ್ನಡ ಬರಲ್ವೇನ್ರಿ ಎಂದಿದ್ದಾರೆ. ಮತ್ತೊಂದಿಷ್ಟು ಮಂದಿ ಪೋಸ್ಟರ ಹಿಂದೆ ಏನೋ ಅಡಗಿದೆ ಎಂದು ಕಮೆಂಟ್​ ಮಾಡಿದ್ದಾರೆ.

    ಇದನ್ನೂ ಓದಿ: ಹೊಸ ರೂಪದಲ್ಲಿ ಬರಲಿದೆ ಅಣ್ಣಾವ್ರ ಸೂಪರ್​ ಹಿಟ್​ ಸಿನಿಮಾ

    ಹೌದು, ಗಾಳಿಪಟ ಸಿನಿಮಾದಲ್ಲಿ ಗಣೇಶ್​ ಕನ್ನಡದಲ್ಲಿ ಅಷ್ಟಕಷ್ಟೇ. ತಪ್ಪು ತಪ್ಪಾಗಿ ಕನ್ನಡ ಬರೆದು ಅಪಹಾಸ್ಯಕ್ಕೆ ಒಳಗಾಗುತ್ತಿತ್ತು ಅವರ ಪಾತ್ರ. ಇದೀಗ ಆ ಪಾತ್ರವನ್ನೇ ಮತ್ತೆ ನೆನಪಿಸಿದ್ದಾರೆ ಯೋಗರಾಜ್ ಭಟ್​. ಒಟ್ಟಿನಲ್ಲಿ ಗಣೇಶ್​ ಜನ್ಮದಿನಕ್ಕೆ ಕರೊನಾ ಅಡ್ಡಿಯ ನಡುವೆಯೂ, ಅಭಿಮಾನಿಗಳಿಗೆ ಒಂದಷ್ಟು ಸಪ್ರೈಸ್​ಗಳು ಸಿಕ್ಕಿವೆ. ಸುನಿ ಜತೆ ಹೊಸ ಸಿನಿಮಾ, ಪ್ರಶಾಂತ್​ ರಾಜ್​ ಜತೆ ಮತ್ತೊಂದು ಸಿನಿಮಾದಲ್ಲಿ ಗಣೇಶ್​ ನಟಿಸಲಿದ್ದಾರೆ.

    ಪುಷ್ಪ ಚಿತ್ರಕ್ಕೆ ರಶ್ಮಿಕಾ ಬದಲು ಇನ್ನೋರ್ವ ನಟಿಗೆ ಮೊದಲು ಮಣೆ ಹಾಕಿದ್ದರು ನಿರ್ದೇಶಕರು…

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts