ಮುಂಬೈ: ದೀಪಾವಳಿ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ. ಮಹಿಳೆಯರೆಲ್ಲ ತಮ್ಮ ಮನೆ ಸ್ವಚ್ಛಗೊಳಿಸಿ ಹಬ್ಬಕ್ಕೆ ಸಿದ್ಧರಾಗುತ್ತಿದ್ದಾರೆ. ಮಹಾರಾಷ್ಟ್ರದ ಮಹಿಳೆಯೊಬ್ಬಳು ಈ ಹಬ್ಬದ ಸಮಯದಲ್ಲಿ ಬಂಗಾರವನ್ನೇ ಕಸವೆಂದು ಎಸೆದಿದ್ದಾಳೆ. ಅದೃಷ್ಟವಶಾತ್ ಆಕೆ ಎಸೆದ ಬಂಗಾರ ಆಕೆಯನ್ನು ಮತ್ತೆ ಹುಡುಕಿಕೊಂಡು ಬಂದಿದೆ.
ಇದನ್ನೂ ಓದಿ: ಭೀಮಾತೀರದ ಗುಂಡಿನ ದಾಳಿ ಪ್ರಕರಣ; ಮತ್ತಿಬ್ಬರ ಬಂಧನ
45 ವರ್ಷದ ಮಹಿಳೆ ಮನೆ ಸ್ವಚ್ಛ ಮಾಡುವಾಗ ಮನೆಯಲ್ಲಿದ್ದ ಹಳೆಯ ಪರ್ಸ್ ಒಂದನ್ನು ಕಸದ ಜತೆ ಸೇರಿಸಿ ಎಸೆದಿದ್ದಾರೆ. ಅದನ್ನು ನಗರ ಪಾಲಿಕೆಯ ಪೌರ ಕಾರ್ಮಿಕರು ತೆಗೆದುಕೊಂಡು ಹೋಗಿ ಕಸದ ರಾಶಿಗೆ ಸುರಿದಿದ್ದಾರೆ. ಕಸ ಎಸೆದು ಗಂಟೆಗಳು ಉರುಳಿದ ನಂತರ ಮಹಿಳೆಗೆ ವಿಚಾರವೊಂದು ಹೊಳೆದಿದೆ. ಮನೆಗೆ ಬರುವ ಸೊಸೆಗೆಂದು ಮಾಡಿಸಿಟ್ಟಿದ್ದ ಮೂರು ಲಕ್ಷ ರೂಪಾಯಿ ಮೌಲ್ಯದ ಬಂಗಾರದ ಆಭರಣವನ್ನು ತಾನು ಆ ಪರ್ಸ್ನಲ್ಲಿ ಇಟ್ಟಿದ್ದು ತಡವಾಗಿ ಅರಿವಿಗೆ ಬಂದಿದೆ. ಕೂಡಲೇ ಆಕೆ ತನ್ನ ಮಗನಿಗೆ ವಿಷಯ ಮುಟ್ಟಿಸಿದ್ದಾಳೆ.
ಇದನ್ನೂ ಓದಿ: ಒವೈಸಿ ಎಂಟ್ರಿ: ಮುಸ್ಲಿಂ ಮತದಾರರನ್ನು ಕಳೆದುಕೊಳ್ಳೋ ಟೆನ್ಷನ್ನಲ್ಲಿ ದೀದಿ!
ನಡೆದ ವಿಚಾರವನ್ನು ನಗರ ಪಾಲಿಕೆಯ ಅಧಿಕಾರಿಗಳಿಗೆ ಮಗ ತಿಳಿಸಿದ್ದಾನೆ. ಪೌರ ಕಾರ್ಮಿಕ ಹೇಮಂತ್ನೊಂದಿಗೆ ಬಂಗಾರ ಹುಡುಕಲು ಕಸ ಹಾಕಿದ್ದ ಸ್ಥಳಕ್ಕೆ ಅಮ್ಮ ಮಗ ತೆರಳಿದ್ದಾರೆ. ಅಲ್ಲಿ ಸುಮಾರು 18 ಟನ್ ತ್ಯಾಜ್ಯ ಒಟ್ಟಾಗಿತ್ತು. ಆದರೆ ಹೇಮಂತ್ ಅವರ ಚಾಣಾಕ್ಷತನದಿಂದ ಪರ್ಸ್ ಅನ್ನು ಹುಡುಕಲಾಗಿದೆ.
ಈ ಹಿಂದೆ 2013ರಲ್ಲಿಯೂ ಇಂತದ್ದೇ ಒಂದು ಘಟನೆ ನಡೆದಿತ್ತು. ಆಗಲೂ ಕೂಡ ಹೇಮಂತ್ ಅವರೇ ಬಂಗಾರವನ್ನು ಹುಡುಕಿಕೊಟ್ಟಿದ್ದರಂತೆ. (ಏಜೆನ್ಸೀಸ್)
‘ಉಹೂಂ, ಇದು ನನ್ನ ಕೊನೆಯ ಚುನಾವಣೆ ಅಲ್ಲವೇ ಅಲ್ಲ’, ಗೆದ್ದ ಮೇಲೆ ಉಲ್ಟಾ ಹೊಡೆದ ನಿತೀಶ್ ಕುಮಾರ್
ಸಿಪಿಐ(ಎಂ)ನ ಪ್ರಧಾನ ಕಾರ್ಯದರ್ಶಿ ಮಗ ಅರೆಸ್ಟ್; ಅಪ್ಪನಿಗೆ ರಜೆ ಕೊಟ್ಟು ಆರೈಕೆ ಮಾಡುತ್ತಿರುವ ಕೇರಳ ಸರ್ಕಾರ