ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಪುರಸಭೆ ಆವರಣದಲ್ಲಿ ಮಾಜಿ ಪುರಸಭಾ ಸದಸ್ಯರೊಬ್ಬರ ತಂಗಿಯ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಶಿಡ್ಲಘಟ್ಟ ನಿವಾಸಿಯಾಗಿದ್ದ ಗೌರಮ್ಮ(46) ಎಂಬುವರು ಮೃತರು.
ಮೃತ ಗೌರಮ್ಮ ಅವರಿಗೆ ದೇವನಹಳ್ಳಿ ಪಟ್ಟಣ ತವರೂರಾಗಿದ್ದು, ಮಾಜಿ ಪುರಸಭಾ ಸದಸ್ಯ ದೇವರಾಜ್ ಅವರ ತಂಗಿಯಾಗಿದ್ದರು. ಶಿಡ್ಲಘಟ್ಟದಲ್ಲಿ ಪತಿಯೊಂದಿಗೆ ವಾಸವಾಗಿದ್ದ ಈಕೆ ಮೂರು ದಿನಗಳ ಹಿಂದೆಯಷ್ಟೆ ತವರುಮನೆಗೆ ಬಂದಿದ್ದರು ಎನ್ನಲಾಗಿದ್ದು, ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ.
ಆದರೆ ಪುರಸಭೆ ಆವರಣದಲ್ಲೇ ಈಕೆ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ಸಂಬಂಧ ದೇವನಹಳ್ಳಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿ, ಶವವನ್ನು ಶವಾಗಾರಕ್ಕೆ ಸಾಗಿಸಿದ್ದಾರೆ. ಪ್ರಕರಣದ ತನಿಖೆ ನಡೆಯುತ್ತಿದೆ.
ಟೀಚರ್ಗೆ ಗಿಫ್ಟ್ ತಂದಿದೀನಿ ಎನ್ನುತ್ತಾ ಮಚ್ಚಿನಿಂದ ಹಲ್ಲೆ ಮಾಡಿದ ಯುವಕ!
ಕಮ್ಯಾಂಡೋ ವೇಷ ಧರಿಸಿ ಐಎಸ್ಐಗೆ ಸೇನೆ ಮಾಹಿತಿ ಕಳಿಸ್ತಿದ್ದ! ಬೆಂಗಳೂರಲ್ಲಿ ಬಟ್ಟೆ ವ್ಯಾಪಾರ ಮಾಡ್ತಿದ್ದ!