More

    ಗಲಗ ಶ್ರೀ ಚನ್ನಬಸವೇಶ್ವರ ಜಾತ್ರೆ ಸಂಪನ್ನ

    ದೇವದುರ್ಗ: ತಾಲೂಕಿನ ಆರಾಧ್ಯ ದೈವ ಗಲಗ ಗ್ರಾಮದ ಶ್ರೀ ಚನ್ನಬಸವೇಶ್ವರ ದೇವರ ಜಾತ್ರಾ ಮಹೋತ್ಸವ ಶನಿವಾರ ಅದ್ದೂರಿಯಾಗಿ ಜರುಗಿತು.
    ಈ ಜಾತ್ರೆ ವರ್ಷದಲ್ಲಿ ಎರಡು ಸಲ ಜರುಗುತ್ತಿರುವುದು ವಿಶೇಷ. ವರ್ಷದ ಮೊದಲ ಜಾತ್ರೆ ದವನದ ಹುಣ್ಣಿಮೆ ಆದ 11ನೇ ದಿನಕ್ಕೆ (ಶನಿವಾರ) ಜರುಗಿದರೆ, ಎರಡನೇ ಜಾತ್ರೆ ಗೌರಿ ಹುಣ್ಣಿಮೆ ಆದ 11ನೇ ದಿನಕ್ಕೆ ಜರುಗುತ್ತದೆ. ಬೆಟ್ಟದ ಮೇಲಿರುವ ಶ್ರೀಚನ್ನಬಸವೇಶ್ವರ ಜಾತ್ರೆ ಲಕ್ಷಾಂತರ ಭಕ್ತರ ಆರಾಧ್ಯ ದೈವವಾಗಿದ್ದಾರೆ. ಶುಕ್ರವಾರ ನೈವೈದ್ಯ ಜರುಗಿದರೆ, ಶನಿವಾರ ಧೂಳಗಾಯಿ ಕಾರ್ಯಕ್ರಮ ನಡೆಯಿತು.

    ಸಾವಿರಾರು ಭಕ್ತರು ಎಡೆ, ಕಾಯಿ ಅರ್ಪಿಸಿ ಭಕ್ತಿಭಾವ ಮೆರೆದರು. ಜಾತ್ರೆ ನಿಮಿತ್ತ ಬೆಳಗ್ಗೆ 6ಗಂಟೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ, ಪೂಜಾ ವಿಧಿವಿಧಾನಗಳು ಜರುಗಿದವು. ರಾತ್ರಿ ಅಖಂಡ ಭಜನೆ ಕಾರ್ಯಕ್ರಮ ಜರುಗಿತು. ಮುಂಗಾರು ಹಂಗಾಮಿನಲ್ಲಿ ಶ್ರೀಮಠದಲ್ಲಿ ಹೇಳಿಕೆ ನೀಡಲಾಗುತ್ತಿದ್ದು ಪೂಜಾರಿಗಳು ಪುಸ್ತಕದಲ್ಲಿ ಕಡ್ಡಿಹಾಕಿ ಹೇಳಿಕೆ ನೀಡುವುದು ವಾಡಿಕೆ. ಶ್ರೀ ಮಠದ ಹೇಳಿಕೆ ನೋಡಿ ಭಕ್ತರು ಕೃಷಿ ಚಟುವಟಿಕೆಗೆ ಮುಂದಾಗುತ್ತಾರೆ.
    ಬೇಸಿಗೆ ಹಿನ್ನೆಲೆಯಲ್ಲಿ ಗ್ರಾಮದ ಪ್ರಜ್ಞಾವಂತ ಯುವಕರ ಬಳಗ ಜಾತ್ರೆಗೆ ಬರುವ ಭಕ್ತರಿಗೆ ಪಾನಕ ವಿತರಣೆ ಮಾಡಿ ಗಮನ ಸೆಳೆಯಿತು. ಯುವಕರ ಬಳಗ ಬೆಳಗ್ಗೆ 7ರಿಂದ ಭಕ್ತರಿಗೆ ಮಜ್ಜಿಗೆ, ಪಾನಕ, ಶರಬತ್ ಮಾಡಿ ವಿತರಿಸಿತು. ಯುವಕರ ಬಳಗ ಪ್ರತಿವರ್ಷ ಪಾನಕ ವಿತರಣೆ ಕಾರ್ಯಕ್ರಮ ನಡೆಸಿ ಗಮನ ಸೆಳೆಯುತ್ತದೆ. ಕಾರ್ಯಕ್ರಮದಲ್ಲಿ ಹಿಂದು-ಮುಸ್ಲಿಂ ಯುವಕರು ಭಾಗವಹಿಸಿ ಸೌಹಾರ್ದತೆ ಮೆರೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts