ಅಂಚಾಲ್: ಒಂದು ಹಾವು ಕಚ್ಚಿತು ಎಂದು ಚಿಕಿತ್ಸೆ ಪಡೆಯುತ್ತಿದ್ರು ಆ ಮಹಿಳೆ. ಇನ್ನೇನು ಪ್ರಾಣಕ್ಕೇನೂ ಅಪಾಯವಿಲ್ಲ ಎಂದು ಮನೆಗೆ ಬಂದರೆ ಮತ್ತೊಂದು ಹಾವು ಕಡಿಯಬೇಕೆ!?
ಅಡೂರು ನಿವಾಸಿ ಉತ್ತರಾ(25) ಈ ರೀತಿ ಹಾವು ಕಡಿತಕ್ಕೆ ಒಳಗಾದವರು. ಪತಿಯ ಮನೆಯಲ್ಲಿದ್ದಾಗ ಮಾರ್ಚ್ 2ರಂದು ಮಹಿಳೆಯನ್ನು ಮಂಡಲ ಹಾವು ಕಡಿದಿತ್ತು. ಇದು ಅತ್ಯಂತ ವಿಷಪೂರಿತ ಹಾವು. ಹಾಗಾಗಿ ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದು ಚಿಕತ್ಸೆಗೊಳಪಡಿಸಲಾಗಿತ್ತು. ನಂತರ ವಿಶ್ರಾಂತಿಗಾಗಿ ಅಂಚಾಲ್ ಸಮೀಪದಲ್ಲಿರುವ ಈರಂನ ತವರು ಮನೆಗೆ ಆಗಮಿಸಿದ್ದರು. ಜತೆಗೆ ಚಿಕಿತ್ಸೆಯೂ ಮುಂದುವರಿದಿತ್ತು.
ಇದನ್ನೂ ಓದಿ: ಎಚ್ಚರಿಕೆಯಿಂದ ಇರಿ – ಮೊಟ್ಟೆಗಳನ್ನು ನೋಡಿ ಬೆಚ್ಚಿ ಬಿದ್ದ ಜುವೆಲ್ಲರಿ ಶಾಪ್ ಮಾಲೀಕ !
ಆದರೆ, ಮೇ 6 ಮತ್ತು 7ರ ರಾತ್ರಿ ನಾಗರ ಹಾವೊಂದು ಬೆಡ್ರೂಮ್ ಪ್ರವೇಶಿಸಿತ್ತು. ಅದು ಆಕೆಗೆ ಗೊತ್ತೇ ಇರಲಿಲ್ಲ. ಗುರುವಾರ ಬೆಳಗ್ಗೆ ಉತ್ತರಾ ಏಳಲಿಲ್ಲ. ಆಕೆಯ ತಂದೆ ವಿಜಯಸೇನನ್ ಮತ್ತು ತಾಯಿ ಮಣಿಮೇಖಲಾ ಬೆಡ್ ರೂಮ್ ಬಾಗಿಲು ತೆರೆದು ನೋಡಿದರೆ ಉತ್ತರಾ ಜೀವ ಕಳೆದುಕೊಂಡಿದ್ದಳು. ಅಲ್ಲೇ ಪಕ್ಕದಲ್ಲಿ ನಾಗರ ಹಾವೂ ಇತ್ತು. ರಾತ್ರಿ ಕಿಟಕಿ ತೆರೆದು ಮಲಗಿದ ಕಾರಣ ಆ ಹಾವು ಒಳ ಪ್ರವೇಶಿಸಿರಬಹುದು ಎಂದು ಊಹಿಸಲಾಗುತ್ತಿದೆ.
ಇದನ್ನೂ ಓದಿ: ಇದು ಸಸ್ಪೆನ್ಸ್: ತುರಿದ ಚೀಸ್ ಬಳಸಿ ಆ ವಿದ್ಯಾರ್ಥನಿಯರು ಹಲ್ಲೆ ನಡೆಸಿದ್ದು ಹೇಗೆ?!!!
ಉತ್ತರಾ ಪತಿ ಸೂರಜ್ ಮತ್ತು ಒಂದು ವರ್ಷದ ಮಗು ಧ್ರುವ ಅವರನ್ನು ಬಿಟ್ಟು ಅಗಲಿದ್ದಾರೆ. ಈ ವಿಚಿತ್ರ ಪ್ರಕರಣ ಈಗ ಊರಿನಲ್ಲಿ ಮನೆಮಾತಾಗಿ ಅಚ್ಚರಿಗೆ ಕಾರಣವಾಗಿದೆ. (ಏಜೆನ್ಸೀಸ್)
ರಿಲಯನ್ಸ್ ಜಿಯೋಕ್ಕೆ ಮತ್ತೊಂದು ಜಾಕ್ಪಾಟ್, ಹರಿದು ಬಂತು 11,367 ಕೋಟಿ ರೂ. ಬಂಡವಾಳ