ಮುಂಬೈ: ಕರೊನಾ ವೈರಸ್ಗೆ ಲಸಿಕೆಯನ್ನು ಅಭಿವೃದ್ಧಿ ಪಡಿಸಿದ ತಕ್ಷಣ ಅದನ್ನು ದೇಶದ ಮೂಲೆಮೂಲೆಗೂ ತಲುಪಿಸುವ ಜವಾಬ್ದಾರಿ ನಮ್ಮ ಕಂಪನಿಯದ್ದು ಎಂದು ರಿಲಯನ್ಸ್ ಫೌಂಡೇಶನ್ ಸಂಸ್ಥಾಪಕಿ, ಅಧ್ಯಕ್ಷೆ ನೀತಾ ಅಂಬಾನಿಯವರು ತಿಳಿಸಿದ್ದಾರೆ.
ಹಾಗೇ, ದೇಶಾದ್ಯಂತ ಕೊವಿಡ್-19 ಕ್ಷಿಪ್ರ ತಪಾಸಣೆಗಾಗಿ ಕೇಂದ್ರ ಸರ್ಕಾರ ಮತ್ತು ಸ್ಥಳೀಯ ಆಡಳಿತಗಳೊಂದಿಗೆ ಸಹಭಾಗಿತ್ವ ಹೊಂದಲು ರಿಲಯನ್ಸ್ ಫೌಂಡೇಶನ್ ಸಿದ್ಧತೆ ನಡೆಸುತ್ತಿದೆ. ಇದಕ್ಕಾಗಿ ಜಿಯೋ ಡಿಜಿಟಲ್ ಸೌಕರ್ಯದ ಸಹಾಯ ಪಡೆಯಲಾಗುವುದು ಎಂದೂ ನೀತಾ ಅಂಬಾನಿಯವರು ತಿಳಿಸಿದ್ದಾರೆ. ಇದನ್ನೂ ಓದಿ: ಕ್ಯಾನ್ನಲ್ಲಿ ಇಂಧನ ನೀಡಲು ನಿರಾಕರಿಸಿದ್ದಕ್ಕೆ ಆತ ಏನು ಮಾಡಿದ? ಕೇಳಿದರೆ ನಿಮಗೂ ಶಾಕ್ ಆಗುತ್ತೆ…
ಕೊವಿಡ್-19 ಲಸಿಕೆ ಯಾವಾಗ ಲಭ್ಯವಾಗುತ್ತದೆ ಗೊತ್ತಿಲ್ಲ. ಹಾಗೆ ಲಸಿಕೆ ಅಭಿವೃದ್ಧಿ ಆದ ತಕ್ಷಣ ಅದನ್ನು ದೇಶದ ಎಲ್ಲ ಕಡೆಗೂ ತಲುಪಿಸುವ ಜವಾಬ್ದಾರಿಯನ್ನು ನಮ್ಮ ಸಂಸ್ಥೆಯೂ ಹೊರಲಿದೆ. ಈ ವಿಚಾರಲ್ಲಿ ಸಂಪೂರ್ಣ ಭರವಸೆ ನೀಡುತ್ತೇವೆ ರಿಲಯನ್ಸ್ ವಾರ್ಷಿಕ ಸಭೆಯಲ್ಲಿ ಹೇಳಿದ್ದಾರೆ.
ಭಾರತದಲ್ಲಿ ಹೈದರಾಬಾದ್ ಮೂಲದ ಸಂಸ್ಥೆ ತಯಾರಿಸಿದ ಲಸಿಕೆಯ ಮಾನವ ಪ್ರಯೋಗ ನಿನ್ನೆಯಿಂದ ಪಟನಾದ ಏಮ್ಸ್ನಲ್ಲಿ ಶುರುವಾಗಿದೆ. ಅದರ ಬೆನ್ನಲ್ಲೇ ನೀತಾ ಅಂಬಾನಿಯವರೂ ಈ ಮಾತು ಹೇಳಿದ್ದು, ಕೊವಿಡ್-19 ಬಿಕ್ಕಟ್ಟಿನ ವಿರುದ್ಧದ ಹೋರಾಟದಲ್ಲಿ ಸರ್ಕಾರದೊಂದಿಗೆ ಕೈ ಜೋಡಿಸುತ್ತೇವೆ ಎಂದಿದ್ದಾರೆ.(ಏಜೆನ್ಸೀಸ್)
ಕೊವಿಡ್-19 ಲಸಿಕೆ ಸಂಪೂರ್ಣ ಸುರಕ್ಷಿತ ಎಂದ ರಷ್ಯಾ ರಕ್ಷಣಾ ಸಚಿವಾಲಯ; ಜುಲೈ ಅಂತ್ಯಕ್ಕೆ ಫೈನಲ್ ರಿಸಲ್ಟ್