More

    ಯಾರು ಹಿತವರು ಈ ಮೂವರೊಳಗೆ?: ಮೂರೂ ಪಕ್ಷಗಳ ಬಗ್ಗೆ ಖ್ಯಾತ ನಿರ್ದೇಶಕರು ಹೀಗಂದಿದ್ದೇಕೆ?

    ಬೆಂಗಳೂರು: ಯಾರು ಹಿತವರು ಈ ಮೂವರೊಳಗೆ? ಎಂಬುದು ಲೋಕೋಕ್ತಿ. ಸಂದರ್ಭಾನುಸಾರ ಈ ಮಾತು ಆಗಾಗ ಕೇಳಿ ಬರುತ್ತಿರುತ್ತದೆ. ಆದರೆ ಇದೀಗ ಖ್ಯಾತ ಚಿತ್ರನಿರ್ದೇಶಕರೊಬ್ಬರು ಈ ಮಾತನ್ನು ಹೇಳಿರುವುದು ಗಮನ ಸೆಳೆದಿದೆ. ಅದರಲ್ಲೂ ಅವರು ರಾಜಕೀಯ ಪಕ್ಷಗಳನ್ನು ಗುರಿಯಾಗಿಸಿ ಈ ಮಾತು ಹೇಳಿದ್ದರಿಂದ ಇದು ಕುತೂಹಲ ಕೆರಳಿಸಿದೆ.

    ಅಂದಹಾಗೆ ಈ ಮಾತನ್ನು ಹೇಳಿರುವುದು ರಾಜ್ಯದಲ್ಲಿನ ಮೂರು ಪ್ರಮುಖ ರಾಜಕೀಯ ಪಕ್ಷಗಳಾಗಿರುವ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್​ ಬಗ್ಗೆ.. ಈ ಮಾತನ್ನು ಹೇಳಿರುವುದು ಬೇರಾರೂ ಅಲ್ಲ, ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್. ಇಂದು ಅವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಈ ರೀತಿ ಬರೆದು ಪೋಸ್ಟ್ ಮಾಡಿ ಗಮನ ಸೆಳೆದಿದ್ದಾರೆ.

    ಇದನ್ನೂ ಓದಿ: ಕಾರಿನ ಚಕ್ರಗಳ ಗಾಳಿ ತೆಗೀತಿದ್ರಂತೆ ಸಚಿನ್; ಮಕ್ಕಳ ದಿನಾಚರಣೆ ಪ್ರಯುಕ್ತ ಬಾಲ್ಯದ ತುಂಟತನ ನೆನಪಿಸಿಕೊಂಡ ತೆಂಡುಲ್ಕರ್

    “ಯಾರು ಹಿತವರು ಈ ಮೂವರೊಳಗೆ?
    ಬಹುಮತವಿದ್ದೂ ಬಾಳಲು ಬರದ ಕಾಂಗ್ರೆಸ್ಸೋ?
    ಸೋತರೂ ಆತ್ಮಾವಲೋಕನ ಮಾಡಿಕೊಳ್ಳದ ಬಿಜೆಪಿಯೋ?
    ಅಸ್ತಿತ್ವಕ್ಕಾಗಿ ಆತ್ಮವನ್ನೇ ಮಾರಿಕೊಳ್ಳುತ್ತಿರುವ ಜೆಡಿಎಸ್ಸೋ?
    ಯಾರು ಹಿತವರು ಈ ಮೂವರೊಳಗೆ?”
    ಎಂದು ನಾಗತಿಹಳ್ಳಿ ಚಂದ್ರಶೇಖರ್ ತಮ್ಮ ಎಕ್ಸ್ ಹ್ಯಾಂಡಲ್​ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.

    ಹೀಗೆ ವಿಭಿನ್ನವಾದ ಒಂದು ಪೋಸ್ಟ್ ಮೂಲಕ ಅವರು ರಾಜ್ಯದ ಜನತೆ ಚಿಂತನೆ ನಡೆಸುವಂತೆ ಮಾಡಿದ್ದಾರೆ. ಇನ್ನೇನು ಲೋಕಸಭೆ ಚುನಾವಣೆ ಹತ್ತಿರ ಇರುವ ಸಂದರ್ಭದಲ್ಲಿ ಅವರು ಹೀಗಂದಿರುವುದು ವಿಶೇಷ ಎನಿಸಿಕೊಂಡಿದೆ.

    ಎಂ. ಚಿನ್ನಸ್ವಾಮಿ ಸ್ಟೇಡಿಯಂ ಎಲ್ಲರಿಗೂ ಗೊತ್ತು: ಆದರೆ ಈ ಕ್ರೀಡಾಂಗಣಕ್ಕೆ ಯಾಕೆ ಆ ಹೆಸರು ಬಂತು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts