ನವದೆಹಲಿ: ಸಾಮಾನ್ಯವಾಗಿ ಎಲ್ಲ ಮಕ್ಕಳು ಬಾಲ್ಯದಲ್ಲಿ ತುಂಬ ತುಂಟರಾಗಿಯೇ ಇರುತ್ತಾರೆ. ನಾನಾ ಥರದ ತರ್ಲೆತನ ತೋರಿರುತ್ತಾರೆ. ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಕೂಡ ಅದಕ್ಕೆ ಹೊರತಾಗಿಲ್ಲ. ಅವರೂ ಬಾಲ್ಯದಲ್ಲಿ ಭಾರಿ ತರ್ಲೆ ಆಗಿದ್ರಂತೆ. ಮಕ್ಕಳ ದಿನವಾದ ಇಂದು ಅವರು ಈ ಸಂಗತಿಯನ್ನು ಹೇಳಿಕೊಂಡಿದ್ದಾರೆ.
ಸ್ವಲ್ಪ ಕಿಡಿಗೇಡಿತನ ಇರದಿದ್ದರೆ ಬಾಲ್ಯವು ಅಪೂರ್ಣ. ನಾನು ಚಿಕ್ಕವನಾಗಿದ್ದಾಗ ನನ್ನ ಫ್ರೆಂಡ್ಸ್ ಜತೆ ಸಾಹಿತ್ಯ ಸಹವಾಸ್ನ ಪಾರ್ಕಿಂಗ್ ಸ್ಥಳಕ್ಕೆ ಹೋಗಿ ಅಲ್ಲಿದ್ದ ಕಾರುಗಳ ಚಕ್ರಗಳ ಗಾಳಿ ತೆಗೆಯುತ್ತಿದ್ದೆವು. ನಾವು ಅದರಲ್ಲಿ ಎಷ್ಟು ಎಕ್ಸ್ಪರ್ಟ್ ಆಗಿದ್ದೆವೆಂದರೆ ನಾಲ್ಕೂ ಚಕ್ರಗಳನ್ನು ಚಪ್ಪಟೆ ಮಾಡದೆ ನಮ್ಮ ಕೀಟಲೆ ಪೂರ್ಣವಾಗಿರುತ್ತಿರಲಿಲ್ಲ ಎಂದು ತಮ್ಮ ಬಾಲ್ಯದ ತುಂಟತನವನ್ನು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ವಿಶ್ವಕಪ್ ಪಂದ್ಯಗಳಲ್ಲಿ ಸೋಲು; ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಏನಾಗಲಿದೆ ಬದಲಾವಣೆ?
ನೀವೂ ನಿಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡು ಆಗ ಮಾಡುತ್ತಿದ್ದ ತರ್ಲೆತನಗಳ ಬಗ್ಗೆ ನನ್ನ ಪೋಸ್ಟ್ಗೆ ರಿಪ್ಲೈ ಮಾಡುವ ಮೂಲಕ ಹೇಳಿಕೊಳ್ಳಿ ಎಂದಿರುವ ಸಚಿನ್, ಅಷ್ಟರೊಳಗೆ ನಾನು ಹೊರಗೆ ಹೋಗಿ ನನ್ನ ಕಾರಿನ ಟಯರ್ಗಳನ್ನು ಚೆಕ್ ಮಾಡಿ ಬರುತ್ತೇನೆ ಎಂಬುದಾಗಿ ಹೇಳಿ ನಗೆಯುಕ್ಕಿಸಿದ್ದಾರೆ.
ಇದನ್ನೂ ಓದಿ: ಬೆಟ್ಟಿಂಗ್ ಆ್ಯಪ್ ಸುಳಿಗೆ ಈ ಪ್ರಖ್ಯಾತ ಕಂಪನಿಯೂ ಸಿಲುಕಿತಾ?: ದಾಖಲಾಯಿತು ಎಫ್ಐಆರ್!
Childhood is incomplete without a bit of mischief.
When I was a kid, my friends and I would flatten the tyres of the cars parked in Sahitya Sahwas. The thorough professionals that we were, our job wasn’t done until ALL 4 tyres were flattened.
Rewind the time and tell me the…
— Sachin Tendulkar (@sachin_rt) November 14, 2023
ಹೀಗೆ ಸಚಿನ್ ತನ್ನ ಬಾಲ್ಯದ ದಿನಗಳ ಬಗ್ಗೆ ಹೇಳಿಕೊಳ್ಳುತ್ತ ಮಕ್ಕಳ ದಿನಾಚರಣೆಗೆ ವಿಭಿನ್ನವಾಗಿ ಶುಭಾಶಯ ಕೋರಿದ್ದಾರೆ. ಅವರ ಈ ಪೋಸ್ಟ್ಗೆ ಭರ್ಜರಿ ಪ್ರತಿಕ್ರಿಯೆಗಳು ಬಂದಿವೆ. ಈ ಪೋಸ್ಟ್ 15 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಕಂಡಿದೆ. ಇನ್ನು ಸಚಿನ್ ಪೋಸ್ಟ್ಗೆ ಪ್ರತಿಕ್ರಿಯಿಸಿರುವ ನೆಟ್ಟಿಗರೊಬ್ಬರು, ಎಂಆರ್ಎಫ್ನವರು ಯಾಕೆ ನಿಮ್ಮನ್ನು ಬ್ರ್ಯಾಂಡ್ ಅಂಬಾಸಡರ್ ಆಗಿ ತೆಗೆದುಕೊಂಡರು ಎಂಬುದು ಈಗ ಗೊತ್ತಾಯ್ತು ಎಂದಿದ್ದಾರೆ.
Now I know the reason why #MRF chose you as their Brand Ambassador. 😁😃
— Devesh Dashrath Bhuwad (@deveshbhuwad) November 14, 2023
ನಾಳೆ 8 ಕೋಟಿಗೂ ಅಧಿಕ ಜನರ ಖಾತೆಗೆ ಬಿಡುಗಡೆ ಆಗಲಿದೆ ಒಟ್ಟು 18 ಸಾವಿರ ಕೋಟಿ ರೂಪಾಯಿ!
ಆ 10 ಸಾವಿರ ಅದೃಷ್ಟವಂತರಲ್ಲಿ ನೀವೂ ಒಬ್ರಾ? ಚೆಕ್ ಮಾಡಿಕೊಳ್ಳುವುದು ಹೇಗೆ?