ಮಂಡ್ಯ: ಹೆದ್ದಾರಿಯಲ್ಲಿ ಸೃಷ್ಟಿಯಾದ ಕಾರಂಜಿಯಿಂದಾಗಿ ರಸ್ತೆಯೂ ನದಿಯಂತಾಗಿ ಅಪಾರ ಪ್ರಮಾಣದ ಕುಡಿಯುವ ನೀರು ಪೋಲಾದ ಪ್ರಕರಣವೊಂದು ವರದಿಯಾಗಿದೆ.
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಲೋಕಪಾವನಿ ನದಿ ಸೇತುವೆ ಬಳಿ ಈ ಕಾರಂಜಿ ಉಂಟಾಗಿದೆ. ಕಾವೇರಿ ನದಿಯಿಂದ ಮಂಡ್ಯಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಪೈಪ್ನಲ್ಲಿ ಒಡಕು ಕಾಣಿಸಿಕೊಂಡಿದ್ದರಿಂದ ಅದರೊಳಗಿಂದ ನೀರು ಕಾರಂಜಿಯಂತೆ ಚಿಮ್ಮಿ ಹರಿದಿದೆ.
ನೀರಿನ ಒತ್ತಡಕ್ಕೆ ಅದು ಕೊಳವೆಯಿಂದ ಮೇಲಕ್ಕೆ ಕಾರಂಜಿಯಂತೆಯೇ ಚಿಮ್ಮಿದ್ದು, ಸುಮಾರು 30 ನಿಮಿಷಗಳ ಕಾಲ ನೀರು ಪೋಲಾಗಿದೆ. ಉಕ್ಕಿ ಹರಿದ ನೀರೆಲ್ಲ ರಸ್ತೆಯಲ್ಲಿ ನದಿಯಂತೆ ಹರಿದುಹೋಗಿದೆ. ಪರಿಣಾಮವಾಗಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರು ಕೆಲಕಾಲ ಅಡಚಣೆ ಎದುರಿಸುವಂತಾಗಿತ್ತು. ಜಲಮಂಡಳಿ ಸಿಬ್ಬಂದಿ ಪೈಪ್ ಸರಿಪಡಿಸಿ ನೀರು ಪೋಲಾಗುವುದನ್ನು ನಿಲ್ಲಿಸಿದ್ದಾರೆ.
ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಕಾವೇರಿ ಕಾರಂಜಿ.
ಚಿಮ್ಮಿ ಹರಿಯುತ್ತಲೇ ಇದ್ದ ನೀರಿನಿಂದಾಗಿ ನದಿಯಂತಾದ ರಸ್ತೆ.
ವಿವರಗಳಿಗೆ https://t.co/YaFZZbZDD9 ನೋಡಿ. pic.twitter.com/ZJFijlWzdf— Vijayavani (@VVani4U) August 20, 2021
ಕಷ್ಟ ಎಂದು ಕಿಡ್ನಿ ಮಾರಲಿಕ್ಕೆ ಮುಂದಾದ ಮಹಿಳೆಗೇ ಮೋಸ ಮಾಡಿದ್ರು; ನಯವಾಗೇ 7.97 ಲಕ್ಷ ರೂ. ಪಡೆದ ಸೈಬರ್ ವಂಚಕರು
ಚಿತ್ರನಟಿಗೆ ಮನೆಯಲ್ಲೇ ತಾಳಿ ಕಟ್ಟಿ ಗಂಡನಂತೆ ನಟಿಸಿದ; ಬಳಿಕ ನಗ-ನಗದಿನೊಂದಿಗೆ ಪರಾರಿಯಾದ ರೌಡಿಯ ಅಣ್ಣ..