More

    ಮತದಾನ ಸಂವಿಧಾನ ನೀಡಿದ ಶ್ರೇಷ್ಠ ಕೊಡುಗೆ

    ಶಿಕಾರಿಪುರ: ಮತದಾನ ನಮಗೆ ಸಂವಿಧಾನ ನೀಡಿದ ಶ್ರೇಷ್ಠ ಕೊಡುಗೆ. ಮತಗಳ ಮೌಲ್ಯದ ಅರಿವು ನಮಗಿರಬೇಕು ಎಂದು ತಹಸೀಲ್ದಾರ್ ಎಂ.ಪಿ.ಕವಿರಾಜ್ ಹೇಳಿದರು.

    ಪಟ್ಟಣದ ಪದವಿಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ತಾಲೂಕಿನ ಪ್ರೌಢಶಾಲೆಗಳ ಮತದಾರ ಸಾಕ್ಷರತಾ ಸಂಘಗಳ ಮತದಾನದ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿ, ಮತದಾರರ ದಿನಾಚರಣೆ ಅಂಗವಾಗಿ ಮತದಾರರ ಜಾಗೃತಿಗೆ ಸಂಬಂಧಿಸಿ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ತಾಲೂಕು ಮಟ್ಟದ ಸ್ಪರ್ಧಾತ್ಮಕ ಚಟುವಟಿಕೆಗಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಭಾಗಿಯಾದಾಗ ಅದರ ವಿಶೇಷತೆ ತಿಳಿಯಲಿದೆ ಎಂದರು.

    ಬಿಇಒ ಉಮಾಮಹೇಶ್ ಮಾತನಾಡಿ, ಈಗ ವಿದ್ಯಾವಂತರೇ ಮತದಾನದ ಪ್ರಕ್ರಿಯೆಯಿಂದ ದೂರ ಉಳಿಯುತ್ತಿದ್ದಾರೆ. ವಿದ್ಯಾರ್ಥಿ ಗಳಲ್ಲಿ ಸಂವಿಧಾನ ನಮಗೆ ನೀಡಿದ ಮತದಾನದ ಶ್ರೇಷ್ಠತೆ ಬಗ್ಗೆ ಅವಲೋಕನ ನಡೆಯಿತು. ಮತದಾನದ ಹಕ್ಕು ಬಂದಾಗ ನಾವು ಅದರ ಶ್ರೇಷ್ಠತೆ ಪರಾಮಶಿಸಿ ಉತ್ತಮರನ್ನು ಆಯ್ಕೆ ಮಾಡಬೇಕು. ಆಗ ಮಾತ್ರ ಸಮಗ್ರ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.

    ಸಮನ್ವಯಾಧಿಕಾರಿ ಮುರುಳೀಧರ್, ತಾಲೂಕು ನೋಡಲ್ ಅಧಿಕಾರಿಗಳಾದ ಕೊಟ್ರೇಶ್ವರಪ್ಪ, ಬಿಆರ್​ಪಿ ವಿಜಯಲಕ್ಷ್ಮೀ ಪಂಡಿತ್, ಗಂಗಾಧರ್, ರೇಖಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts