More

    ಕಾಪು: ವಾಲಿಬಾಲ್ ಆಡುತ್ತಿದ್ದಾಗಲೇ ಕುಸಿದುಬಿದ್ದು ಯುವಕ ಸಾವು

    ಉಡುಪಿ: ಕಾಪು ಸಮೀಪದ ಇನ್ನಂಜೆ ಮೈದಾನದಲ್ಲಿ ಆಟವಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಕುಸಿದು ಬಿದ್ದು ರಾಜ್ಯಮಟ್ಟದ ವಾಲಿಬಾಲ್ ಆಟಗಾರ ಮೃತಪಟ್ಟ ಘಟನೆ ಶನಿವಾರ ತಡರಾತ್ರಿ ನಡೆದಿದೆ.

    ಕುರ್ಕಾಲು, ಸುಭಾಸ್ ನಗರ ನಿವಾಸಿ ದೇವರಾಜ್ ಅಂಚನ್(33) ಮೃತಪಟ್ಟವರು. ರಾಜ್ಯ ಮಟ್ಟದ ಹಲವಾರು ತಂಡಗಳಲ್ಲಿ ಆಟಗಾರನಾಗಿರುವ ಇವರು ಶನಿವಾರ ರಾತ್ರಿ ಇನ್ನಂಜೆ ಮೈದಾನದಲ್ಲಿ ನಡೆದ ವಾಲಿಬಾಲ್ ಪಂದ್ಯಾಟದಲ್ಲಿ‌ ಭಾಗವಹಿಸಿದ್ದರು.

    ಇದನ್ನೂ ಓದಿರಿ: ಮೇಟಿ ಪ್ರಕರಣ ಮುಚ್ಚಿ ಹಾಕುವಾಗ ನೀರವ್​ ಮೋದಿ, ವಿಜಯ ಮಲ್ಯ ನೆನಪಾಗಿಲ್ವಾ? ಸಿದ್ದುಗೆ ಗುದ್ದು ಕೊಟ್ಟ ಗೃಹ ಸಚಿವ

    ರಾತ್ರಿ ಒಂದು ಗಂಟೆಗೆ ಆಟವಾಡುತ್ತಿದ್ದ ವೇಳೆ ಹೃದಯಾಘಾತಕ್ಕೀಡಾಗಿ ದಿಢೀರ್ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಉಡುಪಿ ಆಸ್ಪತ್ರೆಗೆ ಕರೆದೊಯ್ದರು ಅಷ್ಟರೊಳಗೆ ಕೊನೆಯುಸಿರೆಳೆದರು.

    ಅವಿವಾಹಿತರಾಗಿದ್ದ ದೇವರಾಜ್ ನಾಲ್ಕು ತಿಂಗಳ ಹಿಂದೆ ತಂದೆಯನ್ನು ಕಳೆದುಕೊಂಡಿದ್ದು, ತಾಯಿ ಮತ್ತು ಐವರು ಸಹೋದರಿಯರನ್ನು ಅಗಲಿದ್ದಾರೆ.

    ಆತ್ಮಹತ್ಯೆಗೆ ರೈಲು ಹಳಿ ಮೇಲೆ ಮಲಗಿದ್ದವನ ಪ್ರಾಣವನ್ನು ಫೇಸ್​ಬುಕ್​ ಮೂಲಕವೇ ಕಾಪಾಡಿದ ಸ್ನೇಹಿತ!

    ಸದ್ದಿಲ್ಲದೆ ಮದುವೆಯಾದ ಚೈತ್ರಾ ಕೊಟ್ಟೂರು! ಅತ್ಯಂತ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ

    ಬಿಜೆಪಿ ಗೆದ್ದರೆ ಪ್ರತಿ ಹೆಣ್ಣು ಮಗುವಿನ ಖಾತೆಗೆ 1 ಲಕ್ಷ ರೂಪಾಯಿ: ಖುಷ್ಬೂ ಸುಂದರ್​ ಭರವಸೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts