ಬೆಂಗಳೂರು: ಮಾರ್ಚ್ 29ರಂದು ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ 17ನೇ ಆವೃತ್ತಿಯ ಐಪಿಎಲ್ ಪಂದ್ಯದಲ್ಲಿ ಕಲ್ಕತ್ತಾ ನೈಟ್ರೈಡರ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಕಲ್ಕತ್ತಾ ಆರ್ಸಿಬಿ ತವರಿನಲ್ಲಿ ತನ್ನ ಪಾರುಪತ್ಯವನ್ನು ಮುಂದುವರೆಸಿದೆ.
ಇದುವರೆಗೆ ಮೂರು ಪಂದ್ಯಗಳನ್ನಾಡಿರುವ ಆರ್ಸಿಬಿ ತಂಡವು 2 ಮ್ಯಾಚ್ಗಳಲ್ಲಿ ಸೋತಿದೆ. ಮೊದಲ ಪಂದ್ಯದಲ್ಲಿ ಸಿಎಸ್ಕೆ ವಿರುದ್ಧ ಸೋತಿದ್ದ ಆರ್ಸಿಬಿ ಆ ಬಳಿಕ ಪಂಜಾಬ್ ಕಿಂಗ್ಸ್ ವಿರುದ್ದ ಜಯ ಸಾಧಿಸಿತ್ತು. ಇದೀಗ ಕೆಕೆಆರ್ ವಿರುದ್ಧ ಹೀನಾಯ ಸೋಲನುಭವಿಸಿದೆ. ಈ ಮೂಲಕ ಐಪಿಎಲ್ ಆವೃತ್ತಿಯಲ್ಲಿ ತವರಿನಲ್ಲಿ ಪರಾಜಯಗೊಂಡ ಮೊದಲ ತಂಡ ಎಂಬ ಅಪಕೀರ್ತಿಗೆ ಪಾತ್ರವಾಗಿದೆ.
ಕಲ್ಕತ್ತಾ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 182 ರನ್ ಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವಿರಾಟ್ ಕೊಹ್ಲಿ ತಮ್ಮ ಅಜೇಯ ಆಟದ ಮೂಲಕ ತಂಡದ ಮೊತ್ತ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ, ಆರ್ಸಿಬಿ ಸೋಲಿಗೆ ವಿರಾಟ್ ಕೊಹ್ಲಿ ಗಳಿಸಿದ ಈ 83 ರನ್ ಕಾರಣ ಎಂದು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಆರೋಪಿಸಿದ್ದಾರೆ.
ಇದನ್ನೂ ಓದಿ: ಇನ್ನು ಮುಂದೆ ಹಾರ್ದಿಕ್ ಪಾಂಡ್ಯರನ್ನು ಟೀಕಿಸುವಂತಿಲ್ಲ; ಇಲ್ಲವಾದಲ್ಲಿ ಜಾರಿಯಾಗುತ್ತೆ ಕಠಿಣ ಕ್ರಮ
ಕೆಕೆಆರ್ ಪರ ಇನ್ನಿಂಗ್ಸ್ ಆರಂಭಿಸಿದ ಸುನೀಲ್ ನರೈನ್ ಆರಂಭಿಕರಾಗಿ ಕಣಕ್ಕಿಳಿದಾಗ ಹೆಚ್ಚು ಬೌನ್ಸರ್ ಹಾಗೂ ಯಾರ್ಕರ್ಗಳನ್ನು ಹಾಕಬೇಕಾಗುತ್ತದೆ. ಆದರೆ, ಬೆಂಗಳೂರಿನಂತಹ ಪಿಚ್ಗಳಲ್ಲಿ ಸುನೀಲ್ ನರೈನ್ ಬಗ್ಗೆ ತಿಳಿದು ನೀವು ಹಾಗೆ ಮಾಡದಿದ್ದಲ್ಲಿ ಪವರ್ಪ್ಲೇನಲ್ಲಿ ಪಂದ್ಯ ನಿಮ್ಮ ಕೈತಪ್ಪಿ ಹೋಗುತ್ತದೆ. ಫಿಲ್ ಸಾಲ್ಟ್ ಕೂಡ ಅವರ ಜೊತೆಗಿದ್ದರು. ಫಿಲ್ ಸಾಲ್ಟ್ ಮೊದಲ ಓವರ್ನಲ್ಲಿಯೇ 18 ರನ್ ಗಳಿಸಿದರು. ಅವರು ಅದ್ಭುತವಾಗಿದ್ದರು. ಕೇವಲ ಸನ್ನಿವೇಶಕ್ಕೆ ತಕ್ಕಂತೆ, ಎದುರಾಳಿ ತಂಡವು ಉತ್ತಮವಾಗಿ ಬೌಲ್ ಮಾಡಿದರು.
ವಿರಾಟ್ ಕೊಹ್ಲಿ 59 ಎಸೆತಗಳಲ್ಲಿ 83 ರನ್ ಗಳಿಸಿದರು. ಆದರೆ, ಕಲ್ಕತ್ತಾ 5.5 ಓವರ್ಗಳಲ್ಲಿ 83 ರನ್ ಗಳಿಸಿತ್ತು. ಆದರೆ, ಆರ್ಸಿಬಿ ಕೊಹ್ಲಿ 10 ಓವರ್ಗಳನ್ನು (1 ಎಸೆತ ಕಡಿಮೆ) ಎದುರಿಸಿದ್ದರು. ಇದಾಗ್ಯೂ ಅವರು ಕಲೆಹಾಕಿದ್ದು 8.3 ರ ಸರಾಸರಿಯಲ್ಲಿ ರನ್ ಗಳಿಸಿದ್ದು, ದೊಡ್ಡ ಹಿನ್ನಡೆಯಾಯಿತು. ಬೌಲರ್ಗಳು ಕೂಡ ಉತ್ತಮ ಮೊತ್ತ ರಕ್ಷಿಸಿಕೊಳ್ಳುವಲ್ಲಿ ವಿಫಲವಾದರು ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.