More

    ಐಪಿಎಲ್​ ಗುಂಗಿನಿಂದ ಹೊರಬಂದು ಸಂಕಷ್ಟದಲ್ಲಿರುವವರ ಸಹಾಯಕ್ಕೆ ಮುಂದಾದ ಕ್ಯಾಪ್ಟನ್​ ಕೊಹ್ಲಿ

    ಮುಂಬೈ: ದೇಶದಲ್ಲಿ ಕರೊನಾ ಸೋಂಕಿನ ತೀವ್ರತೆ ಹೆಚ್ಚಾದ ಹಿನ್ನೆಲೆಯಲ್ಲಿ ಐಪಿಎಲ್​ ಟೂರ್ನಮೆಂಟ್​ನ್ನು ಮುಂದೂಡಲಾಗಿದೆ. ಎಲ್ಲ ತಂಡದ ಆಟಗಾರರು ಅವರವರ ಕೆಲಸಕ್ಕೆ ವಾಪಾಸಾಗಿದ್ದಾರೆ. ಇದೀಗ ಆರ್​ಸಿಬಿ ತಂಡದ ನಾಯಕ ಕೊಹ್ಲಿ ಕೂಡ ಮುಂಬೈಗೆ ವಾಪಾಸಾಗಿದ್ದು, ಕರೊನಾದಿಂದ ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ.

    ಕರೊನಾದಿಂದ ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುವ ಕುರಿತಾಗಿ ಯುವ ಸೇನೆ ಸಂಘಟನೆಯ ಸದ್ಯ ರಾಹುಲ್​ ಎನ್​ ಕನಾಲ್​ ಅವರು ಗುರುವಾರದಂದು ವಿರಾಟ್​ ಕೊಹ್ಲಿಯನ್ನು ಭೇಟಿಯಾಗಿದ್ದಾರೆ. ಯಾವ ರೀತಿಯಲ್ಲಿ ಜನರಿಗೆ ನೆರವಾಗಬಹುದು ಎನ್ನುವುದನ್ನು ಕೊಹ್ಲಿಯೊಂದಿಗೆ ಚರ್ಚಿಸಿರುವುದಾಗಿ ಅವರು ಹೇಳಿಕೊಂಡಿದ್ದಾರೆ.

    ಕರೊನಾ ಸೋಂಕಿತರಿಗೆ ಆಕ್ಸಿಜನ್​ ಸೇರಿ ಕೆಲ ನೆರವನ್ನು ನೀಡುವುದಾಗಿ ಆರ್​ಸಿಬಿ ಫ್ರಾಂಚೈಸಿ ಕೂಡ ಹೇಳಿಕೊಂಡಿದೆ. ಕೇವಲ ಕ್ರಿಕೆಟ್​ ಆಟಗಾರರು ಮಾತ್ರವಲ್ಲದೆ, ಸಿನಿಮಾ ತಾರೆಯರೂ ಈ ಸಂಕಷ್ಟದ ಸಮಯದಲ್ಲಿ ಜನರ ನೆರವಿಗೆ ಮುಂದಾಗಿದ್ದಾರೆ. (ಏಜೆನ್ಸೀಸ್)

    ಛಿಛೋರೆ ಸಿನಿಮಾದಲ್ಲಿ ನಟಿಸಿದ್ದ ಅಭಿಲಾಷಾ ಪಾಟೀಲ್ ಕರೊನಾಗೆ ಬಲಿ!

    ಮದುವೆಯಲ್ಲಿ ಗಂಡನಿಗೆ ತಾಳಿ ಕಟ್ಟಿದ ಹೆಂಡತಿ! ಹಠ ಹಿಡಿದು ತಾಳಿ ಕಟ್ಟಿಸಿಕೊಂಡ ಪತಿರಾಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts