More

    ‘ಲಂಕಾಸುರ’ನಾದ ವಿನೋದ್ ಪ್ರಭಾಕರ್

    ‘ಶ್ಯಾಡೋ’ ಎಂಬ ಚಿತ್ರದ ರಿಲೀಸ್‌ಗೆ ಕಾಯುತ್ತಿರುವ ವಿನೋದ್ ಪ್ರಭಾಕರ್ ಸದ್ದಿಲ್ಲದೆ ಹೊಸ ಚಿತ್ರ ಸೈನ್ ಮಾಡಿದ್ದಾರೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಇಷ್ಟರಲ್ಲಿ ಚಿತ್ರದ ಮುಹೂರ್ತವಾಗಿ, ಶೂಟಿಂಗ್ ಶುರುವಾಗಿರಬೇಕಿತ್ತು. ಆದರೆ, ಲಾಕ್‌ಡೌನ್ ಕಾರಣದಿಂದ ಚಿತ್ರದ ಮುಹೂರ್ತ ಮುಂದಕ್ಕೆ ಹೋಗಿದೆ.

    ಆ ಚಿತ್ರ ಯಾವುದು? ಯಾರು ನಿರ್ದೇಶಕರು? ಯಾರು ನಿರ್ಮಿಸುತ್ತಿದ್ದಾರೆ? ಎಂಬೆಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.
    ಚಿತ್ರದ ಹೆಸರಿನ ಬಗ್ಗೆ ಚಿತ್ರತಂಡದವರು ಯಾವುದೇ ಗುಟ್ಟು ಬಿಟ್ಟುಕೊಡದಿದ್ದರೂ, ಮೂಲಗಳ ಪ್ರಕಾರ ಚಿತ್ರಕ್ಕೆ ‘ಲಂಕಾಸುರ’ ಎಂಬ ಹೆಸರನ್ನು ಇಡಲಾಗಿದೆಯಂತೆ. ಇದೊಂದು ಆ್ಯಕ್ಷನ್-ಲವ್ ಸ್ಟೋರಿಯಾಗಿದ್ದು. ಅವರಿಗೆ ನಾಯಕಿಯಾಗಿ ಪಾರ್ವತಿ ಅರುಣ್ ನಟಿಸುತ್ತಿದ್ದಾರೆ. ಪಾರ್ವತಿ ಇದಕ್ಕೂ ಮುನ್ನ ಗಣೇಶ್ ಅಭಿನಯದ ‘ಗೀತಾ’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು. ಈಗ ಅವರು, ವಿನೋದ್ ಜತೆಗೆ ಆ್ಯಕ್ಟ್ ಮಾಡಲು ಸಜ್ಜಾಗಿದ್ದಾರೆ.

    ಈ ಚಿತ್ರವನ್ನು ಎ.ಎಂ.ಎಸ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಹೇಮಾವತಿ ಮುನಿಸ್ವಾಮಿ ಪ್ರೊಡ್ಯೂಸ್ ಮಾಡುತ್ತಿದ್ದಾರೆ. ಈ ಹಿಂದೆ, ಇದೇ ಸಂಸ್ಥೆಯಿಂದ ‘ಕುಲ್ಫಿ’ ಎಂಬ ಚಿತ್ರ ನಿರ್ಮಾಣವಾಗಿತ್ತು. ಇನ್ನು ‘ಮೂರ್ಕಲ್ ಎಸ್ಟೇಟ್’ ಚಿತ್ರವನ್ನು ನಿರ್ದೇಶಿಸಿದ್ದ ಪ್ರಮೋದ್ ಕುಮಾರ್, ಚಿತ್ರಕಥೆ ಬರೆಯುವುದರ ಜತೆಗೆ ನಿರ್ದೇಶನ ಮಾಡುತ್ತಿದ್ದಾರೆ. ವಿಜೇತ್ ಕೃಷ್ಣ ಸಂಗೀತ ಕಂಪೋಸ್ ಮಾಡುತ್ತಿದ್ದು, ಸುಜ್ಞಾನ್ ಛಾಯಾಗ್ರಹಣ ಮಾಡಲಿದ್ದಾರೆ. ಇನ್ನು ಹಿರಿಯ ಸಾಹಸ ನಿರ್ದೇಶಕ ಕೆ.ಡಿ. ವೆಂಕಟೇಶ್, ಈ ಚಿತ್ರಕ್ಕೆ ಭರ್ಜರಿ ಐದು ಫೈಟ್‌ಗಳನ್ನು ಕಂಪೋಸ್ ಮಾಡುತ್ತಿದ್ದಾರೆ.

    ಈಗಾಗಲೇ ಚಿತ್ರದ ಫೋಟೋ ಶೂಟ್ ಮುಗಿದಿದ್ದು, ಲಾಕ್‌ಡೌನ್ ಕಡಿಮೆಯಾಗುತ್ತಿದ್ದಂತೆಯೇ ಮೊದಲು ಚಿತ್ರದ ಟೈಟಲ್ ಬಿಡುಗಡೆಯಾಗಲಿದೆ. ಕ್ರಮೇಣ ಚಿತ್ರೀಕರಣ ಪ್ರಾರಂಭವಾಗಲಿದೆ.

    ಅನಿಲ್ ಕಪೂರ್ ಜತೆಗೆ ಅಭಿನಯಿಸುವುದನ್ನು ಮಾಧುರಿ ನಿಲ್ಲಿಸಿದ್ದೇಕೆ ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts