ಮೈಸೂರು: ಪ್ರೀತಿಸುತ್ತಿದ್ದ ಯುವಕ-ಯುವತಿಯನ್ನು ಕಂಬಕ್ಕೆ ಕಟ್ಟಿ ಮನಬಂದಂತೆ ಹಲ್ಲೆ ನಡೆಸಿರುವ ಅಮಾನವೀಯ ಘಟನೆಯೊಂದು ಮೈಸೂರು ಜಿಲ್ಲೆಯಲ್ಲಿ ನಡೆದಿದೆ. ನಂಜನಗೂಡು ತಾಲೂಕಿನ ಹೆಮ್ಮರಗಾಲ ಎಂಬಲ್ಲಿ ಈ ಪ್ರಕರಣ ನಡೆದಿದೆ.
ಯುವತಿಯೊಬ್ಬಳು ಯುವಕನೊಂದಿಗೆ ಅನೈತಿಕ ಸಂಬಂಧ ಹೊಂದಿರುವ ಶಂಕೆ ಆರೋಪದಲ್ಲಿ ಗ್ರಾಮಸ್ಥರು ಈ ಕೃತ್ಯ ಎಸಗಿದ್ದಾರೆ. ನಿನ್ನೆ ರಾತ್ರಿಯಿಂದಲೂ ಇಬ್ಬರನ್ನು ವಿದ್ಯುತ್ ಕಂಬಕ್ಕೆ ಕಟ್ಟಿ, ಮನ ಬಂದಂತೆ ಥಳಿಸಿ ಹಲ್ಲೆ ನಡೆಸಲಾಗಿದೆ.
ಇದನ್ನೂ ಓದಿ: ‘ಸಖತ್’ ಸಿನಿಮಾ ವಿರುದ್ಧ ಎದ್ದಿತೊಂದು ದನಿ, ಅಂಧರ ಕ್ಷಮೆ ಕೋರಲು ಮುಂದಾದ್ರು ಚಿತ್ರ ನಿರ್ದೇಶಕ ಸುನಿ..
ಹೆಮ್ಮರಗಾಲದ ಮಹಿಳೆ ಹಾಗೂ ನೇರಳೆ ಗ್ರಾಮದ ಪುರುಷ ಹಲ್ಲೆಗೊಳಗಾಗಿರುವವರು. ಇಬ್ಬರ ನಡುವೆ ಹಲವು ವರ್ಷಗಳಿಂದ ಅನೈತಿಕ ಸಂಬಂಧ ಇತ್ತು. ಮಹಿಳೆ ಮನೆಗೆ ಪುರುಷ ಬಂದಾಗ ಗ್ರಾಮಸ್ಥರು ಹಿಡಿದು ಥಳಿಸಿದ್ದಾರೆ.
ಇದನ್ನೂ ಓದಿ: ಮರಣಸ್ವರೂಪಿ ಕೆಎಸ್ಆರ್ಟಿಸಿ?!: ಗಂಡ-ಹೆಂಡತಿ-ಮಗ, ಅಪ್ಪ-ಮಗ, ಅಂಗವಿಕಲೆ ಬಳಿಕ ಇಂದು ಯುವಕನೊಬ್ಬನ ಬಲಿ ಪಡೆದ ಬಸ್..
ಇಬ್ಬರನ್ನೂ ಗ್ರಾಮದ ನಡುಬೀದಿಯ ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿದ್ದಲ್ಲದೆ, ಅನ್ನ-ನೀರು ಕೊಡದೆ ಸತಾಯಿಸಲಾಗಿದೆ. ಗಂಟೆಗಟ್ಟಲೆ ಇಬ್ಬರನ್ನೂ ಕಟ್ಟಿ ಹಾಕಲಾಗಿದ್ದರೂ ಇದು ಇನ್ನೂ ಪೊಲೀಸರ ಗಮನಕ್ಕೆ ಬಂದಿಲ್ಲ ಎನ್ನಲಾಗಿದೆ.
ಹಾವೇರಿ ಬಿಜೆಪಿ ಶಾಸಕ ನೆಹರೂ ಓಲೇಕಾರ್ ಅವರ ಇಬ್ಬರು ಮೊಮ್ಮಕ್ಕಳ ಆತ್ಮಹತ್ಯೆ; ತಮ್ಮ ಸತ್ತ ಸ್ಥಳದಲ್ಲೇ ನೇಣು ಹಾಕಿಕೊಂಡ ಅಕ್ಕ..
ಐಪಿಎಸ್ ಆಫೀಸರ್ ಆಗಿದ್ದ ಇವರೀಗ ಸೆಕ್ಯುರಿಟಿ ಆಫೀಸರ್!: ನಿರಪರಾಧಿ ಆರ್ಎಸ್ಎಸ್ ಕಾರ್ಯಕರ್ತರ ಪರ ನಿಂತಿದ್ದೇ ಮುಳುವಾಯ್ತು..