More

    ಫಲಿತಾಂಶ ನೋಡಲು ಅಭ್ಯರ್ಥಿಯೇ ಇಲ್ಲ; ಗ್ರಾಮ ಪಂಚಾಯತ್ ಚುನಾವಣೆ ಸುತ್ತಮುತ್ತ ಅಭ್ಯರ್ಥಿಗಳಿಬ್ಬರ ಸಾವು!

    ಧಾರವಾಡ: ಇಲ್ಲಿ ಗ್ರಾಮ ಪಂಚಾಯತ್ ಚುನಾವಣೆಯ ಫಲಿತಾಂಶ ನೋಡಲು ಅಭ್ಯರ್ಥಿಯೇ ಇಲ್ಲ ಎಂಬಂತಾಗಿದೆ. ಏಕೆಂದರೆ ಚುನಾವಣೆಗೆ ಸ್ಪರ್ಧಿಸಿದ್ದ ಮಹಿಳಾ ಅಭ್ಯರ್ಥಿಯೊಬ್ಬರು ಫಲಿತಾಂಶ ಪ್ರಕಟವಾಗುವ ಮುನ್ನವೇ ಇಹಲೋಕ ತ್ಯಜಿಸಿದ್ದಾರೆ.

    ಧಾರವಾಡದ ಮನಗುಂಡಿ ಗ್ರಾಮದಲ್ಲಿ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಮನಗುಂಡಿಯ 2ನೇ ವಾರ್ಡ್​ನ ‘ಅ’ ವರ್ಗದಿಂದ ಸ್ಪರ್ಧಿಸಿದ್ದ ಶೋಭಾ ಮಲ್ಲೇಶ ಹಡಪದ ಅವರು ಹೃದಯಾಘಾತಕ್ಕೀಡಾಗಿ ಮೃತಪಟ್ಟಿದ್ದಾರೆ.

    ಇವರು ಮನಗಂಡಿ 2ನೇ ವಾರ್ಡ್​ನಲ್ಲಿ ಕ್ರಮಸಂಖ್ಯೆ 8ರಲ್ಲಿ ಬಕೆಟ್​ ಚಿಹ್ನೆಯೊಂದಿಗೆ ಸ್ಪರ್ಧಿಸಿದ್ದರು. ಇನ್ನು ಚುನಾವಣೆ ದಿನವೇ ಧಾರವಾಡದಲ್ಲಿ ಅಭ್ಯರ್ಥಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಮೂಲಕ ಧಾರವಾಡದಲ್ಲಿ ಗ್ರಾಮ ಪಂಚಾಯತ್​ ಚುನಾವಣೆಗೆ ಸ್ಪರ್ಧಿಸಿದ್ದ ಇಬ್ಬರು ಅಭ್ಯರ್ಥಿಗಳು ಫಲಿತಾಂಶಕ್ಕೂ ಮುನ್ನವೇ ಅಗಲಿದಂತಾಗಿದೆ.

    ಫಲಿತಾಂಶ ನೋಡಲು ಅಭ್ಯರ್ಥಿಯೇ ಇಲ್ಲ; ಗ್ರಾಮ ಪಂಚಾಯತ್ ಚುನಾವಣೆ ಸುತ್ತಮುತ್ತ ಅಭ್ಯರ್ಥಿಗಳಿಬ್ಬರ ಸಾವು!

    ಗ್ರಾಮಾಯಣ: ಚುನಾವಣೆಗೂ ಮೊದಲೇ ಸೋಲಿನ ಭೀತಿಗೆ ಅಭ್ಯರ್ಥಿ ಆತ್ಮಹತ್ಯೆ?!

    ‘ಬೆಳಗೆದ್ದು..’ ಹಳೇದನ್ನೆಲ್ಲ ನೆನಪಿಸಿಕೊಂಡರು ನಟಿ ರಶ್ಮಿಕಾ!

    ಸುಮ್ಮನೆ ಫೋನ್​ನಲ್ಲಿ ಮಾತಾಡಿ ಗೆಳೆತನ ಬೆಳೆಸಿದ್ದಕ್ಕೆ ಜೀವ ಕಳೆದುಕೊಂಡಳು..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts