ಲಖನೌ: ಕಾನ್ಪುರದಲ್ಲಿ ಎಂಟು ಮಂದಿ ಪೊಲೀಸರನ್ನು ಹತ್ಯೆ ಗೈದ ನಟೊರಿಯಸ್ ಗ್ಯಾಂಗ್ಸ್ಟರ್ ವಿಕಾಸ್ ದುಬೆಯನ್ನು ಇಂದು ಮಧ್ಯಪ್ರದೇಶ ಪೊಲೀಸರು ಉಜ್ಜಯನಿಯ ಮಹಾಕಾಲ ದೇವಸ್ಥಾನದಲ್ಲಿ ಬಂಧಿಸಿದ್ದಾರೆ.
ವಿಕಾಸ್ ದುಬೆಯನ್ನು ಈಗಾಗಲೇ ಉತ್ತರ ಪ್ರದೇಶ ಪೊಲೀಸ್ ಸ್ಪೆಶಲ್ ಟಾಸ್ಕ್ ಫೋರ್ಸ್ನ ವಶಕ್ಕೆ ನೀಡಲಾಗಿದ್ದು, ಮಧ್ಯಪ್ರದೇಶದಿಂದ ರಸ್ತೆ ಮಾರ್ಗವಾಗಿಯೇ ಉತ್ತರ ಪ್ರದೇಶಕ್ಕೆ ಆತನನ್ನು ಕರೆತರಲಾಗಿದೆ.
ಇದೀಗ ವಿಕಾಸ್ ದುಬೆಯ ಪತ್ನಿ ಹಾಗೂ ಮಗನನ್ನೂ ಲಖನೌನಲ್ಲಿ ಉತ್ತರ ಪ್ರದೇಶ ಪೊಲಿಸರು ಬಂಧಿಸಿದ್ದಾಗಿ ವರದಿಯಾಗಿದೆ.
ಲಖನೌದ ಕೃಷ್ಣಾ ನಗರದ ಪ್ರದೇಶದಲ್ಲಿ ವಿಕಾಸ್ ದುಬೆಯ ಪತ್ನಿ ಮತ್ತು ಮಗನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)
ಕೇರಳದ ‘ಚಿನ್ನ’ ಪ್ರಕರಣದ ತನಿಖೆಯನ್ನು ಎನ್ಐಎಗೆ ವಹಿಸಿದ ಕೇಂದ್ರ ಸರ್ಕಾರ