More

    ವಿಜಯವಾಡ- ಸಿಕಂದರಾಬಾದ್ ರೈಲಿನಲ್ಲಿ ಬಾಂಬ್​ ಎಂದು ಕರೆ; ನಿಲ್ದಾಣದಲ್ಲಿ ಆತಂಕ, ತೀವ್ರ ತಪಾಸಣೆ ನಡೆಸಿದ ರೈಲ್ವೇ ಪೊಲೀಸರು

    ಹೈದರಾಬಾದ್​: ವಿಜಯವಾಡ- ಸಿಕಂದರಾಬಾದ್​ ರೈಲಿನಲ್ಲಿ ಬಾಂಬ್​ ಇದೆ ಎಂದು ಪೋನ್​ ಕರೆ ಬಂದ ಹಿನ್ನೆಲೆಯಲ್ಲಿ ಆತಂಕ ವಾತಾವರಣ ನಿರ್ಮಾಣವಾಗಿತ್ತು.

    ಕರೆ ಬಂದ ತಕ್ಷಣವೇ ಆರ್​ಪಿಎಫ್​, ಪೊಲೀಸರು ಮತ್ತು ಬಾಂಬ್​ ನಿಷ್ಕ್ರೀಯ ದಳ ಇಡೀ ರೈಲಿನ ತಪಾಸಣೆ ಮಾಡಿತು. ಆದರೆ ಅನುಮಾನಾಸ್ಪದ ವಸ್ತುಗಳು ದೊರೆತಿಲ್ಲ ಎಂದು ಆರ್​ಪಿಎಫ್​ನ ಅಧೀಕ್ಷಕಿ ಅನುರಾಧ ತಿಳಿಸಿದ್ದಾರೆ.

    ಇಂದು ಬೆಳಗ್ಗೆ ವಿಜಯವಾಡ- ಸಿಕಂದರಾಬಾದ್​ ರೈಲಿನಲ್ಲಿ ಬಾಂಬ್​ ಇಡಲಾಗಿದೆ ಎಂಬ ಕರೆ ಬಂದಿತು. ನಮ್ಮ ಸಿಬ್ಬಂದಿ ರೈಲನ್ನು ಸಂಪೂರ್ಣವಾಗಿ ತಪಾಸಣೆ ನಡೆಸಿದರು. ಆದರೆ ಬಾಂಬ್​ ಪತ್ತೆಯಾಗಿಲ್ಲ. ಅದು ಕೇವಲ ಹುಸಿ ಕರೆ. ಆತಂಕ ಸೃಷ್ಟಿಸಲು ಕರೆ ಮಾಡಲಾಗಿದೆ ಎಂದು ಅನುರಾಧ ತಿಳಿಸಿದರು.

    ಈ ಬಗ್ಗೆ ರೈಲ್ವೇ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ. ಕರೆ ಬಂದ ಮೂಲದ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts