More

    ಭಾರತೀಯರು ನಾವೆಲ್ಲ ಒಂದೇ

    ವಿಜಯಪುರ: ವಿವಿಧ ವೇಷಭೂಷಣ, ಉಡುಗೆ ತೊಡುಗೆ, ಆಚಾರ ವಿಚಾರಗಳು ಅನೇಕ ರೀತಿಯಾಗಿದ್ದರೂ ಭಾರತೀಯರು ನಾವೆಲ್ಲ ಒಂದೇ ಎಂದು ಇತಿಹಾಸತಜ್ಞ ಡಾ ಆನಂದ ಜೆ. ಕುಲಕರ್ಣಿ ಹೇಳಿದರು.
    ಭಾರತ ಸರ್ಕಾರದ ಕ್ಷೇತ್ರ ಜನಸಂಪರ್ಕ ಕಾರ್ಯಾಲಯ, (ವಾರ್ತಾ ಮತ್ತು ಪ್ರಸಾರ ಸಚಿವಾಲಯ), ವೇದಾಂತ ಶಿಕ್ಷಣ ಸಂಸ್ಥೆ ವೇದಾಂತ ಬಿಸಿಎ ಮತ್ತು ಬಿಕಾಂ ಕಾಲೇಜು ಹಾಗೂ ಸ್ವಚ್ಛ ಭಾರತ ಸಂಸ್ಥೆ ಸಹಯೋಗದಲ್ಲಿ ‘ಏಕ ಭಾರತ ಶ್ರೇಷ್ಠ ಭಾರತ-ವಿವಿಧತೆಯಲ್ಲಿ ಏಕತೆಯ ಸಾಕಾರತೆ’ಎಂಬ ವಿಷಯದ ಕುರಿತು ವೇದಾಂತ ಕಾಲೇಜು ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

    ನಮ್ಮ ಮಾತೃಭೂಮಿ ಬಗ್ಗೆ ಹೆಮ್ಮೆ, ದೇಶದ ಪಾರಂಪರಿಕ ಸಂಸ್ಕೃತಿ- ಆಚಾರ ವಿಚಾರಗಳನ್ನು ವಿವರಿಸುತ್ತ ಅನೇಕತೆಯಲ್ಲಿ ಏಕತೆ ಕಾಣುವ ನಮ್ಮ ದೇಶ ಜಗತ್ತಿಗೆ ಸಹೋದರತೆ ಕಾಣುವಲ್ಲಿ ಮಾದರಿ ದೇಶವಾಗಿದೆ ಎಂದು ಹೇಳಿದರು.
    ಕ್ಷೇತ್ರ ಜನಸಂಪರ್ಕ ಕಾರ್ಯಾಲಯದ ಪ್ರಚಾರ ಸಹಾಯಕ ಸಿ.ಕೆ.ಸುರೇಶ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರತಿಯೊಬ್ಬ ನಾಗರಿಕನಿಗೂ ದೇಶದ ಬಗ್ಗೆ ಹೆಮ್ಮೆ ಹಾಗೂ ಪರಿಕಲ್ಪನೆಯ ಸಂದೇಶ ತಲುಪಿಸುವುದೇ ನಮ್ಮ ಕಾರ್ಯಾಲಯದ ಮುಖ್ಯ ಗುರಿಯಾಗಿದೆ ಎಂದು ಹೇಳಿದರು.
    ವೇದಾಂತ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಹಾಗೂ ಪ್ರಾಂಶುಪಾಲ ಎಸ್.ಜಿ.ಮಠ ಅಧ್ಯಕ್ಷತೆ ವಹಿಸಿ,‘ಏಕ ಭಾರತ ಶ್ರೇಷ್ಠ ಭಾರತ’ನಂತರ ವಿಶೇಷ ಜಾಗೃತಿ ಕಾರ್ಯಕ್ರಮಗಳು ಇಂದಿನ ಯುವಕರಿಗೆ ಅವಶ್ಯಕವಾಗಿವೆ ಎಂದು ಹೇಳಿದರು.

    ಸಂಸ್ಥೆ ಆಡಳಿತಾಧಿಕಾರಿ ವಿಜಯಕುಮಾರ ಕೋತವಾಲ್ ಮಾತನಾಡಿ, ಲಾಕ್‌ಡೌನ್ ಸಂದರ್ಭದಲ್ಲಿ ಗ್ರಾಮೀಣ ಮಹಿಳಾ ಮತ್ತು ಮಕ್ಕಳ ಆರೋಗ್ಯ ಹಾಗೂ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುತ್ತ ಅವರ ಸಾಮಾಜಿಕ, ಆರ್ಥಿಕ ಸಭಲತೆಗಾಗಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳ ಸದ್ಭಳಕೆಗೆ ಸ್ವಚ್ಛ ಭಾರತ ಸಂಸ್ಥೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದೆ ಎಂದು ಹೇಳಿದರು.
    ಉಪನ್ಯಾಸಕಿ ನೀತಾ ಮಠ ಸ್ವಾಗತಿಸಿದರು. ಶಾಂತಾ ಬಾಗಿ ವಂದಿಸಿದರು. ವಿಠ್ಠಲ ಲಂಗೋಟಿ, ಎಂ.ಎಂ. ಕಿಣಗಿ, ಎಚ್.ವಿ. ಕುಲಕರ್ಣಿ, ಉಪನ್ಯಾಸಕರು, ಸ್ವಚ್ಛ ಭಾರತ ಸಂಸ್ಥೆಯ ಸ್ವಯಂ ಸೇವಕರು ಹಾಗೂ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts