More

    ಗುಂಡಿ ಮುಚ್ಚಿದ ಕಾಂಗ್ರೆಸ್ಸಿಗರು

    ವಿಜಯಪುರ: ರಸ್ತೆ ದುರಸ್ತಿಗೊಳಿಸುವಂತೆ ಆಗ್ರಹಿಸಿ ಕಾಂಗ್ರೆಸ್ ಮುಖಂಡರು,ಕಾರ್ಯಕರ್ತರು ವಿಜಯಪುರ ನಗರದಲ್ಲಿ ಗುಂಡಿ ಬಿದ್ದ ರಸ್ತೆಗಳನ್ನು ಮಣ್ಣಿನಿಂದ ಮುಚ್ಚುವ ಮೂಲಕ ಬುಧವಾರ ಪ್ರತಿಭಟನೆ ನಡೆಸಿದರು.
    ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್ ಮಾತನಾಡಿ, ವಿಜಯಪುರ ನಗರದಲ್ಲಿ ಮಳೆಯಿಂದಾಗಿ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ಅವುಗಳನ್ನು ದುರಸ್ತಿಗೊಳಿಸಲು ಪಾಲಿಕೆ ಅಧಿಕಾರಿಗಳು, ಸ್ಥಳೀಯ ಶಾಸಕರು ನಿರ್ಲಕ್ಷೃ ವಹಿಸುತ್ತಿದ್ದಾರೆ. ಇದರಿಂದಾಗಿ ವಾಹನ ಸವಾರರಿಗೆ ಪ್ರತಿನಿತ್ಯ ಓಡಾಡಲು ತೊಂದರೆ ಆಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ನಗರದ ಹೃದಯ ಭಾಗ ಕೇಂದ್ರ ಬಸ್ ನಿಲ್ದಾಣ ಸುತ್ತಲಿನ ಮೂರು ಮುಖ್ಯರಸ್ತೆಗಳಲ್ಲಿ ದಿನನಿತ್ಯ ಸಾವಿರಾರು ಬಸ್ ಹಾಗೂ ಲಕ್ಷಾಂತರ ಜನ ಓಡಾಡುವಂತಹ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿವೆ. ನಗರ ಜನತೆಗೆ ಅನುಕೂಲವಾಗುವ ನಿಟ್ಟಿನಲ್ಲಿ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚುವ ಕಾರ್ಯ ಮಾಡುತ್ತಿದ್ದೇವೆ. ಇದೀಗ ತಾತ್ಕಾಲಿಕ ವ್ಯವಸ್ಥೆ ಮಾಡಿದ್ದೇವೆ. ಪಾಲಿಕೆ ಆಯುಕ್ತರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ರಸ್ತೆ ನಿರ್ಮಾಣ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಉಗ್ರಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

    ಕಾಂಗ್ರೆಸ್ ನಗರ ಬ್ಲಾಕ್ ಅಧ್ಯಕ್ಷ ಜಮೀರ್ ಅಹ್ಮದ್ ಬಕ್ಷಿ, ಮುಖಂಡರಾದ ಆರತಿ ಶಹಾಪುರ, ರ್ಇಾನ್ ಶೇಖ, ಮಹಮ್ಮದ್ ರಫೀಕ್ ಟಪಾಲ್, ಡಾ.ಗಂಗಾಧರ ಸಂಬಣ್ಣಿ, ವಿದ್ಯಾರಾಣಿ ತುಂಗಳ, ಅಬ್ದುಲ್‌ಖಾದರ್ ಖಾದೀಮ, ಸಜ್ಜಾದೆಪೀರಾ ಮುಶ್ರೀಫ್, ಮೊಯಿನ್‌ಶೇಖ, ಮೈನುದ್ದೀನ್ ಬೀಳಗಿ, ಜಮೀರ್ ಬಾಂಗಿ, ಶಕೀಲ್ ಸುತಾರ, ವಸಂತ ಹೊನಮೊಡೆ, ಜಯಶ್ರೀ ಭಾರತೆ, ಅಜೀಂ ಇನಾಮದಾರ್, ಮಹ್ಮದ್ ಇಲಿಯಾಸ್ ಸಿದ್ದಿಕಿ, ಶರಣಪ್ಪ ಯಕ್ಕುಂಡಿ, ರವೀಂದ್ರ ಜಾಧವ, ಧನರಾಜ ಎ., ತಾಜುದ್ದಿನ್ ಖಲೀಾ, ಲಕ್ಷ್ಮಣ ಇಳಕಲ್, ಮಂಜುಳಾ ಜಾಧವ, ಮಂಜುಳಾ ಗಾಯಕವಾಡ, ಅಲ್ತಾಫ್ ಅಸ್ಕಿ, ಹಾಜಿಲಾಲ್ ದಳವಾಯಿ, ಆಸ್ಮಾ ಕಾಲೇಬಾಗ, ಈರಪ್ಪ ಕುಂಬಾರ, ರಫೀಕ್ ಆಲಮೇಲ ಇನ್ನಿತರರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts