More

    ಅಧಿಕಾರಿಗಳಿಗೆ ಸಂಸದರಿಂದ ಕನ್ನಡ ಪಾಠ:
    ಸಂಸದ ದೇವೇಂದ್ರಪ್ಪ ನೇತೃತ್ವದಲ್ಲಿ ದಿಶಾ ಸಮಿತಿ ಸಭೆ

    ಹೊಸಪೇಟೆ: ಇಲಾಖಾವಾರು ಪ್ರಗತಿ ವರದಿಯಲ್ಲಿ ಕನ್ನಡವನ್ನೇ ಬಳಸಬೇಕು. ನಮ್ಮದು ಕನ್ನಡ ಆಡಳಿತ ಭಾಷೆ ಎಂಬುದನ್ನು ಮರೆಯಬಾರದು ಎಂದು ಸಂಸದ ದೇವೇಂದ್ರಪ್ಪ ಅಧಿಕಾರಿಗಳ ವಿರುದ್ಧ ಗರಂ ಆದರು.
    ವಿಜಯನಗರ ಜಿಲ್ಲಾ ಪಂಚಾಯತ ವತಿಯಿಂದ ನಗರದ ಒಳಂಗಣ ಕ್ರೀಡಾಂಗಣದಲ್ಲಿ ಸೋಮವಾರ ಆಯೋಜಿಸಿರುವ ಜಿಲ್ಲಾ ಅಭಿವೃದ್ಧಿ ಸಹಕಾರ ಮತ್ತು ಮೇಲ್ವಿಚಾರಣೆ ಸಮಿತಿ(ದಿಶಾ) ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಧಿಕಾರಿಗಳು ತಮ್ಮ ಇಲಾಖೆಗೆ ಸಂಬಂಧಿಸಿ ಸಭೆಗೆ ಸಲ್ಲಿರುವ ವರದಿಯಲ್ಲಿ ಸಹಿಯನ್ನೇ ಮಾಡಿಲ್ಲ. ಇದು ಅಧಿಕೃವೆಂದು ಹೇಗೆ ಭಾವಿಸಬೇಕು.  ಅನೇಕರು ಇಂಗ್ಲಿಷ್ ನಲ್ಲಿ ವರದಿ ನೀಡಿದ್ದಾರೆ. ಈ‌ ಪರಿಪಾಠವನ್ನು ಬಿಡಬೇಕು ಎಂದು‌ ತಾಕೀತು ಮಾಡಿದರು.‌
    ಮೇಲಾಗಿ ಇವತ್ತೇ ಪ್ರಗತಿ ಪುಸ್ತಕವನ್ನು ಸಭೆಯಲ್ಲಿ ನೀಡಿದರೆ ನಾವು ಅವಲೋಕಿಸಬೇಕು. ಕನಿಷ್ಟ ನಾಲ್ಕೈದು ದಿನಗಳ ಮುನ್ನವೇ ನೀಡುವುದನ್ನು ರೂಢಿಸಿಕೊಳ್ಳಬೇಕು.  ನರೇಗಾ ದೇಶದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ.  ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರತಿ ವಾರಕ್ಕೊಮ್ಮೆಯಾದರೂ ಕಾಮಗಾರಿ ಸ್ಥಳಕ್ಕೆ  ಭೇಟಿ ನೀಡಬೇಕು. ವಿಶೇಷ ಕಾಮಗಾರಿಗಳ ಕೈಗೊಂಡಲ್ಲಿ ನಮ್ಮ ಗಮನಕ್ಕೆ ತರಬೇಕು. ನಾವೂ ಅದನ್ನು ಪರಿಶೀಲಿಸುತ್ತೇವೆ ಎಂದು ಹೇಳಿದರು.
    ಈ ವೇಳೆ ಮಧ್ಯಪ್ರವೇಶಿಸಿದ ಜಿ.ಪಂ. ಸಿಇಒ ಹರ್ಷಲ್ ಬೋಯರ್ ನಾರಾಯಣರಾವ್, ಸಭೆಯ ವರದಿಯಲ್ಲಿ ಅಂಕಿ- ಅಂಶಗಳು ಮಾತ್ರ ಇಂಗ್ಲಿಷ್ ನಲ್ಲಿವೆ ಎಂದು ಸಮಜಾಯಿಷಿ ನೀಡಿದ ಅವರು, ಮುಂದಿನ ದಿನಗಳಲ್ಲಿ  ಎಲ್ಲವನ್ನೂ ಕನ್ನಡದಲ್ಲಿ ಒದಗಿಸಲು ಕ್ರಮವಹಿಸುವುದಾಗಿ ತಿಳಿಸಿದರು.
    ವಿವಿಧ ೨೩ ಇಲಾಖೆಗಳ‌ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts