More

    ಕಪ್​ ಎತ್ತಿದ ಆರ್​ಸಿಬಿ ಹೆಣ್ಣು ಹುಲಿಗಳು! ಪುರುಷರ ಟೀಮ್​​ ಐಪಿಎಲ್ ಗೆದ್ರೆ ವಿಜಯ್ ಮಲ್ಯ ಭಾರತಕ್ಕೆ?

    ಬೆಂಗಳೂರು: ಭಾನುವಾರ (ಮಾರ್ಚ್​ 17) ರಾಷ್ಟ್ರ ರಾಜಧಾನಿ ದೆಹಲಿಯ ಅರುಣ್​ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ವುಮೆನ್ಸ್ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಎರಡನೇ ಆವೃತ್ತಿಯ ಫೈನಲ್​ ಪಂದ್ಯದಲ್ಲಿ ಸ್ಮೃತಿ ಮಂದಾನ ನೇತೃತ್ವದ ಆರ್​ಸಿಬಿ ತಂಡ ಭರ್ಜರಿ ಜಯ ದಾಖಲಿಸುವ ಮೂಲಕ ಚೊಚ್ಚಲ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಈ ಗೆಲವು ವುಮೆನ್ಸ್​ ಪ್ರೀಮಿಯರ್​ ಲೀಗ್​​ನಲ್ಲಿ​​ ಹೊಸ ಇತಿಹಾಸ ಬರೆದಿದೆ.

    ಇದನ್ನೂ ಓದಿ: ಮೂರು ಪಕ್ಷ ಮೂರು ಅಸ್ತ್ರ: ಮೋದಿ ಅಲೆ ತಡೆಗೆ ಕೈ ತಂತ್ರ, ಕೇಂದ್ರದ ಸಾಧನೆ ದೋಸ್ತಿ ಮಂತ್ರ

    ಆರ್​ಸಿಬಿ ಅಭಿಮಾನಿಗಳ ಬಹುವರ್ಷಗಳ ಕನಸ್ಸನ್ನು ಆರ್​ಸಿಬಿ ವನಿತೆಯರ ನನಸು ಮಾಡಿದ್ದು, ಸದ್ಯ ಈ ಗೆಲುವು ಫ್ಯಾನ್ಸ್​ಗಳಲ್ಲಿ ಸಮಾಧಾನ ತಂದಿದೆ. ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಮಹಿಳಾ ತಂಡ ಟ್ರೋಫಿ ಎತ್ತು ಸಂಭ್ರಮಿಸುತ್ತಿದ್ದಂತೆ ಆರ್​ಸಿಬಿ ಅಭಿಮಾನಿಗಳಲ್ಲಿ ಹರ್ಷೋದ್ಘಾರ ಮನೆ ಮಾಡಿತು. ಇದರ ಬೆನ್ನಲ್ಲೇ ಈ ಬಾರಿಯ ಐಪಿಎಲ್​ನಲ್ಲಿ ಪುರುಷರ ತಂಡವೂ ಗೆಲ್ಲುವುದು ಖಚಿತ ಎಂದೆಲ್ಲಾ ಹೇಳಲಾಗುತ್ತಿದೆ.

    ಈ ಸಲ ಕಪ್​ ನಮ್ದೇ ಎನ್ನುತ್ತಿರುವ ಆರ್​ಸಿಬಿ ಫ್ಯಾನ್ಸ್​, ವಿರಾಟ್​ ಕೊಹ್ಲಿ ನಾಯಕತ್ವದಲ್ಲಿ ಬೆಂಗಳೂರು ತಂಡ ಖಂಡಿತವಾಗಿ ಈ ಸಲ ಕಪ್ ಗೆಲ್ಲಲಿದೆ ಎಂದು ಭವಿಷ್ಯವಾಣಿ ನುಡಿಯುತ್ತಿದ್ದಾರೆ. ಆರ್​ಸಿಬಿ ವುಮೆನ್ಸ್​ ಟೀಮ್​ ಗೆಲುವು ದಾಖಲಿಸುತ್ತಿದ್ದಂತೆ ಅಭಿನಂದನೆ ಟ್ವೀಟ್ ಮೂಲಕ ದಿಢೀರ್​ ಪ್ರತ್ಯಕ್ಷವಾದ ಉದ್ಯಮಿ ವಿಜಯ್ ಮಲ್ಯ, ವನಿತೆಯರಿಗೆ ಶುಭಹಾರೈಸಿದ್ದಾರೆ.

    “WPL ಗೆದ್ದ RCB ಮಹಿಳಾ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ಆರ್‌ಸಿಬಿ ಪುರುಷರ ತಂಡವು ಸಹ ಐಪಿಎಲ್ ಪಟ್ಟ ಗೆದ್ದರೆ ಅದು ಡಬಲ್ ಗೆಲುವಾಗಿರುತ್ತದೆ. ಶುಭವಾಗಲಿ” ಎಂದು ವಿಜಯ್​ ಮಲ್ಯ ಟ್ವೀಟ್​ ಮಾಡಿ ಅಭಿನಂದನೆ ತಿಳಿಸಿದ್ದಾರೆ. ಈ ಟ್ವೀಟ್ ನೋಡುತ್ತಿದ್ದಂತೆ ಮಿಶ್ರ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿರುವ ನೆಟ್ಟಿಗರು, ಹಾಸ್ಯಸ್ಪದವಾಗಿ ಕಮೆಂಟ್ ಮಾಡಿದ್ದಾರೆ.

    “ಒಬ್ಬರು ಇಂದು ಭಾನುವಾರ ಬ್ಯಾಂಕ್ ರಜೆ” ಎಂದರೆ ಮತ್ತೊಬ್ಬರು, “ಒಂದು ಡೀಲ್ ಮಾಡಿಕೊಳ್ಳೋಣ, ಆರ್​ಸಿಬಿ ಪುರಷರ ತಂಡ ಈ ಬಾರಿಯ ಐಪಿಎಲ್ ಗದ್ದರೆ ನೀವು ಭಾರತಕ್ಕೆ ಬರುತ್ತೀರಾ” ಎಂದು ಕಮೆಂಟ್ ಮಾಡಿದ್ದಾರೆ. ಸದ್ಯ ಇದೇ ರೀತಿಯಲ್ಲಿ ಭಾರೀ ಟ್ರೋಲ್​ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿವೆ.

    ಕರ್ನಾಟಕದಲ್ಲಿ ಮಲಯಾಳಂ ಚಿತ್ರದ ಅಬ್ಬರ! ಕನ್ನಡ ಚಿತ್ರಗಳನ್ನು ನೋಡೋರೇ ಇಲ್ವೇ?

    ‘ಇದೆಲ್ಲವೂ ನನ್ನ ಕುಟುಂಬದ ಮೇಲೆ ಪರಿಣಾಮ ಬೀರಿದೆ’; ಕಡೆಗೂ ಮೌನ ಮುರಿದ ಚಹಲ್ ಪತ್ನಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts