ಆನೇಕಲ್: ‘ದುನಿಯಾ’ ವಿಜಯ್ ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ತಮ್ಮ ಹುಟ್ಟೂರಾದ ಆನೇಕಲ್ನಲ್ಲಿ ತಂದೆ-ತಾಯಿಯ ಸಮಾಧಿ, ಅಭಿಮಾನಿಗಳ ಸಮ್ಮುಖದಲ್ಲಿ ದೊಡ್ಡ ಮಟ್ಟಿಗೆ ಆಚರಿಸಿಕೊಂಡಿದ್ದಾರೆ.
ಇದನ್ನೂ ಓದಿ: ಕಲಬುರಗಿಯಿಂದ ಕಾಲ್ನಡಿಗೆಯಲ್ಲಿ ಬಂದ ಅಭಿಮಾನಿಗೆ ಸನ್ಮಾನ ಮಾಡಿ ಕಾಲಿಗೆ ಬಿದ್ದ ನಟ ದುನಿಯಾ ವಿಜಯ್!
ಕಳೆದ ಕೆಲವು ವರ್ಷಗಳಿಂದ ವಿಜಯ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರಲಿಲ್ಲ. ವಿಜಯ್ ಅವರ ತಾಯಿ ಕಳೆದ ವರ್ಷ ನಿಧನರಾಗಿದ್ದರು. ಅದಾದ ಕೆಲವೇ ದಿನಗಳಲ್ಲಿ ಅವರ ತಂದೆಯೂ ಇನ್ನಿಲ್ಲವಾಗಿದ್ದರು. ಅಪ್ಪ-ಅಮ್ಮನ ಅಂತ್ಯಕ್ರಿಯೆಯನ್ನು ವಿಜಯ್, ತಮ್ಮ ಹುಟ್ಟೂರಾದ ಆನೇಕಲ್ನ ಕುಂಬಾರನಹಳ್ಳಿಯಲ್ಲಿ ನೆರವೇರಿಸಿದ್ದರು. ಅಷ್ಟೇ ಅಲ್ಲ, ಅಲ್ಲೇ ಸಮಾಧಿಯನ್ನೂ ಕಟ್ಟಿಸಿದ್ದರು. ಆ ಸಮಾಧಿಯ ಎದುರೇ ವಿಜಯ್ ತಮ್ಮ ಹುಟ್ಟುಹಬ್ಬವನ್ನು ಇಂದು ಆಚರಿಸಿಕೊಂಡಿದ್ದಾರೆ.
ಗುರುವಾರ ರಾತ್ರಿಯೇ ಆನೇಕಲ್ನತ್ತ ಪ್ರಯಾಣ ಬೆಳೆಸಿದ ವಿಜಯ್ ಅವರನ್ನು ನೋಡುವುದಕ್ಕೆ ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಬಂದಿದ್ದರು. ಇಂದು ಬೆಳಿಗ್ಗೆ ಸಮಾಧಿಗೆ ಪೂಜೆ ಸಲ್ಲಿಸಿ ಬಂದ ವಿಜಯ್, ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳೊಂದಿಗೆ ಕೇಕ್ ಕತ್ತರಿಸುವ ಮೂಲಕ ಆಚರಿಸಿದರು. ಅಭಿಮಾನಿಗಳನ್ನು ನಿಯಂತ್ರಿಸಲು 50ಕ್ಕೂ ಹೆಚ್ಚು ಬೌನ್ಸರ್ಗಳು ನೇಮಕ ಮಾಡಲಾಗಿದ್ದರೂ, ಹಲವು ಪೊಲೀಸರಿದ್ದರೂ ಕಷ್ಟಪಡಬೇಕಾಯಿತು.
ಇದನ್ನೂ ಓದಿ: ಹ್ಯಾಕರ್ಸ್ ಹಿಂದೆ ಬಿದ್ದ ‘ನಟ್ವರ್ ಲಾಲ್’; ಟೀಸರ್ ಬಿಡುಗಡೆ …
ಕೇಕ್ ಕತ್ತರಿಸಿದ ಬಳಿಕ ವಿಜಯ್ ಸ್ವತಃ ಮುಂದೆ ನಿಂತು ತಮ್ಮ ಅಭಿಮಾನಿಗಳಿಗೆ ಊಟ ಬಡಿಸಿದರು. ಅಷ್ಟೇ ಅಲ್ಲ, ಅಭಿಮಾನಿಗಳ ಕೈಯಿಂದ ತುತ್ತನ್ನು ತಿಂದರು. ಅಷ್ಟೇ ಅಲ್ಲ, ದೊಡ್ಡ ಸಂಖ್ಯೆಯಲ್ಲಿ ಬಂದಿದ್ದ ಅಭಿಮಾನಿಗಳೊಂದಿಗೆ ಸೆಲ್ಫಿ ತೆಗೆಸಿಕೊಂಡರು. ಈ ಮಧ್ಯೆ, ಮೈತುಂಬಾ ಟ್ಯಾಟೂ ಹಾಕಿಸಿಕೊಂಡು ಬಂದ ಮಣಿ ಎಂಬ ಅಭಿಮಾನಿಯೊಬ್ಬರು ಎಲ್ಲರ ಗಮನಸೆಳೆದರು. ಆರ್ಕೆಸ್ಟ್ರಾದಲ್ಲಿ ಗಾಯಕನಾಗಿರುವ ಮಣಿ, ಬೆನ್ನಿನ ಮೇಲೆ ವಿಜಿ ಅವರ ದೊಡ್ಡದಾದ ಟ್ಯಾಟೂ ಹಾಕಿಸಿಕೊಂಡು ಬಂದು ಎಲ್ಲರ ಗಮನಸೆಳೆದರು.
ಹರಕೆ ತೀರಿಸಿದ ಕ್ಷಣಗಳು … ದೈವದ ಮುಂದೆ ಕೈ ಮುಗಿದು ನಿಂತ ‘ಕಾಂತಾರ’ ಸಿನಿಮಾ ತಂಡ