ಬೆಂಗಳೂರು: ಕಳೆದ ವರ್ಷದ ಸೂಪರ್ ಹಿಟ್ ಚಿತ್ರಗಳಲ್ಲಿ ಒಂದು ರಿಷಬ್ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ‘ಕಾಂತಾರ’. ಚಿತ್ರವು ಕನ್ನಡದಲ್ಲಿ ಹಿಟ್ ಆಗಿದ್ದಷ್ಟೇ ಅಲ್ಲ, ಆ ನಂತರ ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂ ಭಾಷೆಗಳಿಗೂ ಡಬ್ ಆಗಿ, ಅಲ್ಲೂ ಮೆಚ್ಚಿಗೆ ಪಡೆದಿತ್ತು.
ಇದನ್ನೂ ಓದಿ: ಸುಕೇಶ್ ನನ್ನ ಬದುಕು ಮತ್ತು ಕರಿಯರ್ ಹಾಳು ಮಾಡಿದ … ಜಾಕ್ಲೀನ್ ಅಳಲು
ಚಿತ್ರ ಗೆದ್ದ ಖುಷಿಯಲ್ಲಿ ಚಿತ್ರತಂಡದವರು ಕಳೆದ ವರ್ಷದ ಕೊನೆಯಲ್ಲಿ ಪಂಜುರ್ಲಿ ಹಾಗೂ ಗುಳಿದ ದೈವಕ್ಕೆ ಹರಕೆ ಪೂರೈಸಿದ್ದರು. ಅಷ್ಟೇ ಅಲ್ಲ, ‘ಕಾಂತಾರ 2’ ಚಿತ್ರ ಮಾಡುವುದಕ್ಕೆ ಅಣ್ಣಪ್ಪ ಸ್ವಾಮಿಯ ಅಪ್ಪಣೆಯನ್ನೂ ಕೇಳಿದ್ದರು. ಈ ಸಂದರ್ಭದಲ್ಲಿ ರಿಷಬ್ ಶೆಟ್ಟಿ, ಸಪ್ತಮಿ ಗೌಡ, ನಿರ್ಮಾಪಕ ವಿಜಯ್ ಕಿರಗಂದೂರ್, ಕಾರ್ತಿಕ್ ಗೌಡ ಮುಂತಾದವರು ಹಾಜರಿದ್ದರು.
ಈಗ ಆ ವಿಡಿಯೋವನ್ನು ರಿಷಭ್ ಶೆಟ್ಟಿ ತಮ್ಮ ಟ್ವಿಟರ್ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ. ‘ಹರಕೆ ತೀರಿಸಿದ ಕ್ಷಣಗಳು’ ಎಂಬ ಕ್ಯಾಪ್ಶನ್ ಕೊಟ್ಟು ಶೇರ್ ಮಾಡಿಕೊಂಡಿದ್ದಾರೆ. ಹೊಂಬಾಳೆ ಫಿಲಂಸ್ ಸಹ ಈ ವಿಡಿಯೋ ಹಂಚಿಕೊಂಡಿದೆ.
ಇದನ್ನೂ ಓದಿ: ಕರಣ್ ಜೋಹರ್ಗೆ ‘RRR’ ಚಿತ್ರದ ಹಕ್ಕುಗಳನ್ನು ರಾಜಮೌಳಿ ಯಾಕೆ ಕೊಡಲಿಲ್ಲ? ಇಲ್ಲಿದೆ ಉತ್ತರ …
‘ಕಾಂತಾರ’ ಚಿತ್ರವನ್ನು ಹೊಂಬಾಳೆ ಫಿಲಂಸ್ನ ವಿಜಯ್ ಕುಮಾರ್ ಕಿರಗಂದೂರು ನಿರ್ಮಿಸಿದ್ದು, ಚಿತ್ರದಲ್ಲಿ ರಿಷಭ್, ಸಪ್ತಮಿ ಗೌಡ, ಅಚ್ಯುತ್ ಕುಮಾರ್, ಕಿಶೋರ್ ಮುಂತಾದವರು ಅಭಿನಯಿಸಿದ್ದಾರೆ, ಅಜನೀಶ್ ಲೋಕನಾಥ್ ಸಂಗೀತ ಮತ್ತು ಅರವಿಂದ್ ಕಶ್ಯಪ್ ಛಾಯಾಗ್ರಹಣ ಈ ಚಿತ್ರಕ್ಕಿದೆ.
ಹರಕೆ ತೀರಿಸಿದ ಕ್ಷಣಗಳು.
You surrender to the nature & worship the God, who has bestowed you with such success n freedom in life. #Kantara team witnessed the divine in real form & took the blessings of Daiva!@shetty_rishab #VijayKiragandur @gowda_sapthami @ChaluveG @Karthik1423 pic.twitter.com/vPn8mOoenR— Hombale Films (@hombalefilms) January 20, 2023
ಕೀರ್ತಿ ತಂದವರ ಕಾದು ನೋಡುವ ತಂತ್ರ: ಈ ವರ್ಷ ಯಶ್, ಸುದೀಪ್, ರಿಷಬ್ ಸಿನಿಮಾ ಇಲ್ಲ!?