More

    ಹರಕೆ ತೀರಿಸಿದ ಕ್ಷಣಗಳು … ದೈವದ ಮುಂದೆ ಕೈ ಮುಗಿದು ನಿಂತ ‘ಕಾಂತಾರ’ ಸಿನಿಮಾ ತಂಡ

    ಬೆಂಗಳೂರು: ಕಳೆದ ವರ್ಷದ ಸೂಪರ್​ ಹಿಟ್​ ಚಿತ್ರಗಳಲ್ಲಿ ಒಂದು ರಿಷಬ್​ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ‘ಕಾಂತಾರ’. ಚಿತ್ರವು ಕನ್ನಡದಲ್ಲಿ ಹಿಟ್​ ಆಗಿದ್ದಷ್ಟೇ ಅಲ್ಲ, ಆ ನಂತರ ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂ ಭಾಷೆಗಳಿಗೂ ಡಬ್​ ಆಗಿ, ಅಲ್ಲೂ ಮೆಚ್ಚಿಗೆ ಪಡೆದಿತ್ತು.

    ಇದನ್ನೂ ಓದಿ: ಸುಕೇಶ್​ ನನ್ನ ಬದುಕು ಮತ್ತು ಕರಿಯರ್​ ಹಾಳು ಮಾಡಿದ … ಜಾಕ್​ಲೀನ್​ ಅಳಲು

    ಚಿತ್ರ ಗೆದ್ದ ಖುಷಿಯಲ್ಲಿ ಚಿತ್ರತಂಡದವರು ಕಳೆದ ವರ್ಷದ ಕೊನೆಯಲ್ಲಿ ಪಂಜುರ್ಲಿ ಹಾಗೂ ಗುಳಿದ ದೈವಕ್ಕೆ ಹರಕೆ ಪೂರೈಸಿದ್ದರು. ಅಷ್ಟೇ ಅಲ್ಲ, ‘ಕಾಂತಾರ 2’ ಚಿತ್ರ ಮಾಡುವುದಕ್ಕೆ ಅಣ್ಣಪ್ಪ ಸ್ವಾಮಿಯ ಅಪ್ಪಣೆಯನ್ನೂ ಕೇಳಿದ್ದರು. ಈ ಸಂದರ್ಭದಲ್ಲಿ ರಿಷಬ್ ಶೆಟ್ಟಿ, ಸಪ್ತಮಿ ಗೌಡ, ನಿರ್ಮಾಪಕ ವಿಜಯ್ ಕಿರಗಂದೂರ್, ಕಾರ್ತಿಕ್ ಗೌಡ ಮುಂತಾದವರು ಹಾಜರಿದ್ದರು.

    ಈಗ ಆ ವಿಡಿಯೋವನ್ನು ರಿಷಭ್​ ಶೆಟ್ಟಿ ತಮ್ಮ ಟ್ವಿಟರ್​ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ. ‘ಹರಕೆ ತೀರಿಸಿದ ಕ್ಷಣಗಳು’ ಎಂಬ ಕ್ಯಾಪ್ಶನ್​ ಕೊಟ್ಟು ಶೇರ್​ ಮಾಡಿಕೊಂಡಿದ್ದಾರೆ. ಹೊಂಬಾಳೆ ಫಿಲಂಸ್​ ಸಹ ಈ ವಿಡಿಯೋ ಹಂಚಿಕೊಂಡಿದೆ.

    ಇದನ್ನೂ ಓದಿ: ಕರಣ್​ ಜೋಹರ್​ಗೆ ‘RRR’ ಚಿತ್ರದ ಹಕ್ಕುಗಳನ್ನು ರಾಜಮೌಳಿ ಯಾಕೆ ಕೊಡಲಿಲ್ಲ? ಇಲ್ಲಿದೆ ಉತ್ತರ …

    ‘ಕಾಂತಾರ’ ಚಿತ್ರವನ್ನು ಹೊಂಬಾಳೆ ಫಿಲಂಸ್​ನ ವಿಜಯ್​ ಕುಮಾರ್​ ಕಿರಗಂದೂರು ನಿರ್ಮಿಸಿದ್ದು, ಚಿತ್ರದಲ್ಲಿ ರಿಷಭ್​, ಸಪ್ತಮಿ ಗೌಡ, ಅಚ್ಯುತ್​ ಕುಮಾರ್​, ಕಿಶೋರ್​ ಮುಂತಾದವರು ಅಭಿನಯಿಸಿದ್ದಾರೆ, ಅಜನೀಶ್​ ಲೋಕನಾಥ್​ ಸಂಗೀತ ಮತ್ತು ಅರವಿಂದ್​ ಕಶ್ಯಪ್​ ಛಾಯಾಗ್ರಹಣ ಈ ಚಿತ್ರಕ್ಕಿದೆ.

    ಕೀರ್ತಿ ತಂದವರ ಕಾದು ನೋಡುವ ತಂತ್ರ: ಈ ವರ್ಷ ಯಶ್, ಸುದೀಪ್, ರಿಷಬ್ ಸಿನಿಮಾ ಇಲ್ಲ!?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts