ಭವಾನಿಪಟ್ಟಣ: ಒಡಿಶಾದ ಕಾಲಹಂಡಿ ಜಿಲ್ಲೆಯ ಭವಾನಿಪಟ್ಟಣದ ಕೇಂದ್ರ ಭಾಗದಲ್ಲೇ ಕರಡಿ ದಾಳಿ ನಡೆಸಿದ್ದು ಜನ ಕಂಗಾಲಾಗಿದ್ದಾರೆ. ಕರಡಿ ದಾಳಿ ನಿನ್ನೆ ನಡೆದಿದ್ದು, ಕಂಗಾಲಾದ ಜನ ಕರಡಿಯನ್ನು ಓಡಿಸಲು ಪ್ರಯತ್ನಿಸುತ್ತಿರುವ ದೃಶ್ಯ ಮೊಬೈಲ್ಗಳಲ್ಲಿ ಸೆರೆಯಾಗಿದೆ.
ಭವಾನಿಪಟ್ಟಣದಲ್ಲಿ ನಿನ್ನೆ ನಡೆದ ಈ ಕರಡಿ ದಾಳಿಗೆ ಕೆಲವರು ಗಾಯಗೊಂಡಿದ್ದಾರೆ. ಕರಡಿ ಜನರ ಮೇಲೆ ದಾಳಿ ನಡೆಸಿ ಮುಖವನ್ನೇ ವಿರೂಪಗೊಳಿಸಲು ಪ್ರಯತ್ನಿಸಿದ್ದು, ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ: ಹಾವು-ಮುಂಗುಸಿಯಂತೆ ಸೆಣಸಾಡೋದು ಅಂದ್ರೆ ಹೀಗೇನಾ…
ಕರಡಿ ಕಾಣಿಸಿಕೊಂಡ ಪ್ರದೇಶವನ್ನು ಸೀಲ್ಡೌನ್ ಮಾಡಲಾಗಿದ್ದು, ಮನೆಯಿಂದ ಹೊರಕ್ಕೆ ಬಾರದಂತೆ ಎಲ್ಲರಿಗೂ ಎಚ್ಚರಿಕೆ ನೀಡಲಾಗಿದೆ. ಡ್ರೋನ್ ಮೂಲಕ ಕರಡಿಯನ್ನು ಪತ್ತೆ ಹಚ್ಚಿ ಸೆರೆಹಿಡಿಯುವ ಕಾರ್ಯವನ್ನು ಅರಣ್ಯ ಇಲಾಖೆ ಸಿಬ್ಬಂದಿ ಮಾಡಿದ್ದಾರೆ. (ಏಜೆನ್ಸೀಸ್)