More

    KGF​​ ಬಗ್ಗೆ ಟಾಲಿವುಡ್​ ನಿರ್ದೇಶಕನ ವಿವಾದಾತ್ಮಕ ಹೇಳಿಕೆ ಬೆನ್ನಲ್ಲೇ ಪ್ರಶಾಂತ್​ ನೀಲ್​ ಹಳೇ ವಿಡಿಯೋ ವೈರಲ್​!

    ಹೈದರಾಬಾದ್​: ಟಾಲಿವುಡ್​ ನಿರ್ದೇಶಕ ವೆಂಕಟೇಶ್​ ಮಹಾ ಅವರು ಕೆಜಿಎಫ್​ ಸಿನಿಮಾ ಕುರಿತು ಆಡಿರುವ ಮಾತುಗಳು ನಟ ಯಶ್ ಮತ್ತು ಕೆಜಿಎಫ್​ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾದ ಬೆನ್ನಲ್ಲೇ ಕೆಜಿಎಫ್​ ನಿರ್ದೇಶಕ ಪ್ರಶಾಂತ್​ ನೀಲ್​ ಅವರ ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

    ಇತ್ತೀಚೆಗೆ ನಡೆದ ಮಾಧ್ಯಮ ಸಂದರ್ಶನವೊಂದರಲ್ಲಿ ವೆಂಕಟೇಶ್​ ಮಹಾ ನೀಡಿದ್ದ ಹೇಳಿಕೆಯೇ ಭಾರೀ ವಿವಾದಕ್ಕೆ ಕಾರಣವಾಗಿದೆ. ಕೆಜಿಎಫ್​ ಸಿನಿಮಾದಲ್ಲಿ ನಾಯಕನ ಪಾತ್ರವನ್ನು ಟಾರ್ಗೆಟ್​ ಮಾಡಿದ ವೆಂಕಟೇಶ್​, ನಾಯಕ ಓರ್ವ ಸ್ವಾರ್ಥಿ ಎಂದರು. ತನ್ನೊಂದಿಗೆ ಇದ್ದ ಜನರಿಗೆ ಏನನ್ನೂ ನೀಡದೇ ಎಲ್ಲ ಸಂಪತ್ತನ್ನು ತನ್ನೊಂದಿಗೆ ತೆಗೆದುಕೊಂಡು ತಾನು ಕೂಡ ಸಮುದ್ರ ಪಾಲಾಗುತ್ತಾನೆ. ಆತ ತುಂಬಾ ಸ್ವಾರ್ಥಿ ಎಂದು ಹೇಳಿದ್ದರು. ಅಲ್ಲದೆ, ರಾಕಿ ಭಾಯ್​ ಪಾತ್ರವನ್ನು ಕಂತ್ರಿ ನಾಯಿಗೆ ಹೋಲಿಕೆ ಮಾಡಿದ್ದರು. ಇದು ಅಭಿಮಾನಿಗಳನ್ನು ಕೆರಳಿಸಿದ್ದು, ಜಾಲತಾಣದಲ್ಲಿ ವೆಂಕಟೇಶ್​ ವಿರುದ್ಧ ಈಗಲೂ ವಾಗ್ದಾಳಿ ನಡೆಯುತ್ತಿದೆ. ವೆಂಕಟೇಶ್​ ವಿರುದ್ಧ ಟ್ವಿಟರ್​ನಲ್ಲಿ ಟ್ರೆಂಡ್​ ಕೂಡ ಮಾಡಿಮ, ಕ್ಷಮೆ ಆಗ್ರಹಿಸಿದ್ದಾರೆ.

    ಇದಾದ ಬಳಿಕ ಯಶ್​ ಅಭಿಮಾನಿಗಳ ಆಕ್ರೋಶಕ್ಕೆ ಪ್ರತಿಕ್ರಿಯೆ ನೀಡಿದ್ದ ವೆಂಕಟೇಶ್​ ಮಹಾ, ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ವಿಡಿಯೋ ಒಂದನ್ನು ಪೋಸ್ಟ್​ ಮಾಡಿದ, ನಾನು ಬಳಸಿರುವ ಭಾಷೆ ಕೆಟ್ಟದಿರಬಹುದು ಆದರೆ, ನನ್ನ ಅಭಿಪ್ರಾಯದಲ್ಲಿ ಯಾವುದೇ ಕೆಟ್ಟದು ಇರಲಿಲ್ಲ. ಹೀಗಾಗಿ ನಾನು ನನ್ನ ಹೇಳಿಕೆಯಿಂದ ಹಿಂದೆ ಸರಿಯುವುದಿಲ್ಲ ಎಂದಿದ್ದರು.

    ಇದನ್ನೂ ಓದಿ: ದಕ್ಷಿಣ ಭಾರತ ಸಿನಿಮಾರಂಗದಿಂದ ಗೋವಾ ಬ್ಯೂಟಿ ಇಲಿಯಾನಾ ಡಿ ಕ್ರೂಸ್ ಬ್ಯಾನ್​! ಕಾರಣ ಹೀಗಿದೆ….

    ಇಷ್ಟೆಲ್ಲ ಬೆಳವಣಿಗೆಯ ಮಧ್ಯೆ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಅವರ ಹಳೆಯ ಸಂದರ್ಶನದ ವಿಡಿಯೋ ತುಣುಕೊಂದು ಜಾಲತಾಣದಲ್ಲಿ ಹರಿದಾಡುತ್ತಿದೆ. ವಿಡಿಯೋದಲ್ಲಿ ಕೆಜಿಎಫ್‌ನ ರಾಕಿ ಭಾಯ್ ಪಾತ್ರವು ಹೇಗೆ ಹುಟ್ಟಿಕೊಂಡಿತು ಎಂಬುದನ್ನು ನೀಲ್ ವಿವರಿಸಿದ್ದಾರೆ.

    ರಾಕಿ ಭಾಯ್ ಅವರ ತಾಯಿ ತನ್ನ ಪ್ರಭಾವ ಮತ್ತು ಜೀವನದಲ್ಲಿ ಅನುಭವಿಸಿದ ಹತಾಶೆಯನ್ನು ಮಗನ ಮೇಲೆ ಎಸೆಯುತ್ತಾರೆ. ಜೀವನದಲ್ಲಿ ಎಷ್ಟೋ ಕಷ್ಟಗಳನ್ನು ಅನುಭವಿಸಿದ ಆಕೆ ಹಣವಿಲ್ಲದ ಕಾರಣ ಸಾಯುತ್ತಿರುತ್ತಾಳೆ. ಆದ್ದರಿಂದ ಅವಳು ತನ್ನ ಜೀವನದಲ್ಲಿ ನೆನಪಿಸಿಕೊಳ್ಳುವ ಒಂದೇ ಒಂದು ವಿಷಯವೆಂದರೆ ಅದು ಹಣ. ಅವನು (ಮಗ) ತನ್ನ ಜೀವನವನ್ನು ಹೇಗೆ ನಡೆಸುತ್ತಾನೆ ಎಂಬುದರ ಬಗ್ಗೆ ಅವಳು ಚಿಂತಿಸುವುದಿಲ್ಲ ಆದರೆ, ಅವನು ಸಾಯುವಾಗ ಎಲ್ಲ ಹಣ ಅವನ ಬಳಿ ಇರಬೇಕೆಂದು ತಾಯಿ ಕೇಳಿಕೊಳ್ಳುತ್ತಾಳೆ. ಇದನ್ನು ನಾವು ಬೇಜವಾಬ್ದಾರಿ ಹೇಳಿಕೆಯಂತೆ ನೋಡಬಹುದು. ಆದರೆ, ನಾನು ಒಂದು ಪಾತ್ರದ ಬಗ್ಗೆ ಮಾತನಾಡುತ್ತಿದ್ದೇನೆ. ಇಲ್ಲಿ ನಾನು ಯಾವುದೇ ಉಪದೇಶ ಮಾಡಲು ಬಂದಿಲ್ಲ. ಇಲ್ಲಿ ರಾಕಿ ಅನೇಕ ದೊಡ್ಡ ಕೆಲಸಗಳನ್ನು ಮಾಡುತ್ತಾನೆ ಮತ್ತು ದೊಡ್ಡ ಕೆಲಸಗಳನ್ನು ಮಾಡುತ್ತಿರುವ ಕಾರಣ ಅವರ ತಾಯಿಯು ಕೂಡ ಹೈಲೈಟ್ ಆಗುತ್ತಿದ್ದಾರೆ. ಅವನು ಏನೂ ಅಲ್ಲ ಎಂದು ಸುಮ್ಮನಾಗಿದ್ದರೆ ಅವನ ತಾಯಿ ಹೇಳಿದ ಮಾತಿಗೆ ಯಾವುದೇ ಅರ್ಥ ಇರುತ್ತಿರಲಿಲ್ಲ ಎಂದು ನೀಲ್​ ಸಂದರ್ಶನದಲ್ಲಿ ಹೇಳಿದ್ದಾರೆ.

    ಸಂಕ್ಷಿಪ್ತವಾಗಿ ಹೇಳುವುದಾದರೆ ಪ್ರಶಾಂತ್ ನೀಲ್ ಅವರ ಮಾತಿನ ಅರ್ಥ, ರಾಕಿ ಭಾಯ್ ಪಾತ್ರವು ಇಲ್ಲಿ ಏನನ್ನೂ ಬೋಧಿಸುವುದಿಲ್ಲ ಮತ್ತು ಆ ಪಾತ್ರವು ಬರೆದ ರೀತಿಯಲ್ಲಿದೆ. ಪ್ರತಿ ಚಿತ್ರದಲ್ಲಿನ ಪ್ರತಿಯೊಂದು ಪಾತ್ರವೂ ಸಮಾಜಕ್ಕೆ ಉದಾಹರಣೆ ಆಗಬೇಕಾಗಿಲ್ಲ ಎಂಬುದು ನೀಲ್​ ಅಭಿಪ್ರಾಯವಾಗಿದೆ.

    ಅಭಿಮಾನಿಗಳ ಆಕ್ರೋಶಕ್ಕೆ ವೆಂಕಟೇಶ್​ ಸ್ಪಷ್ಟನೆ ಏನು?
    ನಾನು ಸಂದರ್ಶನದಲ್ಲಿ ಆಡಿದ ಮಾತುಗಳು ನನ್ನದಲ್ಲ. ಅದು ಕೆಲವರ ಅಭಿಪ್ರಾಯವಾಗಿದೆ. ನನ್ನ ಸಿನಿಮಾಗಳನ್ನು ಇಷ್ಟಪಟ್ಟವರು ಮತ್ತು ಇತರರು ನನಗೆ ಸಂದೇಶಗಳನ್ನು ಕಳುಹಿಸಿದ್ದಾರೆ. ಅವರೆಲ್ಲರ ಪರವಾಗಿ ಸಂದರ್ಶನದಲ್ಲಿ ನಾನು ಮಾತನಾಡಿದ್ದೇನೆ. ನಾನು ಮಾತನಾಡುವ ಭಾಷೆ ಸರಿಯಿಲ್ಲದಿರಬಹುದು ಅದಕ್ಕೆ ನಾನು ಕ್ಷಮೆ ಕೋರುತ್ತೇನೆ. ಆದರೆ ಆ ಸಮಯದಲ್ಲಿ ಚರ್ಚಿಸಿದ ವಿಷಯದ ಬಗ್ಗೆ ನನ್ನ ಅಭಿಪ್ರಾಯವನ್ನು ಬದಲಾಯಿಸುವುದಿಲ್ಲ. ನನ್ನ ಅಭಿಪ್ರಾಯದಲ್ಲಿ ಇದೊಂದು ಸಮಸ್ಯಾತ್ಮಕ ಪಾತ್ರವೆಂದು ತೋರುತ್ತದೆ. ಹೀಗಾಗಿ ನಾನು ಮಾತನಾಡಿದೆ. ಇದು ಯಾವುದೇ ವ್ಯಕ್ತಿ ಅಥವಾ ಸೃಜನಶೀಲ ವ್ಯಕ್ತಿಯನ್ನು ನೇರವಾಗಿ ಉದ್ದೇಶಿಸಿಲ್ಲ. ಒಬ್ಬ ವ್ಯಕ್ತಿಗೆ ಅದನ್ನು ಆರೋಪಿಸುವುದು ನನ್ನ ಅಭಿಪ್ರಾಯವನ್ನು ನೀವು ನೋಡುವ ರೀತಿಯ ಮೇಲೆ ಅವಲಂಬಿತವಾಗಿದೆ. ಸಮಸ್ಯೆ ನಿಮ್ಮಲ್ಲಿಯೇ ಇದೆ ಎಂದು ವೆಂಕಟೇಶ್​ ಮಹಾ ಸಮರ್ಥನೆ ನೀಡಿದ್ದಾರೆ.

    ಇದನ್ನೂ ಓದಿ: ಕಬಡ್ಡಿ ಆಡುವಾಗ ಹೃದಯಾಘಾತ: ಸ್ನೇಹಿತರ ಎದುರಲ್ಲೇ ಕುಸಿದು ಬಿದ್ದು ದುರಂತ ಅಂತ್ಯ ಕಂಡ ಯುವಕ!

    ನಾನು ಕಾಲ್ಪನಿಕ ಪಾತ್ರವನ್ನು ಅವಮಾನಿಸಿದೆ. ಅದಕ್ಕಾಗಿ ರಿಯಲ್ ಕ್ಯಾರೆಕ್ಟರ್ ಆಗಿರುವ ನನ್ನ ಮೇಲೆ ಹಲವು ರೀತಿಯಲ್ಲಿ ನಿಂದಿಸಲಾಗುತ್ತಿದೆ. ನನ್ನ ಬಗ್ಗೆ ಅಸಭ್ಯ ಚಿತ್ರಗಳನ್ನು ರಚಿಸಲಾಗುತ್ತಿದೆ. ಇದೇನು ಹೊಸದಲ್ಲ. ಇದನ್ನು ನಾವು ಹಲವು ಬಾರಿ ನೋಡಿದ್ದೇವೆ. ನನ್ನ ಅಭಿಪ್ರಾಯವನ್ನು ಗೌರವಿಸಲಾಗುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ವೆಂಕಟೇಶ್ ಮಹಾ ಜಾಲತಾಣದಲ್ಲಿ ವ್ಯಕ್ತವಾಗುತ್ತಿರುವ ಆಕ್ರೋಶಗಳಿಗೆ ಪ್ರತಿಕ್ರಿಯಿಸಿದ್ದಾರೆ. (ಏಜೆನ್ಸೀಸ್​)

    ಧಾರವಾಡದಲ್ಲಿ ಯುವತಿಯರಿಬ್ಬರ ನಡುವೆ ಬೀದಿ ರಂಪಾಟ: ವಿಡಿಯೋ ವೈರಲ್​

    ಈ ಆಕಾಶಕಾಯ ಪ್ರೇಮಿಗಳ ದಿನ ಭೂಮಿಗೆ ಅಪ್ಪಳಿಸಬಹುದು ಎಂದ ನಾಸಾ!

    2ನೇ ಬಾರಿಗೆ ತ್ರಿಪುರಾ ಮುಖ್ಯಮಂತ್ರಿಯಾಗಿ ಮಾಣಿಕ್​ ಸಹಾ ಪ್ರಮಾಣ ವಚನ ಸ್ವೀಕಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts