ವೀರಪ್ಪನ್ ಹುಟ್ಟು ಮತ್ತು ಸಾವು ಕುರಿತಾದ ‘ಅಟ್ಟಹಾಸ’ ನಿರ್ದೇಶಿಸಿದ್ದ ಎ.ಎಂ.ಆರ್. ರಮೇಶ್, ‘ವೀರಪ್ಪನ್’ ಎಂಬ ವೆಬ್ ಸೀರೀಸ್ ನಿರ್ದೇಶಿಸುವುದಕ್ಕೆ ಸಿದ್ಧತೆ ನಡೆಸುತ್ತಿರುವುದು ಗೊತ್ತೇ ಇದೆ. ಕಳೆದ ತಿಂಗಳೇ ಅವರು ಈ ವೆಬ್ಸರಣಿಯ ಕರ್ಟನ್ ರೇಸರ್ ಬಿಡುಗಡೆ ಮಾಡಿದ್ದರು.
ಇದೀಗ ಈ ವೆಬ್ಸೀರೀಸ್ ಚಿತ್ರೀಕರಣ ಪ್ರಾರಂಭಸಿದ್ದಾರೆ. ಇತ್ತೀಚೆಗೆ ಇದರ ಮುಹೂರ್ತವಾಗಿದ್ದು, ಕರ್ನಾಟಕ ಸ್ಟೇಟ್ ರಿಸರ್ವ್ ಪೊಲೀಸ್ನ ಎಡಿಜಿಪಿ ಅಲೋಕ್ ಕುಮಾರ್ ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದ್ದಾರೆ. ಇನ್ನು ವೀರಪ್ಪನ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟ ಕಿಶೋರ್, ಮೊದಲ ದೃಶ್ಯದಲ್ಲಿ ಭಾಗವಹಿಸಿದ್ದಾರೆ.
ಇದನ್ನೂ ಓದಿ: ‘ಆದಿಪುರುಷ್’ ಚಿತ್ರಕ್ಕೆ ‘ಗೇಮ್ ಆಫ್ ಥ್ರೋನ್ಸ್’ ತಂಡದ ಗ್ರಾಫಿಕ್ಸ್?
ಈ ವೆಬ್ ಸೀರೀಸ್ನಲ್ಲಿ ಕಿಶೋರ್, ವೀರಪ್ಪನ್ ಪಾತ್ರವನ್ನು ಮುಂದುವರೆಸಲಿದ್ದಾರೆ. ಇನ್ನು ಅರ್ಜುನ್ ಸರ್ಜಾ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ವೆಬ್ಸೀರೀಸ್ ಕನ್ನಡವಲ್ಲದೆ ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂನಲ್ಲೂ ಪ್ರಸಾರವಾಗುತ್ತಿದೆ.
‘ವೀರಪ್ಪನ್’ ಚಿತ್ರ ಮಾಡುವಾಗ ಒತ್ತಡದಿಂದಾಗಿ ಹಲವು ವಿಷಯಗಳನ್ನು ಹೇಳುವುದಕ್ಕೆ ನಿರ್ದೇಶಕ ಎ.ಎಂ.ಆರ್. ರಮೇಶ್ ಅವರಿಗೆ ಸಾಧ್ಯವಾಗಲಿಲ್ಲವಂತೆ. ಅದನ್ನು ಈ ವೆಬ್ ಸೀರೀಸ್ನಲ್ಲಿ ಹೇಳುವ ಪ್ರಯತ್ನ ಮಾಡುತ್ತಿದದ್ದಾರಂತೆ. ಇನ್ನು, ‘ಅಟ್ಟಹಾಸ’ ಚಿತ್ರವನ್ನು ಹಾಗೆಯೇ ಇಟ್ಟುಕೊಂಡು, ಅದಕ್ಕೆ ಪೂರಕವಾದ ಅಂಶಗಳನ್ನು ಸೇರಿಸುತ್ತಾ ಹೋಗುತ್ತಾರಂತೆ.
ಇದನ್ನೂ ಓದಿ: ಹ್ಯಾಪಿ ಬರ್ತ್ಡೇ ಡಾಲಿ ಧನಂಜಯ; ಚಿತ್ರತಂಡಗಳಿಂದ ಪೋಸ್ಟರ್ ಗಿಫ್ಟ್
ಈ ಕುರಿತು ಮಾತನಾಡಿರುವ ಅವರು, ‘ಈಗಾಗಲೇ ನನ್ನ ಹತ್ತಿರ 10 ಗಂಟೆಗಾಗುವಷ್ಟು ಕಂಟೆಂಟ್ ಇದೆ. ಈ ಪೈಕಿ ಒಂದೂವರೆ ಗಂಟೆ ಈಗಾಗಲೇ ಸಿದ್ಧವಿದೆ. ಮಿಕ್ಕ ಎಂಟೂವರೆ ಗಂಟೆಗಳ ಚಿತ್ರೀಕರಣ ಸದ್ಯದಲ್ಲೇ ಶುರು ಮಾಡುತ್ತೇವೆ. ಈ 10 ಗಂಟೆಗಳ ವಿಷಯವನ್ನು 45 ನಿಮಿಷಗಳ 12 ಅಥವಾ 14 ಎಪಿಸೋಡುಗಳನ್ನು ಮಾಡುತ್ತೇವೆ’ ಎನ್ನುತ್ತಾರೆ ರಮೇಶ್.
ಕಾಡುಗಳ್ಳ ಜೀವನವನ್ನಾಧರಿಸಿ ಕನ್ನಡದಲ್ಲಿ ಇದುವರೆಗೂ ಮೂರು ಸಿನಿಮಾಗಳು ಬಂದಿವೆ. 90ರ ದಶಕದಲ್ಲೇ ದೇವರಾಜ್, ‘ವೀರಪ್ಪನ್’ ಆಗಿದ್ದರು. ಆ ನಂತರ ವೀರಪ್ಪನ್ ಅಟ್ಟಹಾಸ ಮತ್ತು ಎನ್ಕೌಂಟರ್ ಕುರಿತಾಗಿ, ‘ಅಟ್ಟಹಾಸ’ ಮತ್ತು ‘ಕಿಲ್ಲಿಂಗ್ ವೀರಪ್ಪನ್’ ಚಿತ್ರಗಳು ಬಂದಿದ್ದು, ಇದೀಗ ವೆಬ್ಸೀರೀಸ್ ಬರುತ್ತಿರುವುದು ವಿಶೇಷ.
ಸುಶಾಂತ್ ಕೊಂದಿದ್ದು ಯಾರು ಗೊತ್ತಾ? ಚೇತನ್ ಭಗತ್ ಹೇಳ್ತಾರೆ ಕೇಳಿ …