More

    ಸಿಂಹ, ಹರಿಪ್ರಿಯಾ ನಡುವೆ ಮೊದಲು ಪ್ರಪೋಸ್​ ಮಾಡಿದ್ದು ಯಾರು?

    ಬೆಂಗಳೂರು: ಚಂದನವನದ ಲವ್​ಬರ್ಡ್ಸ್​ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಇದೇ 26ರಂದು ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಮದುವೆಯಾಗುವುದಕ್ಕೆ ಸಜ್ಜಾಗಿದ್ದಾರೆ. ಎಲ್ಲ ಸರಿ, ಇವರಿಬ್ಬ ಪ್ರೇಮ್​ ಕಹಾನಿ ಎಷ್ಟು ದಿನಗಳಿಂದ ನಡೆಯುತ್ತಿದೆ ಮತ್ತು ಇವರಿಬ್ಬರಲ್ಲಿ ಮೊದಲು ಪ್ರಪೋಸ್​ ಮಾಡಿದ್ದು ಯಾರು? ಎಂಬ ಪ್ರಶ್ನೆ ಬರುವುದು ಸಹಜ.

    ಇದನ್ನೂ ಓದಿ: ‘ಮಂಡ್ಯ ಹೈದ’ನಾದ ಅಭಯ್; ಇನ್ನೊಂದು ಚಿತ್ರದಲ್ಲಿ ‘ಮನಸಾಗಿದೆ’ ಹುಡುಗ

    ಈ ಪ್ರಶ್ನೆಯನ್ನು ಈ ಜೋಡಿಯ ಮುಂದಿಟ್ಟರೆ, ಒಂದು ಫ್ಲಾಶ್​ಬ್ಯಾಕ್​ ಹೊರಬೀಳುತ್ತದೆ. ವಸಿಷ್ಠ ಅವರೇ ಹೇಳಿಕೊಂಡಂತೆ, 2016ರಿಂದಲೂ ಅವರು ಮತ್ತು ಹರಿಪ್ರಿಯಾ ಒಳ್ಳೆಯ ಸ್ನೇಹಿತರಂತೆ. ಅದಕ್ಕೂ ಹೆಚ್ಚಾಗಿ, ವಸಿಷ್ಠ ಹರಿಪ್ರಿಯಾ ಅವರ ಅಭಿಮಾನಿಯಂತೆ. ಈ ಕುರಿತು ಮಾತನಾಡುವ ಅವರು, ‘ನಟನಾಗಿ ನೋಡಿದರೆ, ಅವರು ನನಗಿಂತ ಸೀನಿಯರ್​. ‘ನನ್ನ ಗೋಧಿಬಣ್ಣ ಸಾಧಾರಣ ಮಥಕಟ್ಟು’ ಚಿತ್ರ ನೋಡಿ ಇಷ್ಟಪಟ್ಟು ಅವರಾಗಿಯೇ ಬಂದು ಮಾತಾಡಿಸಿದ್ದರು. ಒಬ್ಬ ಸೀನಿಯರ್​ ಯಾಗಿ ಬಂದು ವಿಶ್​ ಮಾಡಿದ ಅವರ ಗುಣ ನನಗೆ ಬಹಳ ಇಷ್ಟವಾಯಿತು. ಅಲ್ಲಿಂದ ನಮ್ಮಿಬ್ಬರ ನಡುವೆ ಸ್ನೇಹ ಶುರುವಾಯಿತು. ಫೋನ್​ನಲ್ಲಿ ಮಾತುಕತೆ ಶುರುವಾಯಿತು’ ಎನ್ನುತ್ತಾರೆ ವಸಿಷ್ಠ.

    ಅವರಿಬ್ಬರ ಪ್ರೀತಿಗೆ ಕೋವಿಡ್​ ಲಾಕ್​ಡೌನ್​ ಸಹ ಕಾರಣವಾಯಿತಂತೆ. ‘ಲಾಕ್​ಡೌನ್​ನಲ್ಲಿ ಫ್ರೀ ಇದ್ದಾಗ ಮಾತಾಡುವುದಕ್ಕೆ ಸಾಕಷ್ಟು ಸಮಯ ಸಿಗುತ್ತಿತ್ತು. ಅವರ ನಡವಳಿಕೆ, ಅವರ ಪ್ರತಿಭೆಯಿಂದ ಬಹಳ ಇಂಪ್ರೆಸ್​ ಆದೆ. ನಾನು ಮಾನಸಿಕವಾಗಿ ಕಷ್ಟದಲ್ಲಿದ್ದಾಗ, ಧೈರ್ಯ ತುಂಬಿ ಕರೆದುಕೊಂಡು ಬಂದಿದ್ದೇ ಅವರು. ನಮ್ಮ ಸ್ನೇಹ, ಪ್ರೀತಿಯಾಯಿತು. ಅದನ್ನು ಹೇಳುವುದು ಹೇಗೆ ಎಂದು ಪರದಾಡುತ್ತಿದ್ದವು. ಕೊನೆಗೊಂದು ದಿನ ನಾವು ಪ್ರೇಮ ನಿವೇದನೆ ಮಾಡಿಕೊಂಡೆವು’ ಎನ್ನುತ್ತಾರೆ ವಸಿಷ್ಠ.

    ಇದನ್ನೂ ಓದಿ: ಜಗದಲ್ಲಿ ರೈತನೆಂಬ ಬ್ರಹ್ಮ … ಸಂಕ್ರಾಂತಿಗೆ ಬಂತೊಂದು ರೈತ ಗೀತೆ

    ಎಲ್ಲ ಸರಿ, ಇಬ್ಬರ ನಡುವೆ ಮೊದಲು ಪ್ರಪೋಸ್​ ಮಾಡಿದ್ದು ಯಾರು? ಎಂದರೆ, ತಾನು ಎಂದು ಕೈ ಎತ್ತುತ್ತಾರೆ ಸಿಂಹ. ಈ ಕುರಿತು ವಿವರಣೆ ನೀಡುವ ಹರಿಪ್ರಿಯಾ, ‘ನನಗೂ ಹೇಳಿಕೊಳ್ಳಬೇಕು ಅಂತ ಇತ್ತು. ಅಷ್ಟರಲ್ಲಿ ಅಪ್ಪನ ನಿಧನದ ದಿನದಂದು ಸಿಂಹ ಪ್ರಪೋಸ್​ ಮಾಡಿದರು. ನಾನು ಒಪ್ಪಿಕೊಂಡೆ. ಯಾರಿಗೂ ಗೊತ್ತಾಗದೆ ಹಾಗೆ ಕಷ್ಟಪಟ್ಟು ಪ್ರೀತಿ ಕಾಪಾಡಿಕೊಂಡು ಬಂದಿದ್ದೇವೆ. ನಮ್ಮ ಪ್ರೀತಿಗೆ ಎರಡೂವರೆ, ಮೂರು ವರ್ಷ ಆಗಿದೆ. ವಸಿಷ್ಠ ಬಂದ ಮೇಲೆ ಬದುಕು ಸಾಕಷ್ಟು ಬದಲಾಗಿದೆ’ ಎನ್ನುತ್ತಾರೆ ಹರಿಪ್ರಿಯಾ.

    ಬಾಲಿವುಡ್​ಗೆ ಹೊರಟ ಸಪ್ತಮಿ ಗೌಡ; ಯಾವ ಚಿತ್ರ? ಏನು ಕಥೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts