More

    ಹಿಂದು ರುದ್ರಭೂಮಿಯಲ್ಲಿ ವನಮಹೋತ್ಸವ

    ಮಂಗಳೂರು: ರೋಟರಿ ಕ್ಲಬ್ ಮಂಗಳೂರು, ರೋಟರಿ ಸಮುದಾಯದಳ ಕುಂಪಲ, ಕೇಸರಿ ಮಿತ್ರವೃಂದ ಸೇವಾ ಟ್ರಸ್ಟ್ ಹಾಗೂ ಶ್ರೀ ವೀರಾಂಜನೇಯ ವ್ಯಾಯಾಮ ಶಾಲೆ ತಲಪಾಡಿ ಆಶ್ರಯದಲ್ಲಿ ವನಮಹೋತ್ಸವ ಕಾರ್ಯಕ್ರಮ ತಲಪಾಡಿ ಹಿಂದು ರುದ್ರಭೂಮಿಯಲ್ಲಿ ಭಾನುವಾರ ನಡೆಯಿತು.

    ಸಂಜೀವ ಪೂಜಾರಿ, ವಿನೋದ್ ಅರನ್ಹಾ, ಪ್ರೊ.ರಾಧಾಕೃಷ್ಣ, ವ್ಯಾಯಾಮ ಶಾಲೆ ಅಧ್ಯಕ್ಷ ರಾಜೇಶ್ ತಲಪಾಡಿ, ವಸಂತ ದೇವಾಡಿಗ, ಕಿರಣ್ ತಲಪಾಡಿ, ಭವಿತ್ ತಲಪಾಡಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಿಲ್ಲಾ ಗತಿವಿಧಿ ಪ್ರಮುಖ ರವಿಚಂದ್ರನ್ ಕುಂಪಲ, ಕೇಸರಿ ಮಿತ್ರವೃಂದ ಸೇವಾ ಟ್ರಸ್ಟ್ ನಿಕಟಪೂರ್ವ ಕಾರ್ಯದರ್ಶಿ ಗೌತಮ್ ಕುಂಪಲ, ಪ್ರಥಮ ಕುಮಾರ್ ಕುಂಪಲ ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಯೋಜಕ ನಾರಾಯಣ ಕುಂಪಲ ಸ್ವಾಗತಿಸಿದರು. ವ್ಯಾಯಾಮ ಶಾಲೆಯ ಸದಸ್ಯ ಕಿರಣ್ ಕುಮಾರ್ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts