ಡೆಹ್ರಾಡೂನ್: ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವ ಅಥವಾ ಗೆಲುವಿನ ಸಂದರ್ಭದಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸುವುದನ್ನು ನೋಡಿದ್ದೇವೆ. ಆದರೆ, ಮುಟ್ಟಿನ ಅವಧಿ ಅಥವಾ ಪಿರಿಯಡ್ಸ್ ಅನ್ನು ಕೇಕ್ ಕತ್ತರಿಸಿ ಸಂಭ್ರಮಿಸಿರುವ ಬಗ್ಗೆ ಎಂದಾದರೂ ಕೇಳಿದ್ದೀರಾ? ಇದನ್ನು ಕೇಳಲು ವಿಚಿತ್ರ ಅನಿಸಿದರೂ ಉತ್ತರಾಖಂಡದ ಒಂದು ಕುಟುಂಬ ಈ ರೀತಿಯ ಆಚರಣೆ ಮಾಡುವ ಮೂಲಕ ನೆಟ್ಟಿಗರ ಗಮನ ಸೆಳೆದಿದೆ.
ಉತ್ತರಾಖಂಡದ ಕಾಶೀಪುರದ ಉಧಾಮ್ ಸಿಂಗ್ ನಗರದಲ್ಲಿ ವಾಸಿರುವ ಜೀತೇಂದ್ರ ಭಟ್ ಕುಟುಂಬ ತಮ್ಮ ಮಗಳ ಮೊದಲ ಪಿರಿಯಡ್ಸ್ ಅನ್ನು ಬಹಳ ಅದ್ಧೂರಿಯಾಗಿ ಆಚರಣೆ ಮಾಡಿದೆ. ಮನೆಯನ್ನೆಲ್ಲ ಬಲೂನ್ಗಳಿಂದ ಸಿಂಗಾರ ಮಾಡಿ, ಬಂಧ-ಬಳಗದ ಸಮ್ಮುಖದಲ್ಲಿ ಕೇಕ್ ಕತ್ತಿರಿಸುವ ಮೂಲಕ ಮಗಳ ಮೊದಲ ಪಿರಿಯಡ್ಸ್ ಅನ್ನು ಸಂಭ್ರಮಿಸಿದೆ.
ಜೀತೆಂದ್ರ ಭಟ್ ವೃತ್ತಿಯಲ್ಲಿ ಸಂಗೀತ ಶಿಕ್ಷಕರಾಗಿದ್ದಾರೆ. ಮುಟ್ಟು ವಿಶ್ವದ ಅತ್ಯಂತ ಪವಿತ್ರ ಧರ್ಮವಾಗಿದೆ ಎಂಬ ಸಾಮಾಜಿಕ ಸಂದೇಶ ಕೊಡಲು ಇಂತಹ ನಿರ್ಧಾರ ತೆಗೆದುಕೊಂಡಿದ್ದಾಗಿ ಜೀತೆಂದ್ರ ಭಟ್ ತಿಳಿಸಿದ್ದಾರೆ.
ಇದನ್ನೂ ಓದಿ: ಜಿಲ್ಲೆಯಲ್ಲಿ ಐದು ದಿನ ತುಂತುರು ಮಳೆ: ಜು.28ರಿಂದ ಏಳು ದಿನ ಸರಾಸರಿ ಮಳೆ ನಿರೀಕ್ಷೆ
ಸಾಮಾಜಿಕ ಸಂದೇಶವೇನು?
ನಾನು ಚಿಕ್ಕವನಿದ್ದಾಗ ಪಿರಿಯಡ್ಸ್ ಬಗ್ಗೆ ಹೆಚ್ಚೇನು ಗೊತ್ತಿರಲಿಲ್ಲ. ನಾನು ದೊಡ್ಡವನಾದಂತೆ, ಮಹಿಳೆಯರು ಮತ್ತು ಹುಡುಗಿಯರ ಋತುಚಕ್ರದ ಬಗ್ಗೆ ಮಾತನಾಡುವುದನ್ನು ಮತ್ತು ಕೀಳಾಗಿ ನೋಡುವುದನ್ನು ಗಮನಿಸಿದೆ. ಈ ಸಮಯದಲ್ಲಿ ಮಹಿಳೆಯರು ಏನೇ ಸ್ಪರ್ಶಿಸಿದರೂ ಅದು ಅಪವಿತ್ರ ಎಂದು ಹೇಳುತ್ತಾರೆ. ಈ ಎಲ್ಲ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ನಾನು ನನ್ನ ಮಗಳ ಮೊದಲ ಮುಟ್ಟನ್ನು ಸಂಭ್ರಮಿಸುವ ಯೋಚನೆ ಮಾಡಿದೆ. ಇದು ಅಪವಿತ್ರದ ರೋಗವಲ್ಲ ಅಥವಾ ಅಸ್ಪೃಶ್ಯತೆಯಲ್ಲ ಆದರೆ, ಇದು ಸಂತೋಷದ ದಿನ ಎಂದು ಜೀತೆಂದ್ರ ಭಟ್ ಹೇಳಿದ್ದಾರೆ.
ಪ್ರಯತ್ನಕ್ಕೆ ಫಲ ಸಿಗಲಿದೆ
ಜೀತೆಂದ್ರ ಅವರ ಈ ಹೊಸ ಪ್ರಯತ್ನಕ್ಕೆ ಸ್ಥಳೀಯರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಮತ್ತು ಈ ಪ್ರಯತ್ನಕ್ಕೆ ಫಲ ಸಿಗಲಿದೆ. ಮಹಿಳೆಯರ ಮುಟ್ಟಿನ ಮೇಲಿರುವ ಅಪವಿತ್ರ ಎಂಬ ತಪ್ಪು ಕಲ್ಪನೆ ಹೋಗಲು ಇದು ನೆರವಾಗುತ್ತದೆ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಎಂದಿನಂತೆ ದೇವರ ಪೂಜೆ ಮಾಡಿ
ಈ ಬಗ್ಗೆ ಸ್ತ್ರೀರೋಗತಜ್ಞ ಡಾ. ನವಪ್ರೀತ್ ಕೌರ್ ಎಂಬುವರು ಮಾತನಾಡಿ, ಇದೊಂದು ಉತ್ತಮವಾದ ನಡೆ. ಮುಟ್ಟನ್ನು ಅಸ್ಪೃಶ್ಯತೆ ಎಂದು ಪರಿಗಣಿಸಿರುವುದು ಸಂಪೂರ್ಣ ತಪ್ಪು ತಿಳುವಳಿಕೆ. ಇದೊಂದು ರೋಗವಲ್ಲ ಮತ್ತು ಇದೊಂದು ಅಸ್ಪೃಶ್ಯತೆಯಲ್ಲ. ಪೀರಿಯಡ್ಸ್ ಸಮಯದಲ್ಲೂ ಸ್ನಾನ ಮಾಡಿ ಎಂದಿನಂತೆ ದೇವರ ಪೂಜೆ ಮಾಡಿ ಮತ್ತು ದೇವಸ್ಥಾನಕ್ಕೂ ಹೋಗಿ ಎಂದು ವೈದ್ಯರು ಹೇಳಿದರು. (ಏಜೆನ್ಸೀಸ್)
ಪಾಕಿಸ್ತಾನಕ್ಕೆ ವಾಪಸ್ ಕಳುಹಿಸಬೇಡಿ; ಪ್ರಧಾನಿ ಮತ್ತು ಯುಪಿ ಸಿಎಂಗೆ ಸೀಮಾ ಹೈದರ್ ಮನವಿ