ನವದೆಹಲಿ: ಕಳೆದ ವರ್ಷದಿಂದ ಕಾಡಲಾರಂಭಿಸಿದ ಕರೊನಾ, ಅದರ ನಿಯಂತ್ರಣಕ್ಕಾಗಿ ಹೇರಿದ್ದ ಲಾಕ್ಡೌನ್ ಎರಡೂ ಸೇರಿ ಕಳೆದ ವರ್ಷವೇ ಅಸಂಖ್ಯಾತ ಜನರು ಕೆಲಸ ಕಳೆದುಕೊಂಡಿದ್ದರು. ಆ ಬಳಿಕ ಕರೊನಾ ಹಾವಳಿ ಇನ್ನೇನು ತಗ್ಗಿತು ಎಂಬಷ್ಟರಲ್ಲಿ ಅದರ ಎರಡನೇ ಅಲೆ ಮತ್ತಷ್ಟು ತೀವ್ರವಾಗಿ ಬೀಸಿದ್ದು, ಜನಜೀವನವನ್ನು ಇನ್ನಷ್ಟು ಅಲ್ಲೋಲ-ಕಲ್ಲೋಲ ಆಗಿಸಿದೆ.
ಬೇಸರದ ಸಂಗತಿ ಎಂದರೆ ಈಗಾಗಲೇ ಕೆಲಸ ಕಳೆದುಕೊಂಡವರೇ ಮುಂದೇನು, ಯಾವ ಕೆಲಸ ಎಂಬ ಚಿಂತೆಯಲ್ಲಿರುವಾಗಲೇ ಕರೊನಾ ಎರಡನೇ ಅಲೆಯ ನಿಯಂತ್ರಣಕ್ಕಾಗಿ ಅಲ್ಲಲ್ಲಿ ಲಾಕ್ಡೌನ್, ಕರ್ಫ್ಯೂ ಹೇರಲಾಗಿದೆ. ಪರಿಣಾಮವಾಗಿ ಕೈಗಾರಿಕೆ, ವ್ಯಾಪಾರ ಚಟುವಟಿಕೆ ಮೇಲೆ ಭಾರಿ ಹೊಡೆತ ಬಿದ್ದಿದ್ದು, ಇದು ಮತ್ತೊಂದು ಹಂತದ ಉದ್ಯೋಗ ನಷ್ಟಕ್ಕೆ ಕಾರಣವಾಗಿದೆ.
ಭಾರತದಲ್ಲಿ ಕಳೆದ ನಾಲ್ಕು ತಿಂಗಳಲ್ಲಿ ಗರಿಷ್ಠ ಎಂಬಷ್ಟು ಉದ್ಯೋಗ ನಷ್ಟ ಸಂಭವಿಸಿದ್ದು, ಲಕ್ಷಾಂತರ ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಮಾರ್ಚ್ನಲ್ಲಿ ಶೇ. 6.5ರಷ್ಟಿದ್ದ ನಿರುದ್ಯೋಗ ಪ್ರಮಾಣ ಏಪ್ರಿಲ್ನಲ್ಲಿ ಶೇ. 7.97ಕ್ಕೆ ತಲುಪಿದೆ. ಅರ್ಥಾತ್ ಒಂದೇ ತಿಂಗಳಲ್ಲಿ 70 ಲಕ್ಷಕ್ಕೂ ಅಧಿಕ ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ ಎಂಬ ಖಾಸಗಿ ಅಧ್ಯಯನ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಈ ವಿಷಯ ಕಂಡುಬಂದಿದೆ.
ಚಾಮರಾಜನಗರದಲ್ಲಿ ಸತ್ತದ್ದು 24 ಅಲ್ಲ, 34 ಮಂದಿ! ಅಧಿಕಾರಿಗಳು ಮಾಹಿತಿ ಮುಚ್ಚಿಟ್ಟಿದ್ದಾರೆ…
ಡಿಸೆಂಬರ್ವರೆಗೂ ಇರುತ್ತೆ ಈ ಕರೊನಾ ಕಾಟ: ಎಚ್ಚರಿಕೆ ನೀಡಿದ ಡಾ. ಮಂಜುನಾಥ್