More

    ಮಹಿಳೆಯನ್ನು ಹುಡುಕಿ 50 ಸಾವಿರ ಹಣ, ದಾಖಲೆ ಪತ್ರ ಹಿಂದಿರುಗಿಸಿ ಮಾನವೀಯತೆ ಮೆರೆದ ಆಟೋ ಚಾಲಕ!

    ಉಡುಪಿ: ಬಾಡಿಗೆ ಆಟೋದಲ್ಲಿ ಮಹಿಳೆಯೊಬ್ಬರು ಮರೆತು ಹೋಗಿದ್ದ 50 ಸಾವಿರ ಹಣ ಹಾಗೂ ದಾಖಲೆ ಪತ್ರವನ್ನು ಚಾಲಕ ಹಿಂದಿರುಗಿಸಿ ಮಾನವೀಯತೆ ಮೆರೆದ ಘಟನೆ ಉಡುಪಿ ಜಿಲ್ಲೆಯ ಕಟಪಾಡಿಯಲ್ಲಿ ನಡೆದಿದೆ.

    ಅಂಬಲಪಾಡಿಯ ಜಯಶೆಟ್ಟಿ ಉದಾರತೆ ಮೆರದ ಆಟೋ ಚಾಲಕ. ಅಂಬಲಪಾಡಿಯಿಂದ ಜಯಶೆಟ್ಟಿಯವರು ಮಹಿಳೆಯೊಬ್ಬರನ್ನು ತನ್ನ ಬಾಡಿಗೆ ರಿಕ್ಷಾದಲ್ಲಿ ಕಟಪಾಡಿಗೆ ಬಿಟ್ಟು ಮತ್ತೆ ಅಂಬಲಪಾಡಿ ರಿಕ್ಷಾ ನಿಲ್ದಾಣಕ್ಕೆ ಹಿಂದಿರುಗಿದ್ದರು.

    ಇದನ್ನೂ ಓದಿ: ರೈತ-ಕಾರ್ಮಿಕ ವಿರೋಧಿ ನೀತಿಗಳಿಗೆ ಖಂಡನೆ: ಎಐಡಿಎಸ್‌ಒ ಸಂಘಟನೆಯಿಂದ ಪ್ರತಿಭಟನೆ

    ಈ ವೇಳೆ ತನ್ನ ಆಟೋದಲ್ಲಿ ಪ್ಲಾಸ್ಟಿಕ್ ಕವರ್ ಸಿಕ್ಕಿದ್ದು, ಇದರಲ್ಲಿ ಇದ್ದ ಹಣದ ಕಂತೆ ಹಾಗೂ ದಾಖಲೆ ಪತ್ರಗಳನ್ನು ಗಮನಿಸಿದ ರಿಕ್ಷಾ ಚಾಲಕ ಜಯಶೆಟ್ಟಿ ಮತ್ತೆ ಕಟಪಾಡಿಗೆ ಬಂದು ಮಹಿಳೆಯನ್ನು ಹುಡುಕಿ ಹಣ ಹಾಗೂ ದಾಖಲೆ ಪತ್ರವನ್ನು ಹಿಂದಿರುಗಿಸಿದ್ದಾರೆ.

    ಒಟ್ಟು 50 ಸಾವಿರ ರೂ. ಹಣ ಇತ್ತಾಗಿ ಮಹಿಳೆ ತಿಳಿಸಿದ್ದು, ಹಣ ಹಿಂದಿರುಗಿಸಿ ಮಾನವೀಯತೆ ಮೆರೆದ ಜಯಶೆಟ್ಟಿ ಅವರಿಗೆ ಮಹಿಳೆ ಕೃತಜ್ಞತೆ ಸಲ್ಲಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

    VIDEO| ಸೂಪರ್​ ಮಾರ್ಕೆಟ್​ಗೆ ನುಗ್ಗಿದ ಮಹಿಳೆಯಿಂದ ಅಸಹ್ಯ ಕೆಲಸ: ವೈರಲ್​ ಆಯ್ತು ಸಿಸಿಟಿವಿ ವಿಡಿಯೋ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts