More

    ಬಾಳಾಸಾಹೇಬಾಂಚಿ ಶಿವಸೇನಾ: ಏಕನಾಥ್ ಶಿಂಧೆಗೆ ‘ಎರಡು ಖಡ್ಗ, ಒಂದು ಗುರಾಣಿ​’

    ಮುಂಬೈ: ಇಬ್ಭಾಗಗೊಂಡಿರುವ ಶಿವಸೇನಾಗೆ ಈಗ ಒಂದು ಏಕನಾಥ್ ಶಿಂಧೆ ಬಣವಾಗಿದ್ದರೆ, ಮತ್ತೊಂದು ಉದ್ಧವ್ ಠಾಕ್ರೆ ಬಣವಾಗಿದೆ. ಅದರಲ್ಲೂ ಈಗ ಏಕನಾಥ್ ಶಿಂಧೆಗೆ ಎರಡು ಖಡ್ಗ ಒಂದು ಗುರಾಣಿ ಎಂಬಂತಾಗಿದೆ. ಅರ್ಥಾತ್, ಏಕನಾಥ್ ಬಣದ ಪಕ್ಷಕ್ಕೆ ಚುನಾವಣಾ ಆಯೋಗವು ಚಿಹ್ನೆಯಾಗಿ ಎರಡು ಖಡ್ಗ ಹಾಗೂ ಒಂದು ಗುರಾಣಿ​ ನೀಡಿದೆ.

    ಏಕನಾಥ್ ಶಿಂಧೆ ತಮ್ಮ ಬಣದ ಶಿವಸೇನೆಗೆ ಚುನಾವಣಾ ಚಿಹ್ನೆಯಾಗಿ ಶಂಖ, ಎರಡು ಖಡ್ಗ- ಒಂದು ಗುರಾಣಿ​ ಅಥವಾ ಅರಳಿ ಮರವನ್ನು ನೀಡುವಂತೆ ಚುನಾವಣಾ ಆಯೋಗಕ್ಕೆ ಕೋರಿದ್ದರು. ಈ ಹಿನ್ನೆಲೆಯಲ್ಲಿ ಅವರಿಗೆ ಮಂಗಳವಾರ ಎರಡು ಖಡ್ಗ- ಒಂದು ಶೀಲ್ಡ್ ಚುನಾವಣಾ ಚಿಹ್ನೆಯಾಗಿ ಸಿಕ್ಕಿದೆ.

    ಶಿವಸೇನೆಯ ಏಕನಾಥ್ ಶಿಂಧೆ ಹಾಗೂ ಉದ್ಧವ್ ಠಾಕ್ರೆಯ ಗುಂಪುಗಾರಿಕೆಯ ಸಂಘರ್ಷದಿಂದ ಇಬ್ಭಾಗಗೊಂಡ ಮೂಲ ಶಿವಸೇನೆಯ ಚಿಹ್ನೆಯಾದ ಬಿಲ್ಲು-ಬಾಣವನ್ನು ರದ್ದುಗೊಳಿಸಿ ಎರಡೂ ಬಣಕ್ಕೆ ಹೊಸ ಚಿಹ್ನೆ ನೀಡಿದೆ. ಉದ್ಧವ್ ಠಾಕ್ರೆ ಬಣಕ್ಕೆ ಚುನಾವಣಾ ಆಯೋಗ ನಿನ್ನೆ ಚಿಹ್ನೆಯಾಗಿ ಉರಿಯುವ ಪಂಜು ನೀಡಿತ್ತು.

    ಕೊನೆಗೂ 36 ವರ್ಷಗಳ ನರಕಯಾತನೆಯಿಂದ ಬಿಡುಗಡೆ; ಮಗಳನ್ನು ಕತ್ತಲೆ ಕೋಣೆಯಲ್ಲಿ ಬಂಧಿಸಿಟ್ಟಿದ್ದ ತಂದೆ!

    ಫ್ರಿಡ್ಜ್​ ಒಳಗೆ ಕುಕ್ಕರ್​; ಶುರುವಾಯ್ತು ‘ಬಿಸಿಬಿಸಿ’ ಚರ್ಚೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts