ಕುಣಿಗಲ್: ಪಟ್ಟಣದಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ತೀವ್ರವಾಗಿ ಗಾಯಗೊಂಡಿದ್ದ ಇಬ್ಬರು ಚಿಕಿತ್ಸೆ ಲಿಸದೆ ಬುಧವಾರ ಮುಂಜಾನೆ ಮೃತಪಟ್ಟಿದ್ದಾರೆ. ಕೋಟೆ ವಾಸಿಗಳಾದ ಕುಶಾಲ್ (11), ಶಿವಣ್ಣ (45) ಮತರು.
ಕಾರಪುರಿ ವ್ಯಾಪಾರಿಯಾಗಿದ್ದ ರವಿಕುಮಾರ್ ಅವರು ಪುರಿ ಹುರಿಯಲು ನಾಲ್ಕು ಕೆಜಿಯ ಗ್ಯಾಸ್ ಸಿಲಿಂಡರ್ ಸ್ಟೌ ಬಳಸುತ್ತಿದ್ದರು. ಮೇ 17ರಂದು ರವಿಕುಮಾರ್ ಹೆಂಡತಿ ಶ್ರುತಿ, ಪುತ್ರಿ ಹೇಮಲತಾಳನ್ನು ಟ್ಯೂಷನ್ಗೆ ಬಿಡಲು ಮನೆಯಿಂದ ಹೊರ ಬಂದ ವೇಳೆ ಸ್ಫೋಟವಾಗಿದೆ. ಶಬ್ದ ಕೇಳಿ ಮನೆ ಒಳಗೆ ಹೋಗಿ ನೋಡಿದಾಗ ಸಿಲಿಂಡರ್ ಸ್ಫೋಟಗೊಂಡು ಮನೆಯಲ್ಲಿ ಬೆಂಕಿ ಹತ್ತಿಕೊಂಡು ಉರಿಯುತ್ತಿತ್ತು. ಇದನ್ನು ಗಮನಿಸಿದ ಶ್ರುತಿ ಕೂಗಿಕೊಂಡಿದ್ದಾರೆ. ತಕ್ಷಣ ಮೇಲಿನ ಮನೆಯಲ್ಲಿದ್ದ ಹೇಮಲತಾ, ಶಿವಣ್ಣ, ಮಂಜಮ್ಮ, ಸಮೀನಾ ಓಡಿ ಬಂದಿದ್ದಾರೆ. ಇವರೊಂದಿಗೆ ರವಿಕುಮಾರ್ ಮಗ ಕುಶಾಲ್ ಸಹ ಮನೆಯೊಳಗೆ ಬಂದಿದ್ದು, ಬೆಂಕಿ ತಗುಲಿ ಎಲ್ಲರೂ ಗಾಯಗೊಂಡಿದ್ದಾರೆ. ಕುಣಿಗಲ್ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಲಕಾರಿಯಾಗದೇ ಕುಶಾಲ್, ಶಿವಣ್ಣ ಮತಪಟ್ಟಿದ್ದಾರೆ. ಅವಡದಲ್ಲಿ ತೀವ್ರವಾಗಿ ಗಾಯಗೊಂಡಿರುವ ಹೇಮಲತಾ, ಮಂಜಮ್ಮ, ಸಮೀನಾ ಅವರಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.