More

    ಮೀನಿನ ಜಗಳ ಜೀವಕ್ಕೆ ಏರವಾಯ್ತು? ದೋಣಿಯಲ್ಲಿ ಹೋದ ಬಾಲಕರು ಪೊದೆಯಲ್ಲಿ ಸಿಕ್ಕರು…!

    ಕೋಲ್ಕತ್ತ: ಮಳೆಯಿಂದಾಗಿ ನೀರು ನಿಂತಿದ್ದ ಜಾಗದಲ್ಲಿ ಮೀನು ಹಿಡಿಯುತ್ತಿದ್ದ ಇಬ್ಬರು ಬಾಲಕರ ತಲೆಯನ್ನೇ ಕತ್ತರಿಸಿ ಕೊಲೆ ಮಾಡಲಾಗಿದೆ.

    ಮುರ್ಷಿದಾಬಾದ್​ ಜಿಲ್ಲೆಯ ಬೆಹ್ರಾಮ್​ಪುರದ ಕಂತಾಲಿ ಗ್ರಾಮದಲ್ಲಿ ಈ ಘಟನೆ ವರದಿಯಾಗಿದೆ. ಮೀನು ಹಿಡಿಯಲು ತೆರಳಿದ್ದ ಬಾಲಕರು ಎರಡು ದಿನಗಳಿಂದ ಕಾಣೆಯಾಗಿದ್ದ ಬಾಲಕರ ಶವಗಳು ಭಾನುವಾರ ಪತ್ತೆಯಾಗಿವೆ. ಬಾಲಕರನ್ನು 15 ವರ್ಷದ ಮಂಜರುಲ್​ ಶೇಖ್​ ಹಾಗೂ 16 ವರ್ಷದ ತಂಜರುಲ್​ ಶೇಖ್​ ಎಂದು ಗುರುತಿಸಲಾಗಿದೆ.

    ಸ್ಥಳೀಯ ಯುವಕರಿಂದಲೇ ಕೃತ್ಯ: ಈ ಇಬ್ಬರು ಬಾಲಕರು ಸಂಭಂಧಿಗಳಾಗಿದ್ದು, ಸೌದಿಯಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಸ್ಥಳೀಯ ಯುವಕರೇ ಅವರನ್ನು ಹತ್ಯೆ ಮಾಡಿದ್ದಾರೆ ಎಂದು ಮೃತರ ಕುಟುಂಬದವರು ಆರೋಪಿಸಿದ್ದಾರೆ.

    ಇದನ್ನೂ ಓದಿ; ಗಾಳಿಯಲ್ಲಿರುವ ಕರೊನಾ ವೈರಸ್​ ಪತ್ತೆಹಚ್ಚುವ ಸಾಧನ ಆವಿಷ್ಕಾರ; 10-15 ಸೆಕೆಂಡ್​ಗಳಲ್ಲಿ ಫಲಿತಾಂಶ 

    ಪಶ್ಚಿಮ ಬಂಗಾಳದಲ್ಲಿ ಪ್ರವಾಹದಿಂದಾಗಿ ಹಲವು ಪ್ರದೇಶಗಳು ಜಲಾವೃತವಾಗಿವೆ. ಹೀಗಾಗಿ ಮೀನು ಹಿಡಿಯಲೆಂದು ಇಬ್ಬರು ದೋಣಿಯಲ್ಲಿ ಹಿಜಲೇರ್​ ಮಾಥ್​ ಎಂಬ ಪ್ರದೇಶಕ್ಕೆ ತೆರಳಿದ್ದರು. ಆಗಿನಿಂದಲೇ ಇಬ್ಬರು ನಾಪತ್ತೆಯಾಗಿದ್ದರು.

    ಭಾನುವಾರ ಬೆಳಗ್ಗೆ ಪೊದೆಯೊಂದರಲ್ಲಿ ಇಬ್ಬರ ರುಂಡವಿಲ್ಲದ ಶವಗಳು ಪತ್ತೆಯಾಗಿವೆ. ಅಲ್ಲಿಂದ ಅಂದಾಜು 40 ಮೀಟರ್​ ದೂರದಲ್ಲಿ ಇಬ್ಬರ ತಲೆಗಳು ಸಿಕ್ಕಿವೆ ಎಂದು ಪೊಲೀಸರು ಹೇಳಿದ್ದಾರೆ. ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ. ಇನ್ನೂ ಎಂಟು ಜನರ ವಿಚಾರಣೆ ನಡೆಸಿದ್ದಾರೆ ಮೀನು ಹಿಡಿಯುವ ವಿಚಾರವಾಗಿಯೇ ಅವರ ಕೊಲೆ ನಡೆದಿದೆ ಎಂದು ಹೇಳಲಾಗಿದೆ.

    9 ತಾಸಿನ ನಿದ್ದೆಯೇ ಉದ್ಯೋಗ; ಲಕ್ಷ ರೂ. ಸಂಬಳ; ಷರತ್ತುಗಳು ಅನ್ವಯ….!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts