More

    ರಾತ್ರಿ ಗ್ಲಾಸ್ ಒಡೆದಿದ್ರು.. ಬೆಳಗ್ಗೆ ಕಂಬಿ ಎಣಿಸಿದ್ರು…

    ಬೆಂಗಳೂರು: ಇವರಿನ್ನೂ ಚಿಗುರು ಮೀಸೆಯ ಪೋರರು. ಆದರೆ ರಾತ್ರಿ ಇವರು ಅದೆಷ್ಟೋ ಜನ ನಿದ್ರೆ ಕೆಡುವಂಥ ಕೆಲಸ ಮಾಡಿದ್ದರು. ಕೊನೆಗೂ ಇವರು ಕಿಡಿಗೇಡಿತನ ತೋರಿ ಪರಾರಿಯಾದಷ್ಟೇ ಕ್ಷಿಪ್ರವಾಗಿ ಕಾರ್ಯಪ್ರವೃತ್ತರಾದ ಪೊಲೀಸರು ಬೆಳಗಾಗುವಷ್ಟರಲ್ಲಿ ಇವರನ್ನು ಬಂಧಿಸಿದ್ದರು.

    ಮನೆ ಮುಂದೆ ಮತ್ತು ರಸ್ತೆಬದಿ ನಿಲ್ಲಿಸಿದ್ದ ಕಾರು, ಆಟೋ ರಿಕ್ಷಾಗಳನ್ನು ಈ ಕಿಡಿಗೇಡಿಗಳು ಹಾನಿ ಮಾಡಿದ್ದು, ವಿಜಯನಗರ ಪೊಲೀಸರು ಇಬ್ಬರೂ ಬಾಲಾಪರಾಧಿಗಳನ್ನು ಬಂಧಿಸಿದ್ದಾರೆ. ವಿಜಯನಗರ ಸಮೀಪದ ಗೋವಿಂದರಾಜನಗರದಲ್ಲಿ ಬುಧವಾರ ರಾತ್ರಿ ಈ ಕೃತ್ಯ ನಡೆದಿದೆ.

    ಇದನ್ನೂ ಓದಿ: ದಪ್ಪ ಇದ್ದರೆ ಮಕ್ಕಳಾಗದ ಸಮಸ್ಯೆ ಉಂಟಾದೀತು ಎಚ್ಚರ! 

    ಬೈಕ್‌ನಲ್ಲಿ ಬಂದ ಕಿಡಿಗೇಡಿಗಳು ರಸ್ತೆಬದಿ ಮತ್ತು ಮನೆ ಮುಂದೆ ನಿಲ್ಲಿಸಿದ್ದ 6 ಕಾರು ಮತ್ತು 1 ಆಟೋ ಗಾಜಿಗೆ ರಾಡ್‌ನಿಂದ ಹೊಡೆದು ಹಾನಿ ಮಾಡಿದ್ದಾರೆ. ಈ ಕುರಿತು ವಾಹನ ಮಾಲೀಕ ಕೃಷ್ಣೋಜಿ ರಾವ್ ಎಂಬುವರು ದೂರು ನೀಡಿದ್ದರು. ಆ ಮೇರೆಗೆ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ವಿಜಯನಗರ ಪೊಲೀಸರು, ಸಿಸಿ ಕ್ಯಾಮರಾ ದೃಶ್ಯಾವಳಿ ಮತ್ತು ಖಚಿತ ಸುಳಿವಿನ ಮೇರೆಗೆ ಬಾಲಾಪರಾಧಿಗಳನ್ನು ವಶಕ್ಕೆ ಪಡೆದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

    ಅಂಬೆಗಾಲಿಡುವಾಗ್ಲೇ ಸಪ್ತಪದಿ ತುಳಿದಿದ್ಲು; ಈಗ ಮದ್ವೆ ಆಗೋ ವಯಸ್ಸಲ್ಲೀಕೆ ವೈವಾಹಿಕ ಬಂಧನದಿಂದ ಮುಕ್ತಮುಕ್ತ..

     

    ಇವರಿಬ್ಬರು ಸಿಕ್ಕಿ ಬೀಳದಿದ್ದರೆ ವರ್ಷಾಂತ್ಯದ ಮಧ್ಯರಾತ್ರಿ ಅದೇನಾಗಿರುತ್ತಿತ್ತೋ!?

    3 ತಿಂಗಳ ಹಿಂದೆ ಹೂತಿಟ್ಟ ಶವ ಇಂದು ಹೊರಕ್ಕೆ, ಶವದ ಮೇಲಿತ್ತು 4 ಉಂಗುರ: ಈ ‘ದೃಶ್ಯ’ಕ್ಕೆ ಕೊನೆಗೂ ಕ್ಲೈಮ್ಯಾಕ್ಸ್​..

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts