More

    ನಾಟಕ ಮಾಡ್ತಿದ್ದೀರಾ ಎಂದವರಿಗೆ ಅಕ್ಷಯ್ ಹೆಂಡತಿ ಕೊಟ್ಟ ಉತ್ತರ ಇದು …

    ಮುಂಬೈ: ಭಾರತದಲ್ಲಿ ಕರೊನಾ ಎರಡನೇ ಅಲೆಯಿಂದ ಸಾವು-ನೋವು ದಿನದಿಂದ ದಿನಕ್ಕೆ  ಹೆಚ್ಚಾಗುತ್ತಿದ್ದು, ಬಾಲಿವುಡ್​ನ ಹಲವು ಸೆಲೆಬ್ರಿಟಿಗಳು ತಮ್ಮದೇ ರೀತಿಯಲ್ಲಿ ಕೋವಿಡ್​ ಸಂತ್ರಸ್ತರಿಗೆ ಸಹಾಯ ಮಾಡುತ್ತಿದ್ದಾರೆ. ಈ ಮಧ್ಯೆ, ನೀವೇನೂ ಮಾಡುತ್ತಿಲ್ಲ ಎಂದು ಆರೋಪಿಸಿರುವ ನಿವೃತ್ತ ಐಎಎಸ್​ ಅಧಿಕಾರಿಗೆ ಅಕ್ಷಯ್​​ ಕುಮಾರ್​ ಪತ್ನಿ ಟ್ವಿಂಕಲ್​ ಖನ್ನಾ ಸೋಷಿಯಲ್​ ಮೀಡಿಯಾದಲ್ಲಿ ತಕ್ಕ ಉತ್ತರ ನೀಡಿದ್ದಾರೆ.

    ಇದನ್ನೂ ಓದಿ: ಧಾರಾವಾಹಿ ಚಿತ್ರೀಕರಣಕ್ಕೆ ಬ್ರೇಕ್ ಹಾಕಿದ ಗೋವಾ ಸರ್ಕಾರ

    ಕರೊನಾ ಮೊದಲನೇ ಅಲೆಯ ಸಂದರ್ಭದಲ್ಲಿ ಅಕ್ಷಯ್​ ಕುಮಾರ್​, ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ 25 ಕೋಟಿ ದೇಣಿಗೆ ನೀಡಿದ್ದರು. ಎರಡನೆಯ ಅಲೆ ಹೆಚ್ಚಾದ ಮೇಲೆ ಒಂದಿಷ್ಟು ಹಣ ಸಹಾಯ ಮಾಡುವುದರ ಜತೆಗೆ, 100 ಕಾನ್ಸನ್ಟ್ರೇಟರ್​​ಗಳನ್ನು ಕೊಟ್ಟಿದ್ದರು. ಆದರೆ, ಇಂಥ ವಿಷಮ ಪರಿಸ್ಥಿತಿಯಲ್ಲಿ ಅಕ್ಷಯ್​ ಏನೂ ಮಾಡುತ್ತಿಲ್ಲ ಎಂಬ ಅಭಿಪ್ರಾಯ ಕೇಳಿಬರುತ್ತಿದ್ದು, ಈ ಸಂಬಂಧ ನಿವೃತ್ತ ಐಎಎಸ್​ ಅಧಿಕಾರಿ ಸೂರ್ಯ ಪ್ರತಾಪ್​ ಸಿಂಗ್ ಸೋಷಿಯಲ್​ ಮೀಡಿಯಾದಲ್ಲಿ ಈ ಕುರಿತು ಪ್ರಶ್ನಿಸಿದ್ದಾರೆ.

    ಈ ಕುರಿತು ಅಕ್ಷಯ್​ ಕುಮಾರ್​ ಅವರ ಪತ್ನಿ ಟ್ವಿಂಕಲ್​ ಅವರನ್ನು ಪ್ರಶ್ನಿಸಿರುವ ಸಿಂಗ್​, ನಿಮ್ಮ ಗಂಡ ಈ ದೇಶದ ಶ್ರೀಮಂತ ನಟರಲ್ಲೊಬ್ಬರು. ಫಂಡ್​ರೈಸರ್​ ಮಾಡಿ ಹಣ ಸಂಗ್ರಹಿಸುವ ನಾಟಕ ಮಾಡುವ ಬದಲು, ನಿಮ್ಮ ಕುಟುಂಬದವರು ಕೋವಿಡ್​ ಸಂತ್ರಸ್ತರಿಗೆ ಒಂದಿಷ್ಟು ಸಹಾಯ ಮಾಡಿದ್ದರೆ ಚೆನ್ನಾಗಿರುತ್ತಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

    ಇದನ್ನೂ ಓದಿ: ಎರಡು ಭಾಗಗಳಲ್ಲಿ ಪುಷ್ಪ: ‘ಕೆಜಿಎಫ್’ ಮಾರ್ಗದಲ್ಲಿಯೇ ಹೆಜ್ಜೆ

    ಇದಕ್ಕೆ ಪ್ರತಿಕ್ರಿಯಿಸಿರುವ ಟ್ವಿಂಕಲ್​, ಇತ್ತೀಚೆಗಷ್ಟೇ 100 ಕಾನ್ಸನ್ಟ್ರೇಟರ್​ಗಳನ್ನು ಕೊಟ್ಟಿದ್ದೇವೆ. ಅಷ್ಟೇ ಅಲ್ಲ, ಹಲವು ರೀತಿಯಲ್ಲಿ ಸಹಾಯ ಮಾಡುತ್ತಲೇ ಇದ್ದೇವೆ. ಈ ರೀತಿ ಕೊಂಕು ಹುಡುಕುವ ಬದಲು, ಈ ವಿಷಯದಲ್ಲಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುವುದು ಒಳ್ಳೆಯದು. ಈ ತರಹ ಯೋಚಿಸುವುದಕ್ಕೆ ಸಮಯ ಮತ್ತು ಶ್ರಮ ವ್ಯರ್ಥ ಮಾಡುವ ಬದಲು, ಸಂತ್ರಸ್ತರಿಗೆ ಒಂದಿಷ್ಟು ಸಹಾಯ ಮಾಡುವ ಬಗ್ಗೆ ಎಲ್ಲರೂ ಯೋಚಿಸೋಣ ಎಂದು ಬಾಯಿ ಮುಚ್ಚಿಸಿದ್ದಾರೆ.

    ಪ್ರಿನ್ಸ್​ ಮಹೇಶ್​ಬಾಬು ಜೊತೆಯಾಗುತ್ತಾರಾ ಬ್ಯೂಟಿ ಕ್ವೀನ್ ಜಾಹ್ನವಿ ಕಪೂರ್?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts