More

    ಎಣ್ಣೆ ಕುಡಿಯಲು ಹೋದವನು ವಾಪಾಸು ಬರಲೇ ಇಲ್ಲ; ಸ್ಕೆಚ್​ ಹಾಕಿ ಕೊಲೆ ಮಾಡಿಸಿದಳಾ ಪತ್ನಿ?

    ತುಮಕೂರು: ಮದ್ಯಪಾನ ಮಾಡಲೆಂದು ಬಾರ್​ಗೆ ಹೋದ ವ್ಯಕ್ತಿಯನ್ನು ಬಾರ್​ ಎದುರೇ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ತುಮಕೂರು ನಗರದ ರಿಂಗ್ ರಸ್ತೆಯಲ್ಲಿ ನಡೆದಿದೆ. ಇದೀಗ ಕೊಲೆ ಮಾಡಿದ ಆರೋಪಿಗಳು ಪೊಲೀಸರ ವಶವಾಗಿದ್ದಾರೆ.

    ಇದನ್ನೂ ಓದಿ: 4 ವರ್ಷದ ಮಗುವನ್ನು ಕುಡಗೋಲಿನಿಂದ ಕೊಚ್ಚಿ ಕೊಂದ ದೊಡ್ಡಪ್ಪ! ದೇವಸ್ಥಾನದ ಮುಂದೆ ಹರಿಯಿತು ರಕ್ತದೋಕುಳಿ

    ಸುನೀಲ್ ಪ್ರಸಾದ್(೪೦) ಕೊಲೆಯಾದ ದುರ್ದೈವಿ. ಸುನಿಲ್​ನನ್ನು ಜನವರಿ 15ರಂದು ಚಿಲ್ಲೋಟ್ ಬಾರ್ ಎದುರು ತಲೆ ಮೇಲೆ ಸಿಮೆಂಟ್​ ಬ್ಲಾಕ್​ ಎತ್ತಾಕಿ ಕೊಲೆ ಮಾಡಲಾಗಿತ್ತು. ಕೊಲೆ ಪ್ರಕರಣದ ವಿಚಾರಣೆ ನಡೆಸಿದಾಗ ಪೊಲೀಸರಿಗೆ ಅಘಾತಕಾರಿ ವಿಚಾರ ತಿಳಿದುಬಂದಿದೆ. ಮೃತನ ಪತ್ನಿಯೇ ಗಂಡನ ಕೊಲೆ ಮಾಡಿಸಿರುವುದಾಗಿ ತಿಳಿದುಬಂದಿದೆ.

    ಇದನ್ನೂ ಓದಿ: ಡ್ರ್ಯಾಗನ್​ಫ್ರುಟ್​ ಈಗ ‘ಕಮಲಂಫ್ರುಟ್​’ ಮರುನಾಮಕರಣಕ್ಕೆ ಕಾರಣ ಏನು ಗೊತ್ತಾ?

    ಎಣ್ಣೆ ಕುಡಿಯಲು ಹೋದವನು ವಾಪಾಸು ಬರಲೇ ಇಲ್ಲ; ಸ್ಕೆಚ್​ ಹಾಕಿ ಕೊಲೆ ಮಾಡಿಸಿದಳಾ ಪತ್ನಿ?ಸುನೀಲ್ ಪ್ರಸಾದ್ ಪತ್ನಿ ನಿರ್ಮಲಾ, ರಂಗಯ್ಯ ಹೆಸರಿನ ವ್ಯಕ್ತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು. ಈ ವಿಚಾರ ತಿಳಿದು ಗಂಡ ಸುನೀಲ್ ಪ್ರಸಾದ್ ಗಲಾಟೆ ಮಾಡಿದ್ದ. ಅದೇ ಕಾರಣದಿಂದಾಗಿ ನಿರ್ಮಲಾ ಗಂಡನ ಕೊಲೆಗೆ ಸ್ಕೆಚ್​ ಹಾಕಿದ್ದಾಳೆ. ಜನವರಿ 15 ರಂದು ಮದ್ಯಪಾನ ಮಾಡಿ ಬಾರ್ ಹೊರೆಗೆ ನಿಂತಿದ್ದ ಸುನೀಲ್ ಪ್ರಸಾದ್ ಮೇಲೆ ದಾಳಿ ನಡೆಸಲಾಗಿದೆ. ಆತನ ತಲೆಯ ಮೇಲೆ ಸಿಮೆಂಟ್ ಬ್ಲಾಕ್ ಎತ್ತಿಹಾಕಿ ರಂಗಯ್ಯ ಕೊಲೆ ಮಾಡಿದ್ದಾನೆ. ಈ ಸಂಬಂಧ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೀಗ ಆರೋಪಿ ರಂಗಯ್ಯ ಹಾಗೂ ಸುನೀಲ್ ಪತ್ನಿ ನಿರ್ಮಲಳನ್ನು ಬಂಧಿಸಲಾಗಿದೆ. (ದಿಗ್ವಿಜಯ ನ್ಯೂಸ್​)

    ಪ್ಲೀಸ್​ ಬಾಗಿಲು ತೆಗಿ.. ನಾವೆಲ್ಲ ಇದ್ದೇವೆ.. ಎಂದು ಗೋಗರೆಯುತ್ತಿದ್ದರೂ ನೋಡನೋಡುತ್ತಿದ್ದಂತೆ ನೇಣಿಗೆ ಶರಣಾದ!

    ಗಂಡ ಊರಿನಲ್ಲಿ ಇಲ್ಲದಾಗ ನನ್ನ ಕರೆದು ಏನೇನೋ ಮಾಡಿದಳು- ಈಗ ದಿಕ್ಕೇ ತೋಚದಾಗಿದೆ, ಏನು ಮಾಡಲಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts