ಬೆಂಗಳೂರು: ಮೆಜೆಸ್ಟಿಕ್ ಬಳಿಯ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಗುರುವಾರ ಬೆಳ್ಗಗೆ ದೆಹಲಿಯಿಂದ ಬಂದಿಳಿದ 537 ಪ್ರಯಾಣಿಕರ ಪೈಕಿ 300ಕ್ಕೂ ಹೆಚ್ಚು ಮಂದಿ ಹೋಟೆಲ್ಗಳಲ್ಲಿ ಕ್ವಾರಂಟೈನ್ ಆಗಲು ಸಿದ್ಧವಿಲ್ಲ ಎಂದು ಹೈಡ್ರಾಮ ನಡೆಸಿದರು.
ಪ್ಲಾಟ್ ಫಾರಂನಲ್ಲೇ ನಿಂತ ನೂರಾರು ಪ್ರಯಾಣಿಕರು ನಾವು ವಾಪಸ್ ಹೋಗಲು ರೆಡಿ. ಆದರೆ ಹೋಂ ಕ್ವಾರಂಟೈನ್ ಹೊರತು ಬೇರೆಡೆ ಇರಲ್ಲ ಎಂದು ಕೂಗಾಡಿದರು. ಕ್ವಾರಂಟೈನ್ನಲ್ಲಿ ಇರಬೇಕಾದ ಬಗ್ಗೆ ನಮಗೆ ಮಾಹಿತಿ ಇರಲಿಲ್ಲ. ನಮ್ಗೆ ನೀವೆ ಟಿಕೆಟ್ ಬುಕ್ ಮಾಡಿಸಿ ವಾಪಸ್ ಕಳುಹಿಸಿ ಎಂದು ಕೆಲವರು ವಾಗ್ವಾದಕ್ಕೆ ಇಳಿದಿದ್ದರು.
ಇದನ್ನೂ ಓದಿರಿ ಪಾಕ್ ಸೇನೆಯ ಬೇಡಿಕೆ ಕೇಳಿ ಬೆಚ್ಚಿಬಿದ್ದ ಪ್ರಧಾನಿ ಇಮ್ರಾನ್!
ಮಂಗಳವಾರ ರಾತ್ರಿ ದೆಹಲಿಯಿಂದ ಹೊರಟಿದ್ದ ರೈಲು ಗುರುವಾರ ಬೆಳಗ್ಗೆ ಮೆಜೆಸ್ಟಿಕ್ ಬಳಿಯ ರೈಲ್ವೆ ನಿಲ್ದಾಣ ತಲುಪಿತು. ಪೂರ್ವ ನಿಗದಿಯಂತೆ ಎಲ್ಲ ಪ್ರಯಾಣಿಕರನ್ನೂ ನಗರದ ಸುಮಾರು 90 ಹೊಟೇಲ್ಗಳಲ್ಲಿ ಕ್ವಾರಂಟೈನ್ ಮಾಡಲು ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದರು. ಪ್ರಯಾಣಿಕರು ತಮ್ಮ ಆದ್ಯತೆ ಮೇರೆಗೆ ಕ್ವಾರಂಟೈನ್ ಆಗುವ ಹೋಟೆಲ್ಗಳ ಆಯ್ಕೆಗೆ ಅವಕಾಶ ನೀಡಲಾಗಿದೆ. ಆರ್ಥಿಕವಾಗಿ ಹಿಂದುಳಿದ ಪ್ರಯಾಣಿಕರಿಗೆ ಸರ್ಕಾರಿ ಹಾಸ್ಟೆಲ್, ಕಲ್ಯಾಣ ಮಂಟಪಗಳಲ್ಲಿ ವ್ಯವಸ್ಥೆ ಮಾಡಲಾಗಿದೆ.
ಆದರೂ ನೂರಾರು ಪ್ರಯಾಣಿಕರು ಹೋಂ ಕ್ವಾರಂಟೈನ್ ಬೇಕೆಂದು ಪಟ್ಟು ಹಿಡಿದರು. ರೈಲ್ವೆ ನಿಲ್ದಾಣದಿಂದ ಯಾವೊಬ್ಬ ಪ್ರಯಾಣಿಕರೂ ಎಸ್ಕೇಪ್ ಆಗದಂತೆ ನೋಡಿಕೊಂಡ ಭದ್ರತಾ ಪಡೆಯು ಪ್ರಯಾಣಿಕರನ್ನು ಬಿಎಂಟಿಸಿ ಬಸ್ ಹತ್ತಿಸಿ ನಿಗದಿತ ಕ್ವಾರಂಟೈನ್ ಸ್ಥಳಕ್ಕೆ ತಲುಪಿಸಿತು.
ಇದನ್ನೂ ಓದಿರಿ 700 ಕಿ.ಮೀ. ದೂರದ ಸ್ವಗ್ರಾಮಕ್ಕೆ ಗರ್ಭಿಣಿ ಪತ್ನಿ, ಮಗಳ ಹೊತ್ತು ಸಾಗಿದ್ದೇ ರೋಚಕ ಕಥೆ!