More

    ಗುಟ್ಕಾ ಉಗುಳಲು ಹೋದವನಿಗೆ ಟ್ರ್ಯಾಕ್ಟರ್​ ರೂಪದಲ್ಲಿ ಎದುರಾದ ಜವರಾಯ!

    ಗದಗ: ಬೈಕ್ ಓಡಿಸುವಾದ ಗುಟ್ಕಾ ಉಗುಳಲು ಮುಂದಾದ ವ್ಯಕ್ತಿಗೆ ಟ್ರ್ಯಾಕ್ಟರ್​ ರೂಪದಲ್ಲಿ ಜವರಾಯ ಎದುರಾಗಿರುವ ಘಟನೆ ಗದಗ ಜಿಲ್ಲೆ ನರಗುಂದ ತಾಲೂಕಿನ ಸುರಕೋಡ ಗ್ರಾಮದ ಬಳಿ ನಡೆದಿದೆ. ಟ್ರ್ಯಾಕ್ಟರ್​ ಬಡಿದ ಹಿನ್ನೆಲೆಯಲ್ಲಿ ಓರ್ವ ಮೃತಪಟ್ಟಿದ್ದು ಇನ್ನಿಬ್ಬರು ಗಂಭೀರ ಗಾಯಾಳುಗಳಾಗಿದ್ದಾರೆ.

    ಇದನ್ನೂ ಓದಿ: ಜೋ ಬೈಡೆನ್​ ಭಾಷಣಕ್ಕೆ ಕ್ಷಣಗಣನೆ… ಈ ಭಾರತೀಯನಿಗೆ ಸಿಗಲಿದೆ ಶ್ರೇಯಸ್ಸು…

    ಒಂದೇ ಬೈಕ್​ನಲ್ಲಿ ಮೂರು ಜನ ಸುರಕೋಡ ಗ್ರಾಮದಿಂದ ನರಗುಂದಕ್ಕೆ ಬರುತ್ತಿದ್ದರು. ಈ ವೇಳೆ ಬೈಕ್​ನಲ್ಲಿ ಕೊನೆಯಲ್ಲಿ ಕುಳಿತಿದ್ದ ನಿಂಗಪ್ಪ ಫಕ್ಕಿರಪ್ಪ ಕಳಕನ್ನವರ (35) ಗುಟ್ಕಾ ಉಗುಳಲು ಮುಂದಾಗಿದ್ದಾನೆ. ಆತ ಬಗ್ಗಿ ಗುಟ್ಕಾ ಉಗುಳಲು ಹೋದ ಕಾರಣ ಬೈಕ್​ ಚಾಲಕನಿಗೆ ನಿಯಂತ್ರಣ ತಪ್ಪಿದೆ. ಅದೇ ವೇಳೆಗೆ ಅಲ್ಲಿ ಬರುತ್ತಿದ್ದ ಟ್ಯಾಕ್ಟರ್​ಗೆ ಬೈಕ್​ ಬಡಿದಿದೆ. ಇದರಿಂದಾಗಿ ನಿಂಗಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇನ್ನಿಬ್ಬರು ಗಂಭೀರ ಗಾಯಾಳುಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನರಗುಂದ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

    ಎಣ್ಣೆ ಕುಡಿಯಲು ಹೋದವನು ವಾಪಾಸು ಬರಲೇ ಇಲ್ಲ; ಸ್ಕೆಚ್​ ಹಾಕಿ ಕೊಲೆ ಮಾಡಿಸಿದಳಾ ಪತ್ನಿ?

    ಪ್ಲೀಸ್​ ಬಾಗಿಲು ತೆಗಿ.. ನಾವೆಲ್ಲ ಇದ್ದೇವೆ.. ಎಂದು ಗೋಗರೆಯುತ್ತಿದ್ದರೂ ನೋಡನೋಡುತ್ತಿದ್ದಂತೆ ನೇಣಿಗೆ ಶರಣಾದ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts