ಟೋಕಿಯೊ: ಕೋವಿಡ್ –19 ಮಹಾಮಾರಿಯ ಅಬ್ಬರದ ನಡುವೆಯೂ ಟೋಕಿಯೊ ಒಲಿಂಪಿಕ್ಸ್ಗೆ ಅಂತಿಮ ಸಿದ್ಧತೆಗಳು ನಡೆಯುತ್ತಿವೆ. ಪ್ರತಿಷ್ಠಿತ ಕ್ರೀಡಾಕೂಟಕ್ಕೆ ಕೇವಲ 10 ವಾರಗಳಷ್ಟೇ ಬಾಕಿ ಉಳಿದಿವೆ. ಆದರೆ, ಕ್ರೀಡಾಕೂಟ ರದ್ದುಗೊಳಿಸಬೇಕು ಎಂದು ದಿನದಿಂದ ದಿನಕ್ಕೆ ಸ್ಥಳಿಯ ನಾಗರೀಕರ ಕೂಗು ಹೆಚ್ಚಾಗುತ್ತಿದೆ. ಮಹಾಮಾರಿಯಿಂದಾಗಿ ಜಪಾನ್ ಸರ್ಕಾರ ವೈರಸ್ ತುರ್ತುಪರಿಸ್ಥಿತಿ ವಿಸ್ತರಿಸಲು ಮುಂದಾದರೆ, ಕ್ರೀಡಾಕೂಟ ರದ್ದುಗೊಳಿಸಬೇಕೆಂದು 3.5 ಲಕ್ಷಕ್ಕೂ ಹೆಚ್ಚು ಮಂದಿ ಸಹಿಯುಳ್ಳ ಅರ್ಜಿ ಸಲ್ಲಿಸಿದ್ದಾರೆ. ಈಗಾಗಲೇ ಟೋಕಿಯೊದಲ್ಲಿ ಮೇ ಅಂತ್ಯದವರೆಗೂ ವೈರಸ್ ತುರ್ತು ಪರಿಸ್ಥಿತಿ ಎಂದು ಘೋಷಿಸಲಾಗಿದೆ.
ಜಪಾನ್ನ ಮೂರು ಪ್ರಾಂತ್ಯದಲ್ಲಿ ಕೋವಿಡ್-19 ಅಬ್ಬರ ಹೆಚ್ಚಾಗಿದೆ. ಒಲಿಂಪಿಕ್ ಆಯೋಜನೆಗೆ ಸಿದ್ಧವಾಗಿರುವ ಉತ್ತರ ಪ್ರಾಂತ್ಯದ ಹೊಕೈಡೊ ಪ್ರದೇಶ ಕೂಡ ಒಳಗೊಂಡಿದೆ. ಜಪಾನ್ನಲ್ಲಿ ಕೋವಿಡ್ ನಾಲ್ಕನೇ ಅಲೆ ತಡೆಗಟ್ಟುವ ಸಲುವಾಗಿ ವೈರಸ್ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಇದರಿಂದ ಕೆಲಮಂದಿ ಒಲಿಂಪಿಕ್ಸ್ ರದ್ದುಗೊಳಿಸುವುದೇ ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಒಲಿಂಪಿಕ್ಸ್ ಆಯೋಜಿಸುವುದು ಸೂಕ್ತವಲ್ಲ. ಕ್ರೀಡಾಕೂಟ ರದ್ದುಗೊಳಿಸಿ 3.51 ಲಕ್ಷ ಮಂದಿ ಸಹಿಯುಳ್ಳ ಅಜಿರ್ ಸಲ್ಲಿಸಿರುವುದಾಗಿ ಟೋಕಿಯೊ ಗವರ್ನರ್ನ ಮಾಜಿ ಅಭ್ಯಥಿರ್ಯೂ ಆಗಿದ್ದ ಕೆಂಜಿ ಉತ್ಸುನೊಮಿಯಾ ತಿಳಿಸಿದ್ದಾರೆ. ಈ ಅಜಿರ್ಯನ್ನು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಹಾಗೂ ಪ್ಯಾರಾಲಂಪಿಕ್ ಸಮಿತಿ (ಐಪಿಸಿ), ಸ್ಥಳೀಯ ಆಯೋಜಕರು ಹಾಗೂ ಸರ್ಕಾರಕ್ಕೂ ನೀಡಲಾಗಿದೆ ಎಂದರು.
ಇದನ್ನೂ ಓದಿ: ಶಸ್ತ್ರಚಿಕಿತ್ಸೆಗೆ ಒಳಗಾದ ಕೆಎಲ್ ರಾಹುಲ್, ಫಿಟ್ನೆಸ್ ಸ್ಥಿತಿ ಹೇಗಿದೆ ಗೊತ್ತಾ
ಇಂಥ ಕಠಿಣ ಸ್ಥಿತಿಯಲ್ಲಿ ಒಲಿಂಪಿಕ್ಸ್ ಆಯೋಜಿಸುವುದು ಕಷ್ಟಕರ ಎಂದು ಸ್ಥಳಿಯ ವೈದ್ಯರ ಸಂಘ ಕೂಡ ಅಭಿಪ್ರಾಯ ವ್ಯಕ್ತಪಡಿಸಿತ್ತು. ಜಪಾನ್ನಲ್ಲಿ ಈಗಾಗಲೇ ಕೆಲವೊಂದು ಅಂತಾರಾಷ್ಟ್ರೀಯ ಕೂಟಗಳು ಆಯೋಜನೆಗೊಂಡಿವೆ. ಸೂಕ್ತ ಮಾರ್ಗಸೂಚಿ ಸಿದ್ಧಪಡಿಸಿ ಕಠಿಣ ನಿಲುವುಗಳನ್ನು ಅನುಸರಿಸಿ, ಕ್ರೀಡಾಕೂಟವನ್ನು ವ್ಯವಸ್ಥಿತವಾಗಿ ನಡೆಸಬೇಕು ಎಂದು ವಿಶ್ವ ಅಥ್ಲೆಟಿಕ್ಸ್ ಮುಖ್ಯಸ್ಥ ಸೆಬಾಸ್ಟಿಯನ್ ಕೊ ತಿಳಿಸಿದ್ದಾರೆ. ಜಪಾನ್ನ ಪ್ರತಿಷ್ಠಿತ ಬ್ಯಾಂಕ್ವೊಂದರ ಸಿಇಒ ಮಸಾಯೊಶಿ ಸನ್ ಕೂಡ ಗೇಮ್ಸ್ ನಡೆಸುವುದು ಅಷ್ಟು ಸೂಕ್ತವಲ್ಲ ಎಂದಿದ್ದಾರೆ.