More

    ಸೀಮಂತ ಕಾರ್ಯಕ್ಕೆ ತೆರಳುತ್ತಿದ್ದ 7 ತಿಂಗಳ ಗರ್ಭಿಣಿ ರೈಲಿನಿಂದ ಬಿದ್ದು ಸಾವು

    ಕಡಲೂರ್​: ಚಲಿಸುವ ರೈಲಿನಲ್ಲಿ ಶೌಚಾಲಯ ಬಳಸಲು ಹೋಗಿದ್ದ ಗರ್ಭಿಣಿಯೊಬ್ಬರು ಆಯತಪ್ಪಿ ರೈಲಿನಿಂದ ಬಿದ್ದು ಮೃತಪಟ್ಟ ಘಟನೆ ತಮಿಳುನಾಡಿನ ಉಲುಂದೂರುಪೇಟೆ ಮತ್ತು ವಿರುಧಾಚಲಂ ನಡುವೆ ನಡೆದಿದೆ.

    ಇದನ್ನೂ ಓದಿ:  ಅರವಿಂದ್ ಕೇಜ್ರಿವಾಲ್ ಜಾಮೀನು ಅರ್ಜಿ ವಿಚಾರಣೆ ಮೇ 7 ರಂದು: ಸುಪ್ರೀಂ ಕೋರ್ಟ್ ತೀರ್ಮಾನ

    ಚೆನ್ನೈನ ತಿರುಸುಲಂ ಮೂಲದ ಕಸ್ತೂರಿ (22) ಮೃತ ದುರ್ದೈವಿ. ಏಳು ತಿಂಗಳ ಗರ್ಭಿಣಿಯಾಗಿದ್ದ ಕಸ್ತೂರಿ ಅವರಿಗೆ ತೆಂಕಾಶಿಯಲ್ಲಿ ಸೀಮಂತ ಕಾರ್ಯ ಆಯೋಜನೆಗೊಂಡಿತ್ತು. ಪತಿ ಸುರೇಶ್ ಕುಮಾರ್ ಮತ್ತು ಸಂಬಂಧಿಕರೊಂದಿಗೆ ಕೊಲ್ಲಂ ಎಕ್ಸ್‌ಪ್ರೆಸ್‌ನಲ್ಲಿ ಗುರುವಾರ ರಾತ್ರಿ ಇವರು ಕಾರ್ಯಕ್ರಮಕ್ಕಾಗಿ ಪ್ರಯಾಣಿಸುತ್ತಿದ್ದಳು.

    ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ವಾಂತಿ ಮತ್ತು ವಾಕರಿಕೆ ತಲೆಸುತ್ತಿನಿಂದ ಕಸ್ತೂರಿ ಅವರು ಶೌ

    ರೈಲಿನಿಂದ ಬಿದ್ದ ಆಕೆಯನ್ನು ರಕ್ಷಿಸುವ ಪ್ರಯತ್ನದಲ್ಲಿ ಆಕೆಯ ಸಂಬಂಧಿಕರು ಚೈನ್ ಎಳೆದು ರೈಲು ನಿಲ್ಲಿಸಲು ಪ್ರಯತ್ನ ನಡೆಸಿದ್ದರು. ರೈಲು ನಿಂತಿತಾದರೂ ಕಸ್ತೂರಿ ಅವರನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ನಂತರ ರೈಲು ವಿರುಧಾಚಲಂ ನಿಲ್ದಾಣಕ್ಕೆ ತಲುಪಿತು.

    ಘಟನೆ ಕುರಿತು ಸಂಬಂಧಿಕರು ಪೊಲೀಸರಿಗೆ ದೂರು ನೀಡಿದ್ದಾರೆ. ಶೋಧಾ ಕಾರ್ಯ ಆರಂಭಿಸಿದ ಪೊಲೀಸರು ಉಲುಂದೂರುಪೇಟೆಯಿಂದ ಒಂದು ಕಿಲೋಮೀಟರ್ ದೂರದಲ್ಲಿ ಗರ್ಭಿಣಿ ಕಸ್ತೂರಿ ಅವರ ಮೃತದೇಹ ಪತ್ತೆಯಾಗಿದೆ. ಈ ಘಟನೆ ಕುರಿತು ದೂರು ದಾಖಲಾಗಿದೆ.

    ಲೋಕಸಭೆ ಚುನಾವಣೆ: ರಾಯ್ ಬರೇಲಿಯಲ್ಲಿ ನಾಮಪತ್ರ ಸಲ್ಲಿಸಿದ ರಾಹುಲ್ ಗಾಂಧಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts