More

    ವಿಜೃಂಭಣೆಯ ಹುಲಿವಾಹನೋತ್ಸವ

    ಕೆ.ಆರ್.ಪೇಟೆ: ತಾಲೂಕಿನ ತ್ರಿವೇಣಿ ಸಂಗಮದಲ್ಲಿರುವ ಮಲೆ ಮಹದೇಶ್ವರ ದೇವಸ್ಥಾನದಲ್ಲಿ ಸೋಮವಾರ ಹುಲಿವಾಹನೋತ್ಸವ ಅದ್ದೂರಿಯಾಗಿ ನಡೆಯಿತು.

    ಉತ್ಸವದಲ್ಲಿ ನೂರಾರು ಭಕ್ತರು ಭಾಗಿಯಾಗಿದ್ದರು. ಉಘೇ ಮಾದಪ್ಪ ಉಘೇ, ಉಘೇ ಮಹದೇಶ್ವರ… ಎಂಬ ಜಯಘೋಷಗಳು ಮೊಳಗಿದವು. ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಪುರ, ಅಂಬಿಗರಹಳ್ಳಿ ಸಂಗಾಪುರ ತ್ರಿವಳಿ ಗ್ರಾಮಗಳ ಪಕ್ಕದಲ್ಲಿರುವ ಕಾವೇರಿ, ಹೇಮಾವತಿ ಹಾಗೂ ಲಕ್ಷ್ಮಣತೀರ್ಥ ಸೇರಿದಂತೆ ಮೂರು ನದಿಗಳು ಒಂದಾಗಿ ಸೇರುವ ತ್ರಿವೇಣಿ ಸಂಗಮದ ಬಳಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts