More

    ಒಬ್ಬಳ ಪ್ರಾಣ ಉಳಿಸಲು ಹೋಗಿ ಇನ್ನಿಬ್ಬರೂ ಜೀವ ಕಳೆದುಕೊಂಡರು; ಗುಟುಕು ನೀರೇ ಮೂವರಿಗೂ ಮುಳುವಾಯ್ತು..

    ಗದಗ: ಒಬ್ಬಳ ಪ್ರಾಣ ಉಳಿಸಲು ಹೋದ ಇನ್ನಿಬ್ಬರು ಕೂಡ ಪ್ರಾಣ ಜೀವ ಕಳೆದುಕೊಂಡಿದ್ದು, ಈ ಮೂವರ ಪಾಲಿಗೆ ಗುಟುಕು ನೀರೇ ಮುಳುವಾಗಿದೆ. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ‌ಅತ್ತಿಕಟ್ಟಿ ತಾಂಡಾದಲ್ಲಿ ಈ ಅವಘಡ ಸಂಭವಿಸಿದೆ.

    ಇಲ್ಲಿನ ಸುನಿತಾ ಲಕ್ಷ್ಮಣ ಲಮಾಣಿ (9), ಅಂಕಿತಾ ಲಕ್ಷ್ಮಣ ಲಮಾಣಿ (13), ಸುನಿತಾ ಲೋಕೇಶ್ ಲಮಾಣಿ (10) ಸಾವಿಗೀಡಾದ ಬಾಲಕಿಯರು. ಈ ಪೈಕಿ ಬಾಲಕಿಯೊಬ್ಬಳು ಕೃಷಿ ಹೊಂಡದಲ್ಲಿನ ನೀರು ಕುಡಿಯಲು ಹೋಗಿದ್ದಾಗ ಈ ದುರ್ಘಟನೆ ಸಂಭವಿಸಿದೆ.

    ನೀರು ಕುಡಿಯುತ್ತಿದ್ದ ಬಾಲಕಿ ನೀರಲ್ಲಿ ಮುಳುಗುತ್ತಿರುವುದನ್ನು ನೋಡಿದ ಇನ್ನಿಬ್ಬರು ತಕ್ಷಣ ನೆರವಿಗೆಂದು ಧಾವಿಸಿದ್ದರು. ಆದರೆ ದುರದೃಷ್ಟವಶಾತ್ ಮೂವರೂ ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದಾರೆ. ಸ್ಥಳಕ್ಕೆ ಮುಂಡರಗಿ ತಹಶೀಲ್ದಾರ್​ ಆಶಪ್ಪ ಪೂಜಾರ, ಸಿಪಿಐ ಸುನೀಲ್ ಸೌದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ವಿವಾದಕ್ಕೆ ಕಾರಣವಾಯ್ತು ಸೊಳ್ಳೆ ಸಾಯಿಸುವ ಬ್ಯಾಟ್​!; ಐಎಎಸ್​ ಅಧಿಕಾರಿ ವಿರುದ್ಧ ಕ್ರಿಕೆಟಿಗನ ಅಸಮಾಧಾನ

    ‘ವೀ ಆರ್​ ವಿದ್​ ಯೂ VR..’ ಅಂದ್ರು ಸಲ್ಮಾನ್​ ಖಾನ್​; ಬಹಿರಂಗವಾಯ್ತು ಬಿಗ್​ ಅಸೋಸಿಯೇಷನ್​..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts